ಬಿಗಿ ಭದ್ರತೆಯೊಂದಿಗೆ ಪಾಕ್ಗೆ ಬಂದಿಳಿದ ವಿಂಡೀಸ್ ಕ್ರಿಕೆಟಿಗರು
Team Udayavani, Dec 10, 2021, 6:57 AM IST
ಕರಾಚಿ: ಟಿ20 ಮತ್ತು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಯನ್ನಾಡಲು ವೆಸ್ಟ್ ಇಂಡೀಸ್ ತಂಡ ಬಿಗಿ ಭದ್ರತೆಯೊಂದಿಗೆ ಗುರುವಾರ ಪಾಕಿಸ್ಥಾನಕ್ಕೆ ಬಂದಿಳಿದಿದೆ.
ಭದ್ರತೆಯ ಕಾರಣ ನೀಡಿ ನ್ಯೂಜಿಲ್ಯಾಂಡ್ ತಂಡ ಎರಡು ತಿಂಗಳ ಹಿಂದೆ ಪಾಕಿಸ್ಥಾನಕ್ಕೆ ಆಗಮಿಸಿಯೂ ಒಂದೂ ಪಂದ್ಯ ಆಡದೇ ತವರಿಗೆ ಮರಳಿತ್ತು. ಈ ಕಹಿಯನ್ನು ಅಳಿಸಲು ವಿಂಡೀಸ್ ಪ್ರವಾಸ ನೆರವಾಗಲಿದೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆರಿಬಿಯನ್ನರ ತಂಡ ಪಾಕ್ ಪ್ರವಾಸದ ವೇಳೆ ತಲಾ ತಲಾ 3 ಪಂದ್ಯಗಳ ಟಿ20 ಮತ್ತು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಎಲ್ಲ ಪಂದ್ಯಗಳನ್ನು ಕರಾಚಿಯಲ್ಲಿ ಆಡಲಾಗುವುದು. ಸೋಮವಾರ ಟಿ20 ಪಂದ್ಯದೊಂದಿಗೆ ಸರಣಿ ಆರಂಭವಾಗಲಿದೆ.
ಪ್ರಮುಖರ ಗೈರು:
ವೆಸ್ಟ್ ಇಂಡೀಸ್ ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿಲ್ಲ. ವೈಯಕ್ತಿಕ ಕಾರಣ ನೀಡಿ ಎವಿನ್ ಲೆವಿಸ್, ಶಿಮ್ರನ್ ಹೆಟ್ಮೈರ್, ಆ್ಯಂಡ್ರೆ ರಸೆಲ್ ಮತ್ತು ಲೆಂಡ್ಲ್ ಸಿಮನ್ಸ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಮಾಜಿ ನಾಯಕ ಜೇಸನ್ ಹೋಲ್ಡರ್ಗೆ ವಿಶ್ರಾಂತಿ ನೀಡಲಾಗಿದೆ. ಫ್ಯಾಬಿಯನ್ ಅಲೆನ್ ಮತ್ತು ಕೈರನ್ ಪೊಲಾರ್ಡ್ ಗಾಯಾಳಾಗಿದ್ದಾರೆ. ಯುವ ಹಾಗೂ ಹೊಸಬರನ್ನೇ ಹೆಚ್ಚಾಗಿ ನೆಚ್ಚಿಕೊಂಡ ವಿಂಡೀಸ್ ತಂಡ ಪಾಕ್ ಸಾಮರ್ಥ್ಯಕ್ಕೆ ಸಾಟಿಯಾದೀತೇ ಎಂಬುದೊಂದು ಕುತೂಹಲ.
ಟಿ20 ತಂಡ: ನಿಕೋಲಸ್ ಪೂರಣ್ (ನಾಯಕ), ಶೈ ಹೋಪ್, ಡ್ಯಾರನ್ ಬ್ರಾವೊ, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಅಕೀಲ್ ಹೊಸೇನ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್, ಗುಡಕೇಶ್ ಮೋತಿ, ರೊಮಾರಿಯೊ ಶೆಫರ್ಡ್, ಒಡೆಯನ್ ಸ್ಮಿತ್, ಓಶೇನ್ ಥಾಮಸ್, ಹೇಡನ್ ವಾಲ್ಶ್ ಜೂನಿಯರ್ ಮತ್ತು ರೋವ್ಮನ್ ಪೊವೆಲ್.
ಏಕದಿನ ತಂಡ: ಶೈ ಹೋಪ್ (ನಾಯಕ), ನಿಕೋಲಸ್ ಪೂರಣ್ ಶಮ್ರ ಬ್ರೂಕ್ಸ್, ರೋಸ್ಟನ್ ಚೇಸ್, ಜಸ್ಟಿನ್ ಗ್ರೀವ್ಸ್, ಅಕೀಲ್ ಹೊಸೇನ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋತಿ, ಆ್ಯಂಡರ್ಸನ್ ಫಿಲಿಪ್, ರೋವ್ಮನ್ ರೀಫರ್, ರೊಮಾರಿಯೊ ಶೆಫರ್ಡ್, ಒಡೆಯನ್ ಸ್ಮಿತ್, ಹೇಡನ್ ವಾಲ್ಶ್ ಜೂನಿಯರ್, ಡೇವನ್ ಥಾಮಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ