ಕಂದಾಯ ಸಚಿವರ ಕಾಲಿಗೆ ಬಿದ್ದು ಪರಿಹಾರಕ್ಕೆ ಅಂಗಲಾಚಿದ ರೈತ
Team Udayavani, Jan 30, 2019, 12:30 AM IST
ಬೈಲಹೊಂಗಲ: “ಬರ ಬಿದ್ದು ವಿಮಾ ಪರಿಹಾರ ಕೂಡ ನಮಗೆ ದಕ್ಕಿಲ್ಲ. ನೀವಾದ್ರೂ ಪರಿಹಾರ ಕೊಡಸ್ರಿ’ ಎಂದು ರೈತನೊಬ್ಬ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರ ಕಾಲಿಗೆ ಬಿದ್ದು ಬೇಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಸಚಿವ ಸಂಪುಟದ ಉಪಸಮಿತಿ ಮಂಗಳವಾರ ಬೆಳಗ್ಗೆ ಬರ ಪರಿಹಾರ ಅಧ್ಯಯನ ನಡೆಸುತ್ತಿದ್ದ ವೇಳೆ ತಾಲೂಕಿನ ಕಲಕುಪ್ಪಿ ಗ್ರಾಮದ ಕ್ರಾಸ್ ಸಮೀಪ
ಸಚಿವರ ಬಳಿ ಬಂದ ರೈತನೊಬ್ಬ, “ನಮ್ಮ ಕಡೆಗೆ ಬರದ ಸಮಸ್ಯೆ ಆಗೇತಿ ಸಾಹೇಬ್ರ. ದನಗಳಿಗೆ ಕುಡಿಯಲು ನೀರು, ಮೇವಿಲ್ಲದ್ದರಿಂದ ಮಾರುವ ಸ್ಥಿತಿ ಐತಿ. ಸರಕಾರದಿಂದ ಬರಬೇಕಾಗಿದ್ದ ವಿಮಾ ಪರಿಹಾರ ಇನ್ನೂ ಬಂದಿಲ್ಲ. ಎಷ್ಟು ಬಾರಿ ವಿನಂತಿ
ಮಾಡಿಕೊಂಡರೂ ಇನ್ನೂವರೆಗೆ ಪರಿಹಾರ ಸಿಕ್ಕಿಲ್ಲ. ನೀವಾದ್ರೂ ಪರಿಹಾರ ಕೊಡಸ್ರಿ’ ಎಂದು ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಮಾಡಿದ್ದಾನೆ.
ಬರಗಾಲದಿಂದ ನೇಸರಗಿ ಭಾಗದ ಜನತೆ ತತ್ತರಿಸಿದ್ದೇವೆ. ಈ ಭಾಗದಲ್ಲಿ ನೀರಾವರಿ ಮಾಡಿ ಶಾಶ್ವತ ಪರಿಹಾರ ದೊರಕಿಸಿ ಕೊಡಿ ಎಂದು ರೈತ ಸಚಿವರಲ್ಲಿ ಮನವಿ ಮಾಡಿಕೊಂಡರು. ರೈತರನ್ನು ಸಮಾಧಾನ ಪಡಿಸಿದ ಸಚಿವ ದೇಶಪಾಂಡೆ, ಬೆಳೆ ವಿಮಾ ಯೋಜನೆಯಡಿ ಹಣ ತುಂಬಿದ ಜನಕ್ಕೆ ಅನ್ಯಾಯವಾಗಬಾರದು. ಶೀಘ್ರವೇ ಪರಿಹಾರ ಹಣವನ್ನು ಜಿಲ್ಲಾಡಳಿತದ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಲಕುಪ್ಪಿ ಗ್ರಾಮದ ರೈತ ಬಸಪ್ಪ ಗುರವ ಅವರು 1 ಎಕರೆ 13 ಗುಂಟೆಯಲ್ಲಿ ಬೆಳೆದ ಜೋಳ, ಕಡಲೆ ಬೆಳೆ ಹಾಗೂ ನೇಮಣ್ಣ ವನ್ನೂರ ಅವರ ಹೊಲದಲ್ಲಿ ಹಾಳಾಗಿರುವ ಬೆಳೆಯನ್ನು ಸಚಿವರು, ತಂಡದವರು ವೀಕ್ಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ