ಸೌರವ್ ಗಂಗೂಲಿಗೆ ಮೊದಲ ಸವಾಲು
Team Udayavani, Oct 28, 2019, 12:13 PM IST
ಮುಂಬಯಿ, ಅ. 27: ಬಿಸಿಸಿಐ ಅಧ್ಯಕ್ಷರಾಗಿ ಮೊನ್ನೆ ಮೊನ್ನೆಯಷ್ಟೇ ಆಯ್ಕೆಯಾಗಿರುವ ಸೌರವ್ ಗಂಗೂಲಿಗೆ ಮೊದಲ ದೊಡ್ಡ ಸವಾಲು ಎದುರಾಗಿದೆ.
ನವೆಂಬರ್ ತಿಂಗಳ ಅಂತ್ಯಕ್ಕೆ ಪಾಕಿಸ್ಥಾನ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಭಾರತದಲ್ಲಿಏಕದಿನ ಪಂದ್ಯ ಆಯೋಜಿಸಬೇಕಾದ ಅನಿವಾರ್ಯತೆಯಿದೆ. ಇದಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿಲ್ಲ. ಮತ್ತೂಂದು ಕಡೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ, ಸರಕಾರದ ಲಿಖೀತ ಉತ್ತರವನ್ನು ಸಲ್ಲಿಸಿ ಎಂದು ಬಿಸಿಸಿಐಗೆ ಹೇಳಿದೆ. ಈ ಸಂದರ್ಭವನ್ನು ಗಂಗೂಲಿ ಹೇಗೆ ನಿಭಾಯಿಸುತ್ತಾರೆನ್ನುವುದು ಈಗಿನ ಕುತೂಹಲ.
ವಿಶ್ವಕಪ್ ಅರ್ಹತಾ ಸರಣಿ ಈ ಸರಣಿ ಪಾಕಿಸ್ಥಾನ ವಿರುದ್ಧದ ಮಾಮೂಲು ದ್ವಿಪಕ್ಷೀಯ ಸರಣಿ ಅಲ್ಲ. ಅದು ಐಸಿಸಿಯೇ ಆಯೋಜಿಸಿರುವ ವಿಶ್ವ ಚಾಂಪಿಯನ್ ಶಿಪ್ ವ್ಯಾಪ್ತಿಯಲ್ಲಿ ಬರುತ್ತದೆ. 2021ರ ವಿಶ್ವಕಪ್ಗೆ ಅರ್ಹತಾ ಸರಣಿಯೂ ಹೌದು. ಯಾವುದೇ ವಿಶ್ವಕೂಟಗಳನ್ನು ಆತಿಥೇಯತ್ವಹೊಂದಿದ ದೇಶ ನಿರ್ಲಕ್ಷಿಸುವ ಹಾಗಿಲ್ಲ, ಹಾಗೆಯೇ ಪ್ರವಾಸಿ ತಂಡವೂ ತಕರಾರು ಮಾಡುವಂತಿಲ್ಲ.
ಇಂತಹ ಹೊತ್ತಿನಲ್ಲೇ ಪಾಕಿಸ್ಥಾನದ ವನಿತಾ ತಂಡಕ್ಕೆ ಭಾರತಕ್ಕೆ ಬರಲು ಕೇಂದ್ರ ಸರಕಾರ ಅನುಮತಿ ನೀಡಿಲ್ಲ. ಇನ್ನೊಂದು ಕಡೆ ಭಾರತ ತಿರಸ್ಕರಿಸಿದರೆ, ತಂಡ ಸಂಪೂರ್ಣ ಅಂಕ ಕಳೆದುಕೊಳ್ಳುತ್ತದೆ. ಆಗ 2021ರ ವಿಶ್ವಕಪ್ಗೆ ಅರ್ಹತೆ ಪಡೆಯುವುದು ಕಷ್ಟವಾಗಬಹುದು. ಈ ಇಕ್ಕಟ್ಟಿನ ಸನ್ನಿವೇಶ ಗಂಗೂಲಿಗೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ