ಟೆಸ್ಟ್‌: ಓವರ್‌ ಮುಗಿದ ಮೇಲೆ 45 ಸೆಕೆಂಡ್‌ ಅಂತರ


Team Udayavani, Mar 14, 2019, 12:30 AM IST

test-match-s.jpg

ಬೆಂಗಳೂರು: ಟೆಸ್ಟ್‌ ಕ್ರಿಕೆಟ್‌ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಕಾರಣ, ಅದನ್ನು ಉಳಿಸಿಕೊಳ್ಳಲು ಅಂತಾರಾಷ್ಟ್ರೀಯ  ಕ್ರಿಕೆಟ್‌ ಸಂಸ್ಥೆ ಹಲವು ಯತ್ನಗಳನ್ನು ಮಾಡುತ್ತಿದೆ. ಇದೇ ವರ್ಷ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಶುರುವಾಗುತ್ತಿರುವ ಕಾರಣ, ಅಲ್ಲೇ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲು, ಮೆರಿಲ್‌ಬಾನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಕೆಲವು ಶಿಫಾರಸುಗಳನ್ನು ಮಾಡಿದೆ. ಈ ಸಂಸ್ಥೆ ರೂಪಿಸಿದ ನಿಯಮಗಳನ್ನೇ ಐಸಿಸಿ ಇದುವರೆಗೆ ಅಳವಡಿಸಿಕೊಂಡು ಬಂದಿದೆ.

ಬೆಂಗಳೂರಿನಲ್ಲೇ ಇತ್ತೀಚೆಗೆ ಎಂಸಿಸಿ ಸಭೆ ನಡೆದಿತ್ತು. ಇಂಗ್ಲೆಂಡ್‌ನ‌ ಮಾಜಿ ಕ್ರಿಕೆಟಿಗ ಮೈಕ್‌ ಗ್ಯಾಟಿಂಗ್‌, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಸೇರಿದಂತೆ ಹಲವು ದಿಗ್ಗಜರು ಸೇರಿ ಹಲವು ಶಿಫಾರಸುಗಳನ್ನು ಮಾಡಿದ್ದಾರೆ.

ಶಿಫಾರಸುಗಳಲ್ಲೇನಿದೆ?
1. ಪ್ರತಿ ಓವರ್‌ ಮುಗಿದ ಮೇಲೆ ಮತ್ತೂಂದು ಓವರ್‌ ಶುರು ಮಾಡಲು 45 ಸೆಕೆಂಡ್‌ಗಳ ನಿರ್ದಿಷ್ಟ ಅಂತರಕ್ಕೆ ಆದ್ಯತೆ. ಇದು ಮುಗಿದ ಮೇಲೆ ಎರಡೂ ತಂಡಗಳಿಗೆ ತತ್‌ಕ್ಷಣ ಎಚ್ಚರಿಕೆ. ಸಿದ್ಧವಾಗಿಲ್ಲದ ತಂಡಕ್ಕೆ 5  ರನ್‌ಗಳ ದಂಡ ವಿಧಿಸುವುದು. ಓವರ್‌ ನಡುವಿನ ಅಂತರವನ್ನು ಹೊಸ ಬ್ಯಾಟ್ಸ್‌ಮನ್‌ ಕ್ರೀಸ್‌ಗೆ ಬಂದಿದ್ದರೆ 60 ಸೆಕೆಂಡ್‌, ಬೌಲರ್‌ ಬದಲಾಯಿಸಬೇಕಿದ್ದರೆ 80 ಸೆಕೆಂಡ್‌ಗೆ ಹೆಚ್ಚಿಸಲು ಅವಕಾಶ.
2. ಬ್ಯಾಟ್ಸ್‌ಮನ್‌ ಔಟಾದ ಕೂಡಲೇ ಇನ್ನೊಬ್ಬ ಬ್ಯಾಟ್ಸ್‌ಮನ್‌ ಕ್ರೀಸ್‌ಗೆ ಬರಲು ನಿರ್ದಿಷ್ಟ ಸಮಯ ರೂಪಿಸುವುದು.
3. ಡಿಆರ್‌ಎಸ್‌ನಲ್ಲಿ ನಿರ್ದಿಷ್ಟ ಸಮಯಪರಿಪಾಲನೆ ಶಿಷ್ಟಾಚಾರವನ್ನು ತೆಗೆದುಹಾಕುವುದು. ಕೆಲವೊಮ್ಮೆ ತಾಂತ್ರಿಕ ಕೇಂದ್ರದವರಿಗೆ ಬ್ಯಾಟ್ಸ್‌ಮನ್‌ ಔಟ್‌ ಎನ್ನುವುದು ಕೂಡಲೇ ಗೊತ್ತಾಗಿರುತ್ತದೆ, ಆಗ ಅವರು ಸಮಯವಾಗುವುದಕ್ಕೆ ಕಾಯದೇ ತಕ್ಷಣ ಟೀವಿ ಅಂಪಾಯರ್‌ಗೆ ತಿಳಿಸಲು ಅವಕಾಶ ನೀಡುವುದು.
4. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎಲ್ಲ ದೇಶಗಳಲ್ಲಿ ಒಂದೇ ರೀತಿಯ ಚೆಂಡು ಬಳಸಲು ಆದ್ಯತೆ ನೀಡುವುದು. ಈಗ ಭಾರತದಲ್ಲಿ ಎಸ್‌ಜಿ, ಆಸ್ಟ್ರೇಲಿಯದಲ್ಲಿ ಕುಕಾಬುರಾ, ಇಂಗ್ಲೆಂಡ್‌ ಡ್ನೂಕ್‌ಗಳನ್ನು ಉಪಯೋಗಿಸಲಾಗುತ್ತದೆ. ಅದರ ಬದಲು ಏಕರೀತಿಯ ಚೆಂಡಿನ ಬಳಕೆ.
5. ಏಕದಿನ, ಟಿ20ಯಲ್ಲಿ ನೋಬಾಲ್‌ ಎಸೆತದಲ್ಲಿ ಮುಂದಿನ ಎಸೆತದಲ್ಲಿ ಫ್ರೀಹಿಟ್‌ ಅವಕಾಶ ನೀಡಲಾಗುತ್ತದೆ. ಅಂತಹದ್ದೇ ಅವಕಾಶವನ್ನು ಟೆಸ್ಟ್‌ ನೀಡಲು ಚಿಂತನೆ. ಇದರಿಂದ ಪದೇ ಪದೇ ನೋಬಾಲ್‌ ಮಾಡುವುದನ್ನು ತಡೆಯಬಹುದು.

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.