6 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಂಡ್ಯದ ಯೋಧ ಗುರು ವೀರಮರಣ
Team Udayavani, Feb 15, 2019, 12:42 AM IST
ಮಂಡ್ಯ : ಜೈಶ್ ರಕ್ಕಸರ ದಾಳಿಯಲ್ಲಿ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಸಮೀ ಪದ ಗುಡಿಗೆರೆ ಗ್ರಾಮದ ಎಚ್.ಗುರು (33) ಯೋಧ ಹುತಾತ್ಮರಾಗಿದ್ದಾರೆ. ಇವರು ಸಿಆರ್ ಪಿಎಫ್ನ 82ನೇ ಬೆಟಾಲಿಯನ್ನ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಗುಡಿಗೆರೆ ಗ್ರಾಮದ ಕೃಷಿಕ ಹೊನ್ನಯ್ಯ ಅವರ ಪುತ್ರ.
ಜಮ್ಮುವಿನಿಂದ ಶ್ರೀನಗರಕ್ಕೆ ವಾಪಸ್ ಬರುತ್ತಿದ್ದ ನತದೃಷ್ಟ ಬಸ್ ನಲ್ಲಿ ಇದ್ದರು. 6 ತಿಂಗಳ ಹಿಂದಷ್ಟೇ ಗುರು ಅವರು ವಿವಾಹವಾಗಿದ್ದರು.
ಇದೀಗ ಗುರು ಅವರ ಸಾವಿನಿಂದಾಗಿ ಅವರ ಕುಟುಂಬಕ್ಕೆ ಬರಸಿಡಿಲು ಬಂದೆರಗಿದೆ. ಜಿಲ್ಲಾಡಳಿತಕ್ಕೆ ಈಗಾಗಲೇ ವಿಷಯ ತಲುಪಿದ್ದು, ಗುರು ಅವರ ಕುಟುಂಬಸ್ಥರಿಗೂ ಮಾಹಿತಿ ಮುಟ್ಟಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ವಿಮಾನದ ಮೂಲಕ ಮಂಡ್ಯಕ್ಕೆ ಗುರು ಅವರ ಪಾರ್ಥಿವ ಶರೀರವನ್ನು ತರಲಾಗುತ್ತದೆ.
ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.