ಮಾ. 23 ರಿಂದ ಅಜ್ಲಾನ್ ಶಾ ಕಪ್ ಹಾಕಿ ಭಾರತ ತಂಡ ಪ್ರಕಟ
Team Udayavani, Mar 7, 2019, 12:30 AM IST
ಹೊಸದಿಲ್ಲಿ: ಮಾರ್ಚ್ 23ರಿಂದ ಆರಂಭವಾಗಲಿರುವ “ಅಜ್ಲಾನ್ ಶಾ ಕಪ್’ ಹಾಕಿ ಕೂಟಕ್ಕೆ ಭಾರತ ತಂಡ ಪ್ರಕಟವಾಗಿದ್ದು, ತಂಡ ಯುವ ಆಟಗಾರರಿಂದ ತುಂಬಿಕೊಂಡಿದೆ.
ಯುವ ಆಟಗಾರರನ್ನೊಳಗೊಂಡ 18 ಸದಸ್ಯರ ತಂಡವನ್ನು ಮನ್ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ. ಉಪನಾಯಕನಾಗಿ ಸುರೇಂದರ್ ಕುಮಾರರ ಆಯ್ಕೆಯಾಗಿದ್ದಾರೆ. ಕೂಟ ಆರಂಭವಾಗುವ ಮುನ್ನವೇ ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದ ಕಾರಣ ಯುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ಈ ಕೂಟದಲ್ಲಿ ಭಾರತ, ಆತಿಥೇಯ ಮಲೇಶ್ಯ ಸಹಿತ ಕೆನಡ, ಕೊರಿಯಾ, ದಕ್ಷಿಣ ಆಫ್ರಿಕಾ, ಜಪಾನ್ ತಂಡಗಳು ಪಾಲ್ಗೊಳ್ಳಲಿವೆ. ಭಾರತ ಮಾ. 23ರಂದು ಮೊದಲ ಪಂದ್ಯವನ್ನಾಡಲಿದ್ದು ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜಪಾನ್ ತಂಡವನ್ನು ಎದುರಿಸಲಿದೆ.
ಫಾರ್ವರ್ಡ್ ಆಟಗಾರರಾದ ಎಸ್. ವಿ. ಸುನಿಲ್, ಆಕಾಶ್ದೀಪ್ ಸಿಂಗ್, ರಮಣ್ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ಡಿಫೆಂಡರ್ಗಳಾದ ರೂಪಿಂದರ್ ಪಾಲ್ ಸಿಂಗ್, ಹರ್ಮನ್ಪ್ರೀತ್ ಸಿಂಗ್ ಹಾಗೂ ಮಿಡ್ಫಿàಲ್ಡರ್ ಚಿಂಗ್ಲೆಸಾನಾ ಸಿಂಗ್ ಗಾಯಾಳಾಗಿ ತಂಡದಿಂದ ಹೊರಗುಳಿದಿದ್ದಾರೆ. ಇವರೆಲ್ಲರ ಅನುಪಸ್ಥಿತಿ ಭಾರತಕ್ಕೆ ಸಮಸ್ಯೆಯಾಗಿ ಕಾಡಲಿದೆ. ಇವರೊಂದಿಗೆ ಕಿರಿಯ ಆಟಗಾರರಾದ ವಿಶಾಲ್ ಅಂಟಿಲ್ ಮತ್ತು ಪ್ರದೀಪ್ ಸಿಂಗ್ ಕೂಡ ಗಾಯದಿಂದಾಗಿ ಕೂಟವನ್ನು ತಪ್ಪಿಸಿಕೊಂಡಿದ್ದಾರೆ.
“ಪ್ರಮುಖ ಆಟಗಾರರು ಗಾಯಾಳಾಗಿರುವುದು ದುರದೃಷ್ಟಕರ.ಅವರೆಲ್ಲ ಮುಂಬರುವ ಎಫ್ಐಎಚ್ ಸೀರೀಸ್ ಫೈನಲ್ ಮುನ್ನ ಫಿಟ್ನೆಸ್ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಈ ಕೂಟ 2020 ಒಲಿಂಪಿಕ್ಸ್ಗೆ ಅರ್ಹತಾ ಕೂಟವಾಗಿದೆ. ಇದಕ್ಕಾಗಿ ಅವರೆಲ್ಲ ಬೆಂಗಳೂರಿನ ಸಾಯ್ನಲ್ಲಿ ತರಬೇತಿ ಮುಂದುವರಿಸಲಿದ್ದಾರೆ. ಅಜ್ಲಾನ್ ಶಾ ಕೂಟಕ್ಕಾಗಿ ತಯಾರಾಗಿರುವ ಭಾರತ ಯುವ ಆಟಗಾರರನ್ನು ಒಳಗೊಂಡಿದೆ’ ಎಂದು ಭಾರತದ ಹಾಕಿ ಫೆಡರೇಶನ್ನ ಉನ್ನತ ಪ್ರದರ್ಶನ ಅಧ್ಯಕ್ಷ ಡೇವಿಡ್ ಜಾನ್ ಹೇಳಿದ್ದಾರೆ.
ಭಾರತ ತಂಡ
ಗೋಲ್ಕೀಪರ್: ಪಿ. ಆರ್. ಶ್ರೀಜೇಶ್, ಕೃಷ್ಣ ಬಿ ಪಾತಾಕ್ ಡಿಫೆಂಡರ್: ಗುರೀಂದರ್ ಸಿಂಗ್, ಸುರೇಂದರ್ ಕುಮಾರ್, ವರುಣ್ ಕುಮಾರ್, ಬಿರೇಂದ್ರ ಲಾಕ್ರಾ, ಅಮಿತ್ ರೋಹಿದಾಸ್, ಕೊತಾಜಿತ್ ಸಿಂಗ್
ಮಿಡ್ಫಿಲ್ಡರ್: ಹಾರ್ದಿಕ್ ಸಿಂಗ್, ನೀಲಕಂಠ ಶರ್ಮ, ಸಮೀತ್, ವಿವೇಕ್ ಸಾಗರ್ ಪ್ರಸಾದ್, ಮನ್ಪ್ರೀತ್ ಸಿಂಗ್
ಫಾರ್ವಡರ್: ಮನ್ದೀಪ್ ಸಿಂಗ್, ಸಿಮ್ರಾನ್ಜಿàತ್ ಸಿಂಗ್, ಗುರ್ಜಾಂತ್ ಸಿಂಗ್, ಶಿಲಾನಂದ್ ಲಾಕ್ರಾ, ಸುಮೀತ್ ಕುಮಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?