ಹಿಮಾಂಶು ರಾಯ್‌ ಆತ್ಮಹತ್ಯೆಗೆ ಶರಣಾಗುವ ಹೇಡಿಯಲ್ಲ: ವೈದ್ಯರ ಆತಂಕ


Team Udayavani, May 14, 2018, 11:57 AM IST

4.jpg

ಮುಂಬಯಿ: ಎರಡು ದಿನಗಳ ಹಿಂದೆ ಕ್ಯಾನ್ಸರ್‌ ಕಾಯಿಲೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಿಮಾಂಶು ರಾಯ್‌ ಅವರ ಮನೆಯಲ್ಲಿ ಆತ್ಮಹತ್ಯೆಗೆ ಮುನ್ನ ಬರೆದಿಟ್ಟಿದ್ದಾರೆ ಎನ್ನಲಾದ  ಚೀಟಿಯೊಂದು ಲಭಿಸಿದ್ದು, ಅದರಲ್ಲಿ ತನ್ನ ಸಾವಿಗೆ ತಾನೇ ಕಾರಣನಾಗಿದ್ದು, ಬೇರೆ ಯಾರೂ ಹೊಣೆಯಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಸರ್ವಿಸ್‌ ಪಿಸ್ತೂಲ್‌ನಿಂದ ಸ್ವತಃ ಬಾಯಿಗೆ ಗುಂಡಿಕ್ಕಿಕೊಂಡ ಅವರನ್ನು ಬೋಂಬೆ ಆಸ್ಪತ್ರೆಗೆ ಸಾಗಿಸು ವಷ್ಟರಲ್ಲಿ ಕೊನೆಯುಸಿರೆಳೆದಿದ್ದ ಹಿಮಾಂಶು ರಾಯ್‌ ಅವರ ಮೃತದೇಹವನ್ನು ಜಿ. ಟಿ. ಆಸ್ಪತ್ರೆಗೆ ಸಾಗಿಸಿ ಅಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಅಂತಿಮ ಸಂಸ್ಕಾರ ನಡೆಸಲಾಗಿತ್ತು.  

ಮರಣೋತ್ತರ ಪರೀಕ್ಷೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಹಿಮಾಂಶು ರಾಯ್‌ ಅವರ ಆಕಸ್ಮಿಕ ಸಾವಿನಿಂದ ಪೊಲೀಸ್‌ ಪಡೆಯು ಆಘಾತಗೊಂಡಿದ್ದು, ಇಂತಹ ಅಧಿಕಾರಿಯ ಸಾವಿಗಾಗಿ ನಿವೃತ್ತ ಅಧಿಕಾರಿಗಳು ಕೂಡ ದುಃಖ ವ್ಯಕ್ತಪಡಿಸಿದ್ದರು. 

ರಾಯ್‌ ಅವರು ತುಂಬಾ ಒತ್ತಡದಲ್ಲಿದ್ದರು ಮತ್ತು ಯಾವುದೇ ಸವಾಲಿನ ಕಾರ್ಯಗಳಲ್ಲೂ ಬದ್ಧತೆಯನ್ನು ತೋರಿಸುತ್ತಿದ್ದರು. ಎಟಿಎಸ್‌ ಮುಖ್ಯಸ್ಥನಂತಹ ಸವಾಲಿನ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದರೆಂದು ಮಾಜಿ ಪೊಲೀಸ್‌ ಆಯುಕ್ತ ಎಂ. ಎನ್‌. ಸಿಂಗ್‌ ತಿಳಿಸಿದ್ದಾರೆ.

ಕೆಲಸದ ಒತ್ತಡ ಕೂಡ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಪೊಲೀಸ್‌ ಅಧಿಕಾರಿಗಳು ಯಾವಾಗಲೂ ಸಂಘರ್ಷ ಮತ್ತು ಒತ್ತಡ ದೊಂದಿಗೆ ಬದುಕಬೇಕಾಗುತ್ತದೆ. ರಜೆ ಸಿಗದೆ ಒತ್ತಡವನ್ನು ಎದುರಿಸಬೇಕಾಗುತ್ತದೆ ಎಂದು ಸಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಯ್‌ ಅವರು ಹಲವು ಸವಾಲುಗಳನ್ನು ಎದುರಿಸಿದ್ದ ಯಶಸ್ವಿ ವ್ಯಕ್ತಿಯಾಗಿದ್ದಾರೆ ಎಂದು ನಿವೃತ್ತ ಅಧಿಕಾರಿಗಳು ತಿಳಿಸಿದ್ದಾರೆ.

ರಾಯ್‌ ಅವರ ಫಿಟೆ°ಸ್‌ ಪ್ರಶ್ನಾತೀತವಾಗಿದೆ. ಆದರೆ ಅವರು ಹೋರಾಟ ನಡೆಸುತ್ತಿದ್ದ ಕಾಯಿಲೆ ಮಾತ್ರ ನಿರ್ಣಾಯಕ ಹಂತದಲ್ಲಿದ್ದು, ಅದನ್ನು ಅವರು ಹೆಚ್ಚು ಸಮಯ ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಅರುಪ್‌ ಪಟ್ನಾಯಕ್‌ ಅವರು ತಿಳಿಸಿದ್ದಾರೆ. 

ರಾಯ್‌ ಅವರನ್ನು ಆಗಾಗ ಮಿಸ್ಟರ್‌ ಐಪಿಎಸ್‌ ಎಂದು ಕರೆಯುತ್ತಿದ್ದ ಮಾಜಿ ಡಿಜಿಪಿ ಅರವಿಂದ್‌ ಇನಾಂದಾರ್‌ ಅವರು, ರಾಯ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಗ್ಗೆ ತನಗೆ ಗೊತ್ತಿತ್ತು. ಆದರೆ ಅವರು ಅದರೊಂದಿಗೆ ಹೋರಾಡಿ ಬದುಕುವ ಬಗ್ಗೆ ನಾನು ನಂಬಿದ್ದಾಗಿ ತಿಳಿಸಿದ್ದಾರೆ.

 ರಾಯ್‌ ಆತ್ಮಹತ್ಯೆಗೆ ಶರಣಾಗುವ ಹೇಡಿಯಲ್ಲ : ವೈದ್ಯರ ಆತಂಕ

ಮುಂಬಯಿ : ಕ್ಯಾನ್ಸರ್‌ ಕಾಯಿಲೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಹಿಮಾಂಶು ರಾಯ್‌ ಅವರು ಆತ್ಮಹತ್ಯೆಗೆ ಶರಣಾಗುವ ಹೇಡಿಯಲ್ಲ ಎಂದು ಅವರನ್ನು ಉಪಚರಿಸುತ್ತಿದ್ದ  ವೈದ್ಯರೊಬ್ಬರು ತಿಳಿಸಿದ್ದಾರೆ.

ರಾಯ್‌ ಅವರು ಇತ್ತೀಚೆಗಿನ ದಿನಗಳಲ್ಲಿ ಕ್ಯಾನ್ಸರ್‌ನಿಂದ ಮುಕ್ತಿ ಹೊಂದಿದ್ದರು.  ಎಪ್ರಿಲ್‌ 30 ರಂದು ಪಿಇಟಿ ಸ್ಕ್ಯಾನಿಂಗ್‌ನಲ್ಲಿ ಅವರ ದೇಹದಲ್ಲಿ ಕ್ಯಾನ್ಸರ್‌ ಅಂಶ ಕಂಡು ಬಂದಿರಲಿಲ್ಲ. ರಾಯ್‌ ಅವರು ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಮುಕ್ತರಾಗಿದ್ದರು. ಅವರ ಆತ್ಮಹತ್ಯೆಗೆ ಕ್ಯಾನ್ಸರ್‌ ಕಾರಣ ಅಲ್ಲ ಎಂದು ನನಗೆ ಅನುಮಾನವಿದೆ ಎಂದು ಡಾ| ರಾಜ್‌ ನಗರ್ಕರ್‌ ಅವರು ತಿಳಿಸಿದ್ದಾರೆ.
ಎಟಿಎಸ್‌ ವಿಭಾಗದಲ್ಲಿ ಮಹತ್ವಪೂರ್ಣ ಪದವಿಯನ್ನು ಹೊಂದಿದ್ದ ಅವರು ಶುಕ್ರವಾರ ಮುಂಬಯಿ ನರಿಮನ್‌ ಪಾಯಿಂಟ್‌ನ ಸ್ವಗೃಹದಲ್ಲಿ ಆತ್ಮಹತ್ಯೆಗೆ ಶರಣಾದರು ಎಂಬ ವಿಷಯವನ್ನು ತಿಳಿದು ಬಹಳಷ್ಟು ನೋವಾಯಿತು. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

2016 ಫೆಬ್ರವರಿಯಲ್ಲಿ ರಾಯ್‌ ಅವರಿಗೆ ಬೋನ್‌ ಕ್ಯಾನ್ಸರ್‌ ಆಗಿತ್ತು. ರಾಯ್‌ ಅವರು ಆನಂತರ ಪುಣೆಯಲ್ಲಿ ಥೆರಪಿಯನ್ನು ಮಾಡಿಸಿಕೊಂಡಿದ್ದರು. ಆನಂತರ ಇಂಜೆಕ್ಷನ್‌ನೊಂದಿಗೆ ಔಷಧಿಯನ್ನು ನಿಯಮಿತವಾಗಿ ಪಡೆದುಕೊಳ್ಳುತ್ತಿದ್ದರು. ಅಲ್ಲದೆ ಪ್ರತಿಯೊಂದಕ್ಕೂ ಸಲಹೆಯನ್ನು ಪಡೆಯುತ್ತಿದ್ದರು. ಪ್ರಾರಂಭದಲ್ಲಿ ಅವರ ದೇಹದಲ್ಲಿ 44 ಟ್ಯೂಮರ್‌ ಕಂಡು ಬಂದಿತ್ತು.  2002ರಲ್ಲಿ ಅವರ ಕಿಡ್ನಿಯಲ್ಲಿ ಟ್ಯೂಮರ್‌ ಕಂಡು ಬಂದಿದೆ. ಕಳೆದ ಹದಿನೆಂಟು ವರ್ಷಗಳಿಂದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು. ಎಪ್ರಿಲ್‌ 30ರಂದು  ನಡೆಸಿದ ಸ್ಕಾÂನಿಂಗ್‌ನಲ್ಲಿ ಕ್ಯಾನ್ಸರ್‌ ಪತ್ತೆಯಾಗಿರಲಿಲ್ಲ. ಇದರಿಂದ ರಾಯ್‌ ಅವರು ಬಹಳ ಸಂತೋಷದಿಂದ ಮನೆಗೆ ತೆರಳಿದ್ದರು ಅಲ್ಲದೆ ಶೀಘ್ರದಲ್ಲಿ ಸೇವೆಗೆ ಮರಳುವುದಾಗಿ ತಿಳಿಸಿದ್ದರು.

ಕಳೆದ ಮೂರು ವಾರಗಳ ಹಿಂದೆ ರಾಯ್‌ ಅವರೊಂದಿಗೆ ಮಾತನಾಡಿದ್ದೆ. ಕ್ಯಾನ್ಸರ್‌ನ್ನು ಗೆದ್ದ ನಾನು ಇತರ ಕ್ಯಾನ್ಸರ್‌ ಪೀಡಿತರೊಂದಿಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳ ಬೇಕು ಎಂದು ತಿಳಿಸಿ ಬಹಳ ಉತ್ಸಾಹದಿಂದ ಇದ್ದರು ಎಂದು ಡಾ| ರಾಜ್‌ ನಗರ್ಕರ್‌ ತಿಳಿಸಿದ್ದಾರೆ.

ಹಿಮಾಂಶು ಅವರ ಆತ್ಮಹತ್ಯೆ ಚೀಟಿಯಲ್ಲಿ ಮಾನಸಿಕ ಒತ್ತಡ ಹಾಗೂ ಕ್ಯಾನ್ಸರ್‌ನಿಂದ ಆತ್ಮಹತ್ಯೆಗೆ ಯತ್ನಿಸುತ್ತಿದ್ದೇನೆ ಎಂದು ತಿಳಿಸಲಾಗಿದೆ. ಕಳೆದ 18 ವರ್ಷಗಳಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇದೀಗ ಕ್ಯಾನ್ಸರ್‌ನಿಂದ ಮುಕ್ತರಾಗುವ ಸಂದರ್ಭದಲ್ಲಿ   ಆತ್ಮಹತ್ಯೆಗೆ ಶರಣಾಗಿರುವುದು ದುರಂತ ವಾಗಿದೆ. ಇದು ಹಲವಾರು ಅನು ಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ ಎಂದು ಪುಣೆಯ ಮೆಡಿಕಲ್‌ ಆಂಕಾಲಜಿಸ್ಟ್‌ ಡಾ| ಅನಂತ್‌ ಭೂಷಣ್‌ ರಾನಡೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.