T20 Worldcup: ಪಾಕಿಸ್ಥಾನಕ್ಕೆ ಉಭಯಸಂಕಟ… ಗೆದ್ದರೂ ಹಾದಿ ದುರ್ಗಮ


Team Udayavani, Jun 11, 2024, 10:21 AM IST

T20 Worldcup: ಪಾಕಿಸ್ಥಾನಕ್ಕೆ ಉಭಯಸಂಕಟ… ಗೆದ್ದರೂ ಹಾದಿ ದುರ್ಗಮ

ನ್ಯೂಯಾರ್ಕ್‌: ಅಮೆರಿಕ ಮತ್ತು ಭಾರತದ ಕೈಯಲ್ಲಿ ಸೋಲಿನೇಟು ತಿಂದಿರುವ ಪಾಕಿಸ್ಥಾನದ ಸ್ಥಿತಿ ಈಗ ಚಿಂತಾಜನಕವಾಗಿದೆ. ಬಾಬರ್‌ ಪಡೆಯ ಮೇಲೆ ಎಲ್ಲ ದಿಕ್ಕುಗಳಿಂದಲೂ ಒತ್ತಡ ಬಿದ್ದಿದೆ. ಮಂಗಳವಾರ ಗಡಗಡ ಎನ್ನುತ್ತಲೇ ಕೆನಡಾವನ್ನು ಎದುರಿಸಲಿದ್ದು, ಇದನ್ನು ಹಾಗೂ ಮುಂದಿನ ಐರ್ಲೆಂಡ್‌ ಎದುರಿನ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದರಷ್ಟೇ ಪಾಕ್‌ ಸೂಪರ್‌-8 ರೇಸ್‌ನಲ್ಲಿ ಉಳಿಯಲಿದೆ ಎಂಬುದು ಸದ್ಯದ ಸ್ಥಿತಿ.

ಇಷ್ಟೇ ಸಾಲದು. ಈ ನಡುವೆ ಬುಧವಾರ ಭಾರತ-ಅಮೆರಿಕ ಎದುರಾ ಗಲಿದ್ದು, ಇಲ್ಲಿ ಗೆದ್ದ ತಂಡಕ್ಕೆ ಮುಂದಿನ ಸುತ್ತಿನ ಟಿಕೆಟ್‌ ಪಕ್ಕಾ ಆಗಲಿದೆ. ಒಂದು ವೇಳೆ ಭಾರತ ಗೆದ್ದರೆ, ಅಮೆರಿಕ ತನ್ನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್‌ಗೆ ಸೋಲುಣಿಸಿದರೆ ಆಗ ಪಾಕಿಸ್ಥಾನದ ಕತೆ ಮುಗಿಯಲಿದೆ.

ಪಾಕಿಸ್ಥಾನದ ಮುಂದಿರುವ ಒಂದು ಕ್ಷೀಣ ಅವಕಾಶವೆಂದರೆ, ಅಮೆರಿಕ ಉಳಿದೆಡರಡೂ ಪಂದ್ಯಗಳಲ್ಲಿ ದೊಡ್ಡ ಸೋಲನುಭವಿಸುವುದು, ಪಾಕ್‌ ಎರಡನ್ನೂ ಭಾರೀ ಅಂತರದಿಂದ ಗೆಲ್ಲುವುದು. ಆಗ ಎರಡೂ ತಂಡಗಳ ಅಂಕ ಸಮನಾಗಲಿದ್ದು (ತಲಾ 4), ರನ್‌ರೇಟ್‌ ಗಣನೆಗೆ ಬರಲಿದೆ. ಸದ್ಯ ಅಮೆರಿಕ +0.626ರಷ್ಟು ಉತ್ಕೃಷ್ಟ ನೆಟ್‌ ರನ್‌ರೇಟ್‌ ಹೊಂದಿದ್ದು, ಪಾಕಿಸ್ಥಾನ ಕೇವಲ -0.150 ನೆಟ್‌ ರನ್‌ರೇಟ್‌ ಹೊಂದಿದೆ. ಇಲ್ಲಿಯೂ ಬಾಬರ್‌ ಪಡೆಗೆ ಭಾರೀ ಹಿನ್ನಡೆಯಾಗಿದೆ.

ಅಕಸ್ಮಾತ್‌ ಮಂಗಳವಾರ ರಾತ್ರಿ ಕೆನಡಾ ವಿರುದ್ಧ ಸೋತರೆ ಯಾವ ಲೆಕ್ಕಾಚಾರವೂ ಅಗತ್ಯ ಬೀಳದು. ಆಗ ಪಾಕಿಸ್ಥಾನ ಹ್ಯಾಟ್ರಿಕ್‌ ಸೋಲು ಹೊತ್ತು ನೇರವಾಗಿ ನಿರ್ಗಮಿಸಲಿದೆ.

ಭರವಸೆ ಮೂಡಿಸದ ಆಟ
2009ರ ಚಾಂಪಿಯನ್‌ ಆಗಿರುವ ಪಾಕಿಸ್ಥಾನ, ಈ ಬಾರಿ ಯಾವ ವಿಭಾಗ ದಲ್ಲೂ ಭರವಸೆಯ ಪ್ರದರ್ಶನ ನೀಡಿಲ್ಲ. ಭಾರತದೆದುರು ಬೌಲಿಂಗ್‌ನಲ್ಲಿ ಮಿಂಚಿದ್ದೊಂದೇ ಗಮನಾರ್ಹ ಸಾಧನೆ. ಇಲ್ಲಿ ನಸೀಮ್‌ ಶಾ ಮತ್ತು ಆಮಿರ್‌ ಉತ್ತಮ ನಿರ್ವಹಣೆಗೈದಿದ್ದರು. ಆದರೆ ಪ್ರಧಾನ ವೇಗಿ ಶಾಹೀನ್‌ ಶಾ ಅಫ್ರಿದಿ ಕ್ಲಿಕ್‌ ಆಗಿಲ್ಲ.

ಇತ್ತ ಕೆನಡಾ “ಎ’ ವಿಭಾಗದಲ್ಲಿ 3ನೇ ಸ್ಥಾನದಲ್ಲಿದೆ. ಅಮೆರಿಕಕ್ಕೆ 7 ವಿಕೆಟ್‌ಗಳಿಂದ ಸೋತ ಬಳಿಕ ಐರ್ಲೆಂಡ್‌ಗೆ 12 ರನ್ನುಗಳ ಸೋಲುಣಿಸಲು ಯಶಸ್ವಿಯಾಗಿದೆ. ಆದರೆ ಅಮೆರಿಕ ವಿರುದ್ಧ ಕೆನಡಾ 194 ರನ್‌ ಪೇರಿಸಿದ್ದನ್ನು ಮರೆ ಯುವಂತಿಲ್ಲ ಕೆನಡಾ ಕಳೆದುಕೊಳ್ಳುವಂಥ ದ್ದೇನೂ ಇಲ್ಲವಾದ ಕಾರಣ ಪಾಕ್‌ ವಿರುದ್ಧ ಬಿಂದಾಸ್‌ ಆಟವಾಡೀತು.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.