ಸುಶೀಲ್ ಗೂಂಡಾಗಳನ್ನು ಕರೆತಂದಿದ್ದರು!
Team Udayavani, May 28, 2021, 6:36 AM IST
ಹೊಸದಿಲ್ಲಿ: ಕುಸ್ತಿಪಟು ಸಾಗರ್ ದಂಖರ್ ಸಾವಿನ ಪ್ರಕರಣ ದಲ್ಲಿ ವಿಶ್ವವಿಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ನೇರ ಪಾತ್ರವಿದೆ ಎಂದು ದಿಲ್ಲಿ ಪೊಲೀಸರು ಮತ್ತೂಮ್ಮೆ ಹೇಳಿದ್ದಾರೆ.
ದಂಖರ್ ಹತ್ಯೆಯಾಗಿದ್ದ ವೇಳೆ ಛತ್ರಸಾಲ ಮೈದಾನಕ್ಕೆ ಭೂಗತ ಪಾತಕಿಗಳನ್ನು ಸುಶೀಲ್ ಕರೆ ತಂದಿದ್ದರು, ಇದನ್ನು ಪಾತಕಿಗಳೇ ಒಪ್ಪಿಕೊಂಡಿದ್ದಾರೆ. ಪೊಲೀಸರು ಬಂದ ಬಳಿಕ ತಮ್ಮಲ್ಲಿದ್ದ ಮಾರಕಾಸ್ತ್ರ ಹಾಗೂ ಕಾರುಗಳನ್ನು ಅಲ್ಲಿಯೇ ಬಿಟ್ಟು ಎಲ್ಲರೂ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಾಧ್ಯಮಗಳಿಗೆ ಕಡಿವಾಣ :
ಸುಶೀಲ್ ಕುಮಾರ್ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಉತ್ಪ್ರೇಕ್ಷಿತ ವರದಿಗಳು ಬರುತ್ತಿವೆ. ಅದನ್ನು ತಡೆಯಬೇಕು ಎಂದು ಕಾನೂನು ವಿದ್ಯಾರ್ಥಿಯೊಬ್ಬ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಇದರ ವಿಚಾರಣೆಗೆ ನ್ಯಾಯಪೀಠ ಸಮ್ಮತಿಸಿದೆ.