ಸಾಮಾಜಿಕ ಜಾಲತಾಣದಲ್ಲೂ ಹಿಜಾಬ್- ಕೇಸರಿ ಶಾಲಿನದ್ದೇ ಚರ್ಚೆ
Team Udayavani, Feb 8, 2022, 2:46 PM IST
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ -ಕೇಸರಿ ಶಾಲು ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಅದರ ಚರ್ಚೆ ಗರಿಗೆದರಿದೆ.
ಹಿಜಾಬ್ ವಿವಾದ ಸದ್ಯ ನ್ಯಾಯಾಲಯದ ಮೆಟ್ಟಿಲೇರಿದ್ದು, ಕೋರ್ಟು ತೀರ್ಪು ಏನೇ ಬಂದರು ಅದನ್ನು ಸ್ವಾಗತಿಸಬೇಕು ಎನ್ನುವ ಆಶಯ ಅನೇಕರಿಂದ ವ್ಯಕ್ತವಾಗಿದೆ.
‘ಹಿಜಾಬ್ ಧರಿಸುವುದರ ಬಗ್ಗೆ ತಕರಾರು ಮಾಡುತ್ತಿರುವುದು ಸರಿಯಲ್ಲ. ಏಕೆಂದರೆ ಸಾಂಪ್ರದಾಯಕವಾಗಿ ಮುಸ್ಲಿಂ ಸಮುದಾಯದವರು ಹೆಣ್ಣುಮಕ್ಕಳನ್ನು ಬುರ್ಖಾ ಧರಿಸದೆ ಹೊರಗೆ ಹೋಗಲು ಬಿಡುವುದಿಲ್ಲ. ಕೆಲ ವರ್ಷಗಳಿಂದ ಮುಸ್ಲಿಂ ಹೆಣ್ಣುಮಕ್ಕಳಿಗೆ ಅವರ ಮನೆಯಲ್ಲಿ ಸ್ವಲ್ಪ ಸ್ವಾತಂತ್ರ ಕೊಡುತ್ತಿದ್ದಾರೆ. ಆದರೆ ಅನೇಕರು ಇನ್ನೂ ಸಾಂಪ್ರದಾಯಕವಾಗಿ ಉಳಿದಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದೇ ಮುಖ್ಯ ಉದ್ದೇಶ ಆಗಿರುವಾಗ ಈ ರೀತಿ ತಕರಾರುಗಳು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಚಂದನ ಗೌಡ ಎನ್ನುವರು ಕೂ ಮಾಡಿದ್ದಾರೆ.
ಇದನ್ನೂ ಓದಿ:ಹಿಜಾಬ್ ವಿವಾದ: ಹೈಕೋರ್ಟ್ ನಲ್ಲಿ ಒಂದೂವರೆ ಗಂಟೆ ಕಾಲ ವಾದ- ಪ್ರತಿವಾದ; ವಿಚಾರಣೆ ಮುಂದೂಡಿಕೆ
‘ನಮ್ಮ ಭಾರತ ಪ್ರಜಾ ಪ್ರಭುತ್ವ ರಾಷ್ಟ್ರ. ಪ್ರಜೆಗಳ ನಿರ್ಣಯವೇ ಅಂತಿಮ. ನನ್ನ ಪ್ರಕಾರ ಮುಸ್ಲಿಮರು ಹಿಜಾಬ್ ದರಿಸಲಿ, ಆದರೆ ಅವರವರ ಸಂಪ್ರದಾಯ ಅವರವರ ಚೌಕ್ಕಟಿನಲ್ಲಿ ಇರಲಿ. ಶಾಲಾ ಕಾಲೇಜು ಇದೆಲ್ಲಾ ವಿದ್ಯಾಭ್ಯಾಸ ಕಲಿಯುವ ಸ್ಥಳ. ಇಲ್ಲಿ ಎಲ್ಲರಿಗೂ ಒಂದೇ ನಿಯಮ ಇರಬೇಕು ಎಂಬುದು ನನ್ನ ಅಭಿಪ್ರಾಯ. ಅವರವರ ಸಂಪ್ರದಾಯ ಅವರವರ ಮನೆಯಲ್ಲಿ ಇರಲಿ ಹೊರ ಸಮಾಜದಲ್ಲಿ ಅಲ್ಲ. ಯಾವ ಸಂಪ್ರದಾಯಕ್ಕೂ ಅಡ್ಡಿ ಬೇಡ, ಅವರು ಬೇರೆಯವರಂತೆ ಎಲ್ಲ ಕ್ಷೇತ್ರದಲ್ಲೂ ಸಮಾನತೆ ಅಷ್ಟೇ ಮುಖ್ಯ’ ಎಂದು ಮೇಘನಾ ಎನ್ನುವರು ಹೇಳಿದ್ದಾರೆ.
‘ಕೋರ್ಟು ತೀರ್ಪಿಗೆ ಕಾಯುತ್ತಿದ್ದೇನೆ, ನಮ್ಮ ಅಭಿಪ್ರಾಯ ಭಾವನಾತ್ಮಕವಾಗಿರಬಹುದು, ಅದರಲ್ಲಿ ಕಿರುಬೆರಳಿನಷ್ಟು ಸತ್ಯವಿರಬಹುದು ಆದ್ರೆ ಸಂವಿಧಾನದ ಘಮಕ್ಕೆ ಯಾವುದೇ ಗುಡಿಯ ಉದ್ದಿನಕಡ್ಡಿಯ ಅಥವಾ ಮುಸ್ಲಿಂಮನ ಅತ್ತರಿನ ಘಮ ಅಂಟಿರುವಿದಿಲ್ಲ. ನಮ್ಮ ಅಭಿಪ್ರಾಯ ಈ ಕೋರ್ಟ್ ನಿಂದ ಮತ್ತೊಂದು ಕೋರ್ಟಿಗೆ ಹಾರಲಿಕ್ಕೆ ಸಹಾಯವಾಗಬಹುದೇ ಹೊರತು ಅದು ನಿರ್ಣಾಯಕವಂತೂ ಅಲ್ಲ’ ಎಂದು ಸುನೀಲ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಹಿಂಸೆಗೆ ತಿರುಗಿದ ಹಿಜಾಬ್ – ಕೇಸರಿ ವಿವಾದ: ಶಿವಮೊಗ್ಗದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ
ಧರ್ಮ ರಕ್ಷಕರು ಮೊದಲು ಸಮಾಜದಲ್ಲಿ ಸಾಮರಸ್ಯದ ಮತ್ತು ಒಗ್ಗಟ್ಟಿನ ಮಂತ್ರ ಸೌಹಾರ್ದತೆ ಯ ಪಾಠ ಮಾಡಬೇಕೆ ಹೊರೆತು ಧರ್ಮ ಸಂಘಟನೆಗಳು ಧರ್ಮದ ಅಹಿಂಸಾ ತತ್ವವನ್ನು ಪಾಲಿಸುವ ಕಾರ್ಯ ಮಾಡಬೇಕೆ ಹೊರೆತು ಸಮುದಾಯಗಳ ಒಗ್ಗಟ್ಟನ್ನು ಒಡೆಯುವ ಸಂಘಟನೆಗಳನ್ನು ಹುಟ್ಟುಹಾಕಬಾರದು ಧರ್ಮದ ಮೂಲ ದೇವರಾದ್ರೆ ದೇವರ ಮೂಲ ಮಾನವ ಮಾನವ ಧರ್ಮಕ್ಕೆ ಜಯವಾಗಲಿ ಮಾನವ ಸೃಷ್ಟಿಸಿದ ಧರ್ಮಕ್ಕಲ್ಲ’ ಎಂದಿದ್ದಾರೆ ಅರುಣ್.
‘ನಿಮ್ಮ ಷರಿಯತ್ ಏನೇ ಹೇಳಿದ್ದನ್ನ ನೀವು ಪಾಲಿಸಿ, ಅದನ್ನ ತಡೆಯುವ ಹಕ್ಕು ಯಾವ ಭಾರತೀಯನಿಗೂ ಸಾಧ್ಯವಿಲ್ಲ. ಆದರೆ ಎಲ್ಲಿ ಧರಿಸಬೇಕು ಎಲ್ಲಿ ಧರಿಸಬಾರದು ಅನ್ನೋದನ್ನ ನೀವು ಕಣ್ಣು ತೆರೆದು ನೋಡಬೇಕು. ಕೋರ್ಟ್ ತೀರ್ಪು ಕೊನೆ’ ಎಂದು ಬಸು ಎನ್ನುವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ