ಇಂದಿನಿಂದ ಟಿಪಿಎಲ್ ಕ್ರಿಕೆಟ್: ಟ್ರೋಫಿ ಅನಾವರಣ
Team Udayavani, Apr 14, 2017, 1:20 AM IST
ಕುಂದಾಪುರ: ಇಲ್ಲಿನ ಟಾರ್ಪೆಡೋಸ್ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಎ.14ರಿಂದ ಜರಗಲಿರುವ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಟಿಪಿಎಲ್- 2017 ಟಿ 10 ಕ್ರಿಕೆಟ್ ಕೂಟದ ಟ್ರೋಫಿ ಹಾಗೂ ಜರ್ಸಿ ಅನಾವರಣ ಕಾರ್ಯಕ್ರಮ ಬುಧವಾರ ರಾತ್ರಿ ಜರಗಿತು. ಯುವ ಉದ್ಯಮಿ ಅಭಿನಂದನ್ ಶೆಟ್ಟಿ ಅವರು ಟ್ರೋಫಿ ಹಾಗೂ ಜರ್ಸಿ ಅನಾವರಣಗೊಳಿಸಿ ಶುಭ ಕೋರಿದರು. ಕುಂದಾಪುರ ಗಾಂಧಿ ಮೈದಾನದಲ್ಲಿ ಜರಗಲಿರುವ ಕ್ರಿಕೆಟ್ ಕೂಟದ ಉದ್ಘಾಟನೆ ಎ.14ರ ಸಂಜೆ 6.30ಕ್ಕೆ ಜರಗಲಿದ್ದು, ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕೂಟವನ್ನು ಉದ್ಘಾಟಿಸಲಿದ್ದಾರೆ.
ಈ ಕೂಟದಲ್ಲಿ ಸುಮಾರು 12 ವಿದೇಶದ ಹಾಗೂ ಭಾರತದ ತಂಡಗಳು ಭಾಗವಹಿಸುತ್ತಿವೆ. ಶ್ರೀಲಂಕಾದ ಸಪರ್ ಫ್ಯಾಷನ್, ಕ್ಯಾಂಡಿ ಶ್ರೀಲಂಕಾ, ಅಲೆಯನ್ಸ್ ಕತಾರ್, ಹನನ್ ವಾರಿಯರ್ ಕತಾರ್, ಪಯೋನಿಯರ್ ಕ್ರಿಕೆಟರ್ಸ್ ಸೌದಿ ಅರೇಬಿಯಾ, ಇಲೆವೆನ್ ವಾರಿಯರ್ಸ್, ದುಬೈ, ಈಸ್ಟರ್ನ್ ಬ್ಲೂಸ್ ಸೌದಿ ಅರೇಬಿಯಾ, ಸಿಟಿ ಬಾಯ್ಸ್ ಕೇರಳ, ಎಸ್ಕೆಸಿ ವಾರಿಯರ್ ಗೋವಾ, ಜೋಫ್ ಬಾಕ್ಸ್ ಗೋವಾ ತಂಡಗಳೊಂದಿಗೆ ಉಡುಪಿಯ ಉಡುಪಿ ಬಾಯ್ಸ್ ಹಾಗೂ ಕುಂದಾಪುರದ ತಂಡ ಕೂಟದಲ್ಲಿ ಪಾಲ್ಗೊಳ್ಳಲಿವೆ. ವಿಜೇತರಿಗೆ 10 ಲಕ್ಷ ರೂ. ಹಾಗೂ ಟ್ರೋಫಿ, ರನ್ನರ್ಸ್ ಅಪ್ ತಂಡಕ್ಕೆ ಟ್ರೋಫಿ ಮತ್ತು ರೂ. 5 ಲಕ್ಷ ಹಾಗೂ ಸರಣಿಶ್ರೇಷ್ಠ ಆಟಗಾರ ಬೈಕ್ ಪಡೆಯಲಿದ್ದಾರೆ ಎಂದು ಸಂಘಟಕ ಟಾರ್ಪೆಡೋಸ್ ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ ತಿಳಿಸಿದರು. ಉದ್ಯಮಿಗಳಾದ ಗಣೇಶ್ ಕಾಮತ್, ಚಂದ್ರಕಾಂತ್ ಶೆಣೈ, ಶ್ರೀಲಂಕಾ ಸಾಫ್ಟ್ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಲೆಸ್ಟರ್, ಫಿಲಾನ್ ತುಸ್ಕರ್ ಮಿರಾಂದ, ಉದ್ಯಮಿ ಸದಾನಂದ ನಾವಡ, ನಾಗಭೂಷಣ್ ರೆಡ್ಡಿ ಉಪಸ್ಥಿತರಿದ್ದರು. ಅಜಿತ್ ಕಾರ್ಯಕ್ರಮ ನಿರ್ವಹಿಸಿದರು. ಉದಯ ಶೆಣೈ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!