ವಿಂಡಿಸ್-ಇಂಗ್ಲೆಂಡ್ ಟಿ20 ಸರಣಿ: ಇಂಗ್ಲೆಂಡ್ಗೆ 4 ವಿಕೆಟ್ಗಳ ಜಯ
Team Udayavani, Mar 7, 2019, 12:30 AM IST
ಗ್ರಾಸ್ ಐಲೆಟ್ ( ಸೇಂಟ್ ಲೂಸಿಯ): ಅತಿಥೇಯ ವೆಸ್ಟ್ಇಂಡೀಸ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್ಗಳ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಜವಾಬಿತ್ತ ಇಂಗ್ಲೆಂಡ್ 18. 5 ಓವರ್ಗಳಲ್ಲಿ 6 ವಿಕೆಟಿಗೆ 161 ರನ್ ಬಾರಿಸಿ ಜಯಿಸಿತು.
ಕಳೆದ ಏಕದಿನ ಸರಣಿಗಳಲ್ಲಿ ಮಿಂಚಿದ “ಯುನಿವರ್ಸ್ ಬಾಸ್’ ಗೇಲ್ ಈ ಬಾರಿ ಕೇವಲ 15 ರನ್ ಗಳಿಸಿ ನಿರಾಶೆ ಮೂಡಿಸಿದರು. ವಿಂಡೀಸ್ 102 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಕ್ರೀಸ್ಗೆ ಬಂದ ನಿಕೋಲಸ್ ಪೂರಣ್ ಆಕ್ರಮಣಕಾರಿ ಬ್ಯಾಟ್ ಬೀಸಿ ತಂಡದ ಮೊತ್ತವನ್ನು 160ಕ್ಕೆ ತಲುಪಿಸಿದರು. ಅವರ ಗಳಿಕೆ 58 ರನ್ (3 ಬೌಂಡರಿ, 4 ಸಿಕ್ಸರ್). ಇಂಗ್ಲೆಂಡ್ನ ಟಾಮ್ ಕರನ್ 36ಕ್ಕೆ 4ವಿಕೆಟ್ ಕಬಳಿಸಿ ವಿಂಡಿಸ್ಗೆ ಘಾತುಕವಾಗಿ ಕಾಡಿದರು.
160ರ ಸಾಧಾರಣ ಮೊತ್ತ ಗುರಿ ಬೆನ್ನತ್ತಲಾರಂಭಿಸಿ ಇಂಗ್ಲೆಂಡ್ ಬಹು ಬೇಗನೇ ಆರಂಭಿಕಾರ ಅಲೆಕ್ಸ್ ಹೆಲ್ಸ್ ಅವರನ್ನು ಕಳೆದುಕೊಂಡಿತು. ಮತ್ತೋರ್ವ ಆರಂಭಕಾರ ಜಾನಿ ಬೇರ್ಸ್ಟೊ ಕ್ರೀಸ್ ಕಚ್ಚಿ ನಿಂತರು. ಅವರು 40 ಎಸೆತಗಳಲ್ಲಿ 68 ರನ್ ಬಾರಿಸಿ ಇಂಗ್ಲೆಂಡ್ಗೆ ನೆರವಾದರು. ಇವರು ಔಟಾದ ಬಳಿಕ ಬಂದ ಆಟಗಾರರನ್ನು ಬೇಗನೇ ಪೆವೆಲಿಯನ್ಗೆ ಅಟ್ಟುವಲ್ಲಿ ವಿಂಡೀಸ್ ತಂಡ ಯಶಸ್ವಿಯಾಯಿತು. ಜೊಯ್ ಡೆನ್ಲಿ (30), ಸ್ಯಾಮ್ ಬಿಲ್ಲಿಂಗ್ಸ್ (18) ತಾಳ್ಮೆಯ ಆಟದಿಂದ ಇಂಗ್ಲೆಂಡ್ ಗೆಲುವಿನ ದಡ ಸೇರಿತು. ವಿಂಡೀಸ್ ಪರ ಶೆಲ್ಡನ್ ಕೊಟ್ರಲ್ 3 ವಿಕೆಟ್ ಸಂಪಾದಿಸಿದರು.
ಸಂಕ್ಷಿಪ್ತ ಸ್ಕೋರ್:
ವೆಸ್ಟ್ಇಂಡಿಸ್-20 ಓವರ್ಗಳಲ್ಲಿ 6 ವಿಕೆಟಿಗೆ160 (ನಿಕೋಲಸ್ ಪೂರಣ್ 58, ಡೆರಾನ್ ಬ್ರಾವೊ 28, ಟಾಮ್ ಕರನ್ 36ಕ್ಕೆ 4), ಇಂಗ್ಲೆಂಡ್- 18.5 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 (ಬೇರ್ಸ್ಟೊ 68, ಶೆಲ್ಡನ್ ಕೊಟ್ರಲ್ 29ಕ್ಕೆ 3, ಹೋಲ್ಡರ್ 26ಕ್ಕೆ 1).
ಪಂದ್ಯ ಶ್ರೇಷ್ಠ: ಜಾನಿ ಬೇರ್ಸ್ಟೊ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ