Test; ಆಸೀಸ್‌ ಕುಸಿತ, ಆದರೂ ಸುರಕ್ಷಿತ: ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಅಂಪಾಯರ್‌!


Team Udayavani, Dec 28, 2023, 11:59 PM IST

1–adasd

ಮೆಲ್ಬರ್ನ್: ಬಾಕ್ಸಿಂಗ್‌ಡೇ ಟೆಸ್ಟ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯ ಕುಸಿತ ಅನುಭವಿಸಿದರೂ ಸುರಕ್ಷಿತವಾಗಿದೆ. 3ನೇ ದಿನದಾಟದ ಅಂತ್ಯಕ್ಕೆ ಆಸೀಸ್‌ 6 ವಿಕೆಟಿಗೆ 187 ರನ್‌ ಗಳಿಸಿದ್ದು, 241 ರನ್ನುಗಳ ಮುನ್ನಡೆಯಲ್ಲಿದೆ.

ಶಾಹೀನ್‌ ಶಾ ಅಫ್ರಿದಿ ಮತ್ತು ಮಿರ್‌ ಹಮ್ಜಾ ಬೌಲಿಂಗ್‌ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯ 16 ರನ್‌ ಮಾಡುವಷ್ಟರಲ್ಲಿ 4 ವಿಕೆಟ್‌ ಕಳೆದು ಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು. ಆದರೆ ಮಿಚೆಲ್‌ ಮಾರ್ಷ್‌ ಮತ್ತು ಸ್ಟೀವನ್‌ ಸ್ಮಿತ್‌ ಅವರ 153 ರನ್‌ ಜತೆಯಾಟದ ನೆರವಿನಿಂದ ಚೇತರಿಕೆ ಕಂಡಿತು.

ಮಿಚೆಲ್‌ ಮಾರ್ಷ್‌ 96 ಮತ್ತು ಸ್ಟೀವನ್‌ ಸ್ಮಿತ್‌ 50 ರನ್‌ ಬಾರಿಸಿ ತಂಡವನ್ನು ದೊಡ್ಡ ಅಪಾಯದಿಂದ ಪಾರುಮಾಡಿದರು. ತಂಡದ ಕುಸಿತವನ್ನೂ ಲೆಕ್ಕಿಸದೆ ಬಿರುಸಿನ ಆಟವಾಡಿದ ಮಾರ್ಷ್‌ ಶತಕದತ್ತ ದೌಡಾಯಿಸಿದರು. ಆದರೆ ನೂರರ ಗಡಿ ಮುಟ್ಟಲು ಇನ್ನೇನು 4 ರನ್‌ ಬೇಕಿದೆ ಎನ್ನುವಾಗ ಮಿರ್‌ ಹಮ್ಜಾ ಮೋಡಿಗೆ ಸಿಲುಕಿದರು. ಮಾರ್ಷ್‌ ಅವರ 130 ಎಸೆತಗಳ ಇನ್ನಿಂಗ್ಸ್‌ ನಲ್ಲಿ 13 ಬೌಂಡರಿ ಸೇರಿತ್ತು. ದಿನದ ಕೊನೆಯ ಓವರ್‌ನಲ್ಲಿ ಔಟಾದ ಸ್ಮಿತ್‌ ಕೊಡುಗೆ ಭರ್ತಿ 50 ರನ್‌. 176 ಎಸೆತಗಳ ಈ ಆಪತ್ಕಾಲದ ಆಟದಲ್ಲಿ ಕೇವಲ 3 ಬೌಂಡರಿ ಸೇರಿತ್ತು. ಅಲೆಕ್ಸ್‌ ಕ್ಯಾರಿ 16 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಉಸ್ಮಾನ್‌ ಖ್ವಾಜಾ ಅವರನ್ನು 2ನೇ ಎಸೆತದಲ್ಲೇ ಕಳೆದುಕೊಂಡಿತು. ಅವರು ಖಾತೆಯನ್ನೇ ತೆರೆಯಲಿಲ್ಲ. ಮಾರ್ನಸ್‌ ಲಬುಶೇನ್‌ (4), ಡೇವಿಡ್‌ ವಾರ್ನರ್‌ (6) ಮತ್ತು ಟ್ರ್ಯಾವಿಸ್‌ ಹೆಡ್‌ (0) ವಿಕೆಟ್‌ ಪಟಪಟನೆ ಉರುಳಿತು. ಅಫ್ರಿದಿ ಮತ್ತು ಹಮ್ಜಾ ತಲಾ 3 ವಿಕೆಟ್‌ ಕೆಡವಿದರು.

ಇದಕ್ಕೂ ಮುನ್ನ 6ಕ್ಕೆ 194 ರನ್‌ ಮಾಡಿದ್ದ ಪಾಕಿಸ್ಥಾನ ಗುರುವಾರದ ಆಟ ಮುಂದುವರಿಸಿ 264ಕ್ಕೆ ಆಲೌಟ್‌ ಆಯಿತು. ಮೊಹಮ್ಮದ್‌ ರಿಜ್ವಾನ್‌ 42, ಆಮೀರ್‌ ಜಮಾಲ್‌ 33, ಅಫ್ರಿದಿ 21 ರನ್‌ ಮಾಡಿದರು.
ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ -316 ಮತ್ತು 6 ವಿಕೆಟಿಗೆ 187 (ಮಾರ್ಷ್‌ 96, ಸ್ಮಿತ್‌ 50, ಹಮ್ಜಾ 27ಕ್ಕೆ 3, ಅಫ್ರಿದಿ 58ಕ್ಕೆ 3). ಪಾಕಿಸ್ಥಾನ-264 (ಶಫೀಕ್‌ 62, ಮಸೂದ್‌ 54, ರಿಜ್ವಾನ್‌ 42, ಜಮಾಲ್‌ 33, ಕಮಿನ್ಸ್‌ 48ಕ್ಕೆ 5, ಲಿಯಾನ್‌ 73ಕ್ಕೆ 4).

ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಅಂಪಾಯರ್‌!

ಕ್ರಿಕೆಟ್‌ ಪಂದ್ಯಗಳು ನಾನಾ ಕಾರಣಗಳಿಂದ ವಿಳಂಬಗೊಂಡಿದ್ದನ್ನು ಕೇಳಿದ್ದೇವೆ. ಇದರ ಹಿಂದೆ ಸ್ವಾರಸ್ಯಕರ ಸಂಗತಿಗಳೂ ಅಡಗಿವೆ. ಇಂಥದೇ ಒಂದು ವಿದ್ಯಮಾನ ಆಸ್ಟ್ರೇಲಿಯ-ಪಾಕಿಸ್ಥಾನ ಟೆಸ್ಟ್‌ ಪಂದ್ಯದ ಗುರುವಾರದ ಭೋಜನ ವಿರಾಮದ ವೇಳೆ ಸಂಭವಿಸಿತು. ಪಂದ್ಯದ ತೃತೀಯ ಅಂಪಾಯರ್‌ ಲಿಫ್ಟ್ನಲ್ಲಿ ಸಿಕ್ಕಿಹಾಕಿಕೊಂಡ ಕಾರಣ ಪಂದ್ಯ ಕೆಲವು ನಿಮಿಷ ತಡವಾಗಿ ಆರಂಭಗೊಂಡಿತು.

ಆಟಗಾರರು ಹಾಗೂ ಫೀಲ್ಡ್‌ ಅಂಪಾಯರ್‌ಗಳಾದ ಮೈಕಲ್‌ ಗಾಫ್, ಜೋಯೆಲ್‌ ವಿಲ್ಸನ್‌ ಲಂಚ್‌ ಮುಗಿಸಿ ಅಂಗಳಕ್ಕಿಳಿದರು. ಬೌಲರ್‌ ಬೌಲಿಂಗ್‌ ಆರಂಭಿಸಬೇಕು ಎನ್ನುವಾಗಿ ತೃತೀಯ ಅಂಪಾಯರ್‌ ಕಾಣದಿರುವುದು ಗಮನಕ್ಕೆ ಬಂತು. ಆಗ ದಿಢೀರ್‌ ವಿರಾಮ ಘೋಷಿಸಲಾಯಿತು. ಬಳಿಕ ಅಂಪಾಯರ್ ವಿಷಯ ತಿಳಿಸಿದರು.
“ತೃತೀಯ ಅಂಪಾಯರ್‌ ರಿಚರ್ಡ್‌ ಇಲ್ಲಿಂಗ್‌ವರ್ತ್‌ ಲಿಫ್ಟ್ನಲ್ಲಿ ಸಿಕ್ಕಿಹಾಕಿಕೊಂಡಿರುವುರಿಂದ ಇನ್ನೂ ತಮ್ಮ ಕ್ಯಾಬಿನ್‌ಗೆ ಬಂದಿಲ್ಲ. ಹೀಗಾಗಿ ಆಟ ಸ್ವಲ್ಪ ವಿಳಂಬಗೊಳ್ಳಲಿದೆ’ ಎಂದರು. ಬಳಿಕ ವೀಕ್ಷಕ ವಿವರಣಕಾರರೂ ಸುದ್ದಿಯನ್ನು ಬಿತ್ತರಿಸಿದರು. “ಕ್ರಿಕೆಟ್‌ ಆಸ್ಟ್ರೇಲಿಯ’ ಕೂಡ “ಎಕ್ಸ್‌’ನಲ್ಲಿ ಈ ಘಟನೆಯನ್ನು ಪೋಸ್ಟ್‌ ಮಾಡಿತು. ಲಿಫ್ಟ್ನ ತಾಂತ್ರಿಕ ದೋಷವೇ ಇದಕ್ಕೆ ಕಾರಣ.

ಕೆಲವೇ ಕ್ಷಣದಲ್ಲಿ ತಮ್ಮ ಇಲ್ಲಿಂಗ್‌ವರ್ತ್‌ ತಮ್ಮ ಕ್ಯಾಬಿನ್‌ಗೆ ಮರಳಿದರು. ಕ್ಯಾಮರಾಗಳೆಲ್ಲ ಇವರತ್ತಲೇ ಫೋಕಸ್‌ ಮಾಡುತ್ತಿದ್ದಾಗ ಆಟಗಾರರು, ವೀಕ್ಷಕರೆಲ್ಲ ನಗುವಿನ ಅಲೆಯಲ್ಲಿ ತೇಲಾಡಿದರು. ಇದಕ್ಕೆ ಸಂಬಂಧಿಸಿದ ಬಗೆಬಗೆಯ ಮೀಮ್ಸ್‌ಗಳೂ ಜಾಲತಾಣದಲ್ಲಿ ಹರಿದಾಡಿದವು.

ಟಾಪ್ ನ್ಯೂಸ್

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.