“ಯಾವ ತಂಡದ ಮೇಲೂ ಒತ್ತಡ ಹೇರಬಲ್ಲೆವು’
Team Udayavani, Feb 20, 2020, 5:09 AM IST
ಸಿಡ್ನಿ: ಶುಕ್ರವಾರದ ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು ಎದುರಿಸಲಿರುವ ಭಾರತ ಒತ್ತಡಕ್ಕೆ ಸಿಲುಕಿದೆಯೇ? “ಇಲ್ಲ’ ಎನ್ನುತ್ತಾರೆ ನಾಯಕಿ ಹರ್ಮನ್ಪ್ರೀತ್ ಕೌರ್.
“ಆರಂಭಿಕ ಪಂದ್ಯದ ಬಗ್ಗೆ ನಮಗೆ ವಿಪರೀತ ಕುತೂಹಲವಿದೆ. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಲಿ ದ್ದೇವೆ. ಯಾವುದೇ ಒತ್ತಡಕ್ಕೆ ಸಿಲುಕಿಲ್ಲ. ಆದರೆ ಯಾವುದೇ ತಂಡದ ಮೇಲೂ ಒತ್ತಡ ಹೇರಬಲ್ಲ ಸಾಮರ್ಥ್ಯ ನಮ್ಮಲ್ಲಿದೆ’ ಎಂದಿದ್ದಾರೆ ಹರ್ಮನ್ಪ್ರೀತ್ ಕೌರ್.
“ಕೆಲವೊಮ್ಮೆ ನಾವು ಉತ್ತಮ ಫಾರ್ಮ್ನಲ್ಲಿ ಇರುತ್ತೇವೆ. ಕೆಲವು ಸಲ ಫಾರ್ಮ್ ಕೈಕೊಡುತ್ತದೆ. ಈ ಕೂಟದಲ್ಲಿ ಆಡಲಿರುವ ನಾವೆಲ್ಲರೂ ಧನಾತ್ಮಕ ಮನೋಭಾವ ಹೊಂದಿದ್ದೇವೆ. ಇದರಿಂದ ತಂಡಕ್ಕೆ ಲಾಭವಾಗಲಿದೆ’ ಎಂದರು.
ಭಾರತ-ಆಸ್ಟ್ರೇಲಿಯ ನಡುವಿನ ಉದ್ಘಾಟನಾ ಪಂದ್ಯ “ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿದ್ದು, ಇಲ್ಲಿನ ಟ್ರ್ಯಾಕ್ ಹೆಚ್ಚಿನ ತಿರುವು ಹೊಂದಿದೆ ಎಂಬುದೊಂದು ಅಭಿಪ್ರಾಯ. ಆಗ ಇದು ಭಾರತಕ್ಕೆ ಹೆಚ್ಚಿನ ನೆರವು ಒದಗಿಸಲಿದೆ ಎಂಬ ವಿಶ್ವಾಸ ಕೌರ್ ಅವರದು.
ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ ಶುಕ್ರವಾರ ಅಪರಾಹ್ನ 1.30ಕ್ಕೆ ಆರಂಭವಾಗಲಿದೆ. ಮಾ. 8ರಂದು ಫೈನಲ್ ನಡೆಯಲಿದೆ.
ಮೊದಲ ವಿಶ್ವಕಪ್ ಖುಷಿಯಲ್ಲಿ
ಅನ್ನಾಬೆಲ್ ಸದರ್ಲ್ಯಾಂಡ್
ಆಸ್ಟ್ರೇಲಿಯದ 18ರ ಹರೆಯದ ಆಟಗಾರ್ತಿ ಅನ್ನಾಬೆಲ್ ಸದರ್ಲ್ಯಾಂಡ್ ಮೊದಲ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಆಡುವ ಖುಷಿಯಲ್ಲಿದ್ದಾರೆ.
“ನನಗೆ ಇದೊಂದು ವಿಶೇಷ ಅನುಭವ. ಇಷ್ಟು ಬೇಗ ವಿಶ್ವಕಪ್ನಲ್ಲಿ ಆಡುವ ಅವಕಾಶ ಲಭಿಸುತ್ತದೆ ಎಂದು ಭಾವಿಸಿರಲಿಲ್ಲ. ಇದೊಂದು ಮಹಾನ್ ಗೌರವ’ ಎಂಬುದಾಗಿ ಅನ್ನಾಬೆಲ್ ಹೇಳಿದ್ದಾರೆ. ಅವರು ಕ್ರಿಕೆಟ್ ಆಸ್ಟ್ರೇಲಿಯದ ಮಾಜಿ ಸಿ.ಇ.ಒ. ಜೇಮ್ಸ್ ಸದರ್ಲ್ಯಾಂಡ್ ಅವರ ಪುತ್ರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ