ಇದೊಂದು ಹುಚ್ಚರ ಸರ್ಕಾರ;ಸಿಎಂಗೆ ತಲೆ ಕೆಟ್ಟಿದೆ:ವಿ.ಸೋಮಣ್ಣ
Team Udayavani, Feb 8, 2018, 10:56 AM IST
ಹಾಸನ: ಮಠ ಹಾಗೂ ಮಠಗಳ ವಶದಲ್ಲಿರುವ ಹಿಂದೂ ದೇವಾಲಯಗಳನ್ನು ಸರ್ಕಾರ ನಿಯಂತ್ರಿಸುವ ಉದ್ದೇಶದ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ ವಿ.ಸೋಮಣ್ಣ ಕಿಡಿ ಕಾರಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸುತ್ತೋಲೆಯಲ್ಲಿ ಅರ್ಥವಿಲ್ಲ. ಇದೊಂದು ಹುಚ್ಚರ ಸರ್ಕಾರ. ಸಿಎಂ ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ’ ಎಂದು ಕಿಡಿ ಕಾರಿದರು.
‘ಸಮಾಜದಲ್ಲಿ ಅಶಾಂತಿ ಮೂಡಿಸುವ ಸನ್ನಿವೇಶ ನೀರ್ಮಾಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಂತಹ ಸನ್ನಿವೇಶ ಸೃಷ್ಟಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಖಳನಾಯಕನಾಗುವ ಸಂದರ್ಭ ಬಂದಿದೆ’ ಎಂದರು.
‘ಸರ್ಕಾರಿ ಖಜಾನೆ ಖಾಲಿಯಾಗಿದೆ ಅದಕ್ಕಾಗಿ ಇಂತಹ ಕೆಲಸಕ್ಕೆ ಕೈ ಹಾಕಿದ್ದಾರೆ’ ಎಂದು ಕಿಡಿ ಕಾರಿದರು.