ಸಿಎಂಗೆ ಎಲೆಕ್ಷನ್ ವೇಳೆ ಕಾರಿನ ಟಯರ್ಲ್ಲಿ ಹಣ ಸಾಗಿಸಿದ್ದೆ..!
Team Udayavani, Nov 7, 2017, 3:46 PM IST
ತುಮಕೂರು: ‘ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಬಂದಾಗ ನಡೆದ ಉಪಚುನಾವಣೆಯಲ್ಲಿ ನಾನೇ ಹಣ ಹಂಚಿದ್ದೇನೆ’ ಎಂದು ಕಾಂಗ್ರೆಸ್ನ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ತಿಪಟೂರಿನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಜಿ.ಪಂ ಸದಸ್ಯ ಜಿ.ನಾರಾಯಣ ‘ನಾನು ನನ್ನ ಸ್ಯಾಂಟ್ರೋ ಕಾರಿನ ಟಯರ್ನಲ್ಲಿ 4 ಲಕ್ಷ ರೂಪಾಯಿ ತೆಗೆದುಕೊಂಡು ಹೋಗಿ ಹಂಚಿದ್ದೇನೆ’ ಎಂದರು.
ಆಕ್ರೋಶ ಭರಿತರಾಗಿ ಮಾತನಾಡಿದ ನಾರಾಯಣ ‘ಮುಖ್ಯಮಂತ್ರಿ ಸಿಎಂ ಆಗಬೇಕೆಂದು ಕನಸು ಕಂಡಿದ್ದೆ. ಇನ್ನು ಅವರು ಪ್ರಧಾನ ಮಂತ್ರಿ ಆಗಬೇಕು ಎಂಬ ಆಸೆ ಇದೆ. ಸಿದ್ದರಾಮಯ್ಯ ಪರ ಹೋರಾಟ ಮಾಡಿದ ನನಗೆ ಕಾಂಗ್ರೆಸ್ನವರೇ ವಿರೋಧಿಸುತ್ತಿದ್ದಾರೆ.ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಿಪಟೂರಿನಿಂದ ಸ್ಪರ್ಧಿಸಿ ವಿಧಾನಸಭೆಯ ನ್ನು ಪ್ರವೇಶಿಸುತ್ತೇನೆ’ ಎಂದು ಬಾಂಬ್ ಸಿಡಿಸಿದರು.
ನಾರಾಯಣ ಅವರು ಈ ಹೇಳಿಕೆ ನೀಡುವ ವೇಳೆ ವೇದಿಕೆಯಲ್ಲಿ ತಿಪಟೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಷಡಕ್ಷರಿ ಅವರೂ ವೇದಿಕೆಯಲ್ಲಿದ್ದರು.