ಉಮೇಶ್ ಯಾದವ್ ಇನ್ನು ರಿಸರ್ವ್ ಬ್ಯಾಂಕ್ ಉದ್ಯೋಗಿ
Team Udayavani, Jul 19, 2017, 8:55 AM IST
ನಾಗ್ಪುರ: ಭಾರತ ತಂಡದ ಪೇಸ್ ಬೌಲರ್ ಉಮೇಶ್ ಯಾದವ್ ಅವರ ಸರಕಾರಿ ನೌಕರಿಯ ಕನಸು ನನಸಾಗಿದೆ. ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಾಗ್ಪುರ ಶಾಖೆಯಲ್ಲಿ ಸಹಾಯಕ ಮ್ಯಾನೇಜರ್ ಆಗಿ ನೇಮಕಗೊಂಡಿದ್ದಾರೆ. ನ್ಪೋರ್ಟ್ಸ್ ಕೋಟಾದಡಿ ಈ ಉದ್ಯೋಗ ಲಭಿಸಿದೆ.
ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೂ ಮುನ್ನ ಉಮೇಶ್ ಯಾದವ್ ಆವರು ರಿಸರ್ವ್ ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಕೆಲಸದ ಆದೇಶ ಕೈಸೇರಿದೆ. ಆದರೆ ಆವರು ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಗಡಿಬಿಡಿಯಲ್ಲಿದ್ದುದರಿಂದ ಹುದ್ದೆಗೆ ಸಂಬಂಧಿಸಿದ ವಿಧಿವಿಧಾನಗಳನ್ನು ಪೂರ್ತಿಗೊಳಿಸಿಲ್ಲ ಎಂದು ಬ್ಯಾಂಕಿನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉಮೇಶ್ ಯಾದವ್ಗೆ ಸರಕಾರಿ ಕೆಲಸ ಸಿಕ್ಕಿರುವುದು ಅವರ ತಂದೆ ತಿಲಕ್ ಯಾದವ್ಗೆ ಅತೀವ ಸಂತೋಷ ತಂದಿದೆ. ಮಗನಿಗೆ ಸರಕಾರಿ ಕೆಲಸ ಸಿಗಬೇಕೆಂಬುದು ಅವರ ದೀರ್ಘ ಕಾಲದ ಕನಸಾಗಿತ್ತು. ಕೆಲವು ವರ್ಷಗಳ ಹಿಂದೆ ಉಮೇಶ್ ಯಾದವ್ ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕೆಲಸ ಅವರಿಗೆ ಲಭಿಸಲಿಲ್ಲ.
ಯಾದವ್ ನಿವಾಸದಲ್ಲಿ ಕಳ್ಳತನ!
ರಿಸರ್ವ್ ಬ್ಯಾಂಕ್ ಉದ್ಯೋಗದ ಆದೇಶದ ಪ್ರತಿ ಉಮೇಶ್ ಯಾದವ್ ಕೈಸೇರಿದ ಕೆಲವೇ ಗಂಟೆಗಳಲ್ಲಿ ಅವರ ಕುಟುಂಬಕ್ಕೆ ಆಘಾತಕಾರಿ ಸುದ್ದಿಯೊಂದು ಬಂದೆರಗಿದೆ. ಅವರ ನಾಗ್ಪುರ ನಿವಾಸದಲ್ಲಿ (ಫ್ಲ್ಯಾಟ್)ಸೋಮವಾರ ರಾತ್ರಿ ಕಳ್ಳತನ ಸಂಭವಿಸಿದೆ!
45 ಸಾವಿರ ರೂ.ಗಳಷ್ಟು ನಗದು ಹಾಗೂ 2 ಮೊಬೈಲ್ ಫೋನ್ಗಳನ್ನು ಕಳ್ಳರು ಹೊತ್ತೂಯ್ದಿದ್ದಾರೆ. ಎರಡೂ ಫೋನ್ಗಳು ಯಾದವ್ ಅವರ ತಾಯಿಯದ್ದಾಗಿದೆ. ಕಳ್ಳತನ ನಡೆದ ವೇಳೆ ಉಮೇಶ್ ಯಾದವ್ ಮನೆಯಲ್ಲಿ ಯಾರೂ ಇರಲಿಲ್ಲ. ಸಂಜೆ 7ರ ವೇಳೆ ಹೊರಗೆ ಹೋದ ಕುಟುಂಬದ ಸದಸ್ಯರು ಬೆಳಗಿನ ಜಾವ 3 ಗಂಟೆಗೆ ವಾಪಸಾದಾಗ ಘಟನೆ ಅರಿವಿಗೆ ಬಂದಿದೆ. ಅಂಬಾಝರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಶಂಕಿತ ಇಬ್ಬರನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಲಕ್ಷ್ಮೀನಗರ ವಠಾರದ ಫ್ಲ್ಯಾಟ್ನ 9ನೇ ಮಹಡಿಯಲ್ಲಿ ಯಾದವ್ ಕುಟುಂಬ ವಾಸಿಸುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ