ಥಾಯ್ಲೆಂಡ್ ಓಪನ್: ಭಾರತಕ್ಕೆ ನಿರಾಶೆ
Team Udayavani, Jan 15, 2021, 6:29 AM IST
ಬ್ಯಾಂಕಾಕ್ : “ಯೋನೆಕ್ಸ್ ಥಾಯ್ಲೆಂಡ್ ಓಪನ್ ಸೂಪರ್ 1000′ ಕೂಟದಲ್ಲಿ ಗುರುವಾರ ಭಾರತಕ್ಕೆ ನಿರಾಶೆಯೇ ಕಾದಿತ್ತು. ಸೈನಾ ನೆಹ್ವಾಲ್, ಚಿರಾಗ್-ಸಾತ್ವಿಕ್ ಜೋಡಿ ಸೋಲನುಭವಿಸಿದರೆ ಕೆ. ಶ್ರೀಕಾಂತ್ ಗಾಯಾಳಾಗಿ ಕೂಟದಿಂದ ನಿರ್ಗಮಿಸಿದರು.
ದ್ವಿತೀಯ ಸುತ್ತಿನಲ್ಲಿ ಸೈನಾ ನೆಹ್ವಾಲ್ ಥಾಯ್ಲೆಂಡ್ನ ಬುಸಾನನ್ ಒಂಗ್ಬಾಮುಂಗ್ಝನ್ ವಿರುದ್ಧ 23-21, 14-21, 16-21 ಅಂತರದಿಂದ ಪರಾಭವಗೊಂಡರು. ಇದು ಸೈನಾಗೆ ಬುಸಾನನ್ ವಿರುದ್ಧ ಎದುರಾದ ಸತತ ನಾಲ್ಕನೇ ಸೋಲು. ಮೊದಲ ಗೇಮ್ನಲ್ಲಿ ಗೆಲುವು ಸಾಧಿಸಿದ ಸೈನಾ ಮುಂದಿನ ಎರಡು ಗೇಮ್ಗಳಲ್ಲಿ ಎದುರಾಳಿಯ ಆಕ್ರಮಣಕಾರಿ ಆಟದ ಮುಂದೆ ಸಂಪೂರ್ಣ ವಿಫಲರಾಗಿ ಸೋಲೊಪ್ಪಿಕೊಂಡರು. ದಿನದ ಮತ್ತೂಂದು ಪಂದ್ಯಕ್ಕೂ ಮುನ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕೆ. ಶ್ರೀಕಾಂತ್ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ಕೂಟದಿಂದ ಹೊರನಡೆದರು.ಇದರಿಂದ ಎದುರಾಳಿ ಮಲೇಶ್ಯಾದ ಲೀ ಜೀ- ಝೀಯಾ ಅವರಿಗೆ ವಾಕ್ ಓವರ್ ನೀಡಲಾಯಿತು.
ಚಿರಾಗ್ ಜೋಡಿಗೆ ಸೋಲು :
ಭಾರತದ ಪುರುಷರ ಡಬಲ್ಸ್ನ ತಾರಾ ಜೋಡಿಯಾದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ನಿರಾಸೆ ಅನುಭವಿಸಿದ್ದಾರೆ. ಇಂಡೋನೇಷ್ಯಾದ ಮೊಹಮ್ಮದ್ ಅಹ್ಸಾನ್ ಹಾಗೂ ಹೆಂಡ್ರಾ ಸೇಟಿಯಾವನ್ ವಿರುದ್ಧದ ಪಂದ್ಯದಲ್ಲಿ ಭಾರತೀಯ ಜೋಡಿ 21-19, 21-17 ಅಂತರದ ನೇರ ಗೇಮ್ಗಳಿಂದ ಸೋಲನುಭವಿಸಿತು. ಈ ಪಂದ್ಯ ಕೇವಲ 33 ನಿಮಿಷಗಳಲ್ಲಿ ಮುಕ್ತಾಯ ಕಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ