ಕರುಣ್ ನಾಯರ್ಗಾಗಿ ರಹಾನೆಯನ್ನು ಹೊರಗಿಡುವ ಪ್ರಶ್ನೆಯೇ ಇಲ್ಲ
Team Udayavani, Mar 3, 2017, 12:04 PM IST
ಬೆಂಗಳೂರು: ಕರುಣ್ ನಾಯರ್ ಅವರ ಒಂದು ತ್ರಿಶತಕ ಎನ್ನುವುದು ಅಜಿಂಕ್ಯ ರಹಾನೆಯವರ 2 ವರ್ಷಗಳ ಯಶಸ್ಸನ್ನು ಮಸುಕಾಗಿ ಸದು ಎಂಬುದಾಗಿ ಟೀಮ್ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ನಡೆಯ ಲಿರುವ ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ತವರಿನ ನಾಯರ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದೂರಾಗಿದೆ.
“ಅನುಭವಿ ರಹಾನೆಯನ್ನು ತಂಡದಿಂದ ಹೊರಗಿರಿಸುವ ಪ್ರಶ್ನೆಯೇ ಇಲ್ಲ. ಕಳೆದೆರಡು ಋತುಗಳಲ್ಲಿ ಅವರು ಉತ್ತಮ ಯಶಸ್ಸು ಕಾಣುತ್ತ ಬಂದಿದ್ದಾರೆ. ಇಷ್ಟಕ್ಕೂ ತಂಡದ ಕಾಂಬಿನೇಶನ್ ಬಗ್ಗೆ ನಾವಿನ್ನೂ ಚರ್ಚೆಯನ್ನೇ ನಡೆಸಿಲ್ಲ. ಎಲ್ಲ 16 ಮಂದಿ ಆಟಗಾರರೂ ಆಯ್ಕೆಗೆ ಲಭ್ಯರಿದ್ದಾರೆ’ ಎಂದು ಕುಂಬ್ಳೆ ಗುರುವಾರ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ತ್ರಿಶತಕ ಬಾರಿಸಿದ ಬಳಿಕವೂ ಕರುಣ್ ನಾಯರ್ ಹನ್ನೊಂದರ ಬಳಗದಿಂದ ಹೊರಗುಳಿಯಬೇಕಾದದ್ದು ನಿಜಕ್ಕೂ ದುರದೃಷ್ಟ. ಆದರೆ ನಾವೀಗ 5 ಮಂದಿ ಸ್ಪೆಷಲಿಸ್ಟ್ ಬೌಲರ್ಗಳನ್ನು ಆಡಿಸುವುದರಿಂದ ಹೆಚ್ಚು ವರಿ ಬ್ಯಾಟ್ಸ್ಮನ್ ಸೇರ್ಪಡೆ ಸಾಧ್ಯವಾಗುತ್ತಿಲ್ಲ. ಆದರೆ ತಂಡದಲ್ಲಿ ಇಂಥ ಆಯ್ಕೆಗಳಿಗೆ ಅವಕಾಶ ಹಾಗೂ ಸ್ಪರ್ಧೆ ಇರುವುದು ಒಳ್ಳೆಯ ಲಕ್ಷಣ…’ ಎಂದರು.
ಹಾಗಾದರೆ ಬೆಂಗಳೂರು ಟೆಸ್ಟ್ ನಲ್ಲೂ ಐವರು ಸ್ಪೆಷಲಿಸ್ಟ್ ಬೌಲರ್ ಗಳಿರುವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿ ಸಿದ ಕುಂಬ್ಳೆ, “ಸೂಕ್ತ ಕಾಂಬಿನೇಶನ್’ ನೊಂದಿಗೆ ಹೋರಾಟಕ್ಕಿಳಿಯಲಿದ್ದೇವೆ. ನಮಗೆ ಪಂದ್ಯ ಗೆಲ್ಲುವುದು ಮುಖ್ಯ’ ಎಂದರು.
ಫಲಿತಾಂಶ ತರುವ ಪಿಚ್
ಬೆಂಗಳೂರು ಪಿಚ್ ಹೇಗೆ ಎಂಬ ಪ್ರಶ್ನೆ ಕರ್ನಾಟಕದ ಮಾಜಿ ಕ್ರಿಕೆಟಿಗನಿಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಕುಂಬ್ಳೆ, “ಪ್ರಾಮಾಣಿಕವಾಗಿ ಹೇಳ ಬೇಕೆಂದರೆ ನನಗೆ ಚಿನ್ನಸ್ವಾಮಿ ಪಿಚ್ ಬಗ್ಗೆ ಹೆಚ್ಚು ತಿಳಿದಿಲ್ಲ. ನಾನು ಈ ಅಂಗಳದಲ್ಲೇ ಆಡಿ ಬೆಳೆದವನು. ಇದೊಂದು ಉತ್ತಮ ಬ್ಯಾಟಿಂಗ್ ಟ್ರ್ಯಾಕ್. ಇಲ್ಲಿ ಖಂಡಿತ ಫಲಿತಾಂಶ ಲಭಿಸಲಿದೆ. ನನ್ನ ಬೌಲಿಂಗ್ ಯಶಸ್ಸು ಹಾಗೂ ಪಿಚ್ ಪಾತ್ರದ ಬಗ್ಗೆ ಜನರು ಸಾಕಷ್ಟು ಹೇಳಿದ್ದಿದೆ. ಆದರೆ ನಾನು ಆಡುತ್ತಿದ್ದ ಕಾಲದಲ್ಲಿ ಪಿಚ್ ಬಗ್ಗೆ ಯೋಚಿಸಿದವನೇ ಅಲ್ಲ. ಆದರೆ ಒಮ್ಮೆ ಪಿಚ್ ನೋಡಿದಾಕ್ಷಣ ಯಾವ ರೀತಿಯ ಕಾರ್ಯತಂತ್ರ ರೂಪಿಸಬೇಕು ಎಂಬುದನ್ನು ಯೋಚಿಸುತ್ತಿದ್ದೆವು. ಇಂಥ ಪಿಚ್ ತಿಳಿವಳಿಕೆ ಬಹಳ ಮುಖ್ಯ…’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ