ಮೊಬೈಲ್ ಕದ್ದ ಆರೋಪ: ಬಾಲಕಿ ಆತ್ಮಹತ್ಯೆ
Team Udayavani, Sep 12, 2019, 3:02 AM IST
ಶಹಾಪುರ: ವಿದ್ಯಾರ್ಥಿನಿಯರ ವಸತಿ ಗೃಹದಲ್ಲಿ ಮೊಬೈಲ್ ಕದ್ದ ಆರೋಪದಿಂದ ಮನನೊಂದ 9ನೇ ತರಗತಿ ವಿದ್ಯಾರ್ಥಿನಿ, ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆ. ಲಕ್ಷ್ಮೀ ಮಲ್ಲಣ್ಣ (14) ಮೃತ ವಿದ್ಯಾರ್ಥಿನಿ. ಶಹಾಪುರ ತಾಲೂಕಿನ ಅರಳಳ್ಳಿ ಗ್ರಾಮದ ಈ ಬಾಲಕಿ, ಕಲಬುರಗಿ ಎನ್.ವಿ. ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾನಗರದ ಬಾಲಕಿಯರ ಹಾಸ್ಟೆಲ್ನಲ್ಲಿದ್ದಳು. ಸೆ.7ರಂದು ನಿಲಯದಲ್ಲಿ ಅಡುಗೆ ಸಹಾಯಕಿ ಯೊಬ್ಬರ ಮೊಬೈಲ್ ಕಳವಾಗಿದೆ ಎಂದು ನಿಲಯದ ಎಲ್ಲಾ ವಿದ್ಯಾರ್ಥಿನಿಯರ ಪೆಟ್ಟಿಗೆ ಪರಿಶೀಲಿಸಲಾಗಿತ್ತು.
ಆಗ ಯಾರ ಪೆಟ್ಟಿಗೆಯಲ್ಲೂ ಮೊಬೈಲ್ ಪತ್ತೆಯಾಗಲಿಲ್ಲ. ಆದರೂ, ಹಾಸ್ಟೆಲ್ನ ಅಡುಗೆ ಸಹಾಯಕರು ಲಕ್ಷ್ಮೀ ಮೇಲೆ ಆರೋಪ ಮಾಡಿದ್ದರು. ಇದರಿಂದ ಆಕೆ ಮನನೊಂದಿದ್ದಳು. ಮೊಹರಂ ರಜೆಗೆ ಮನೆಗೆ ತೆರಳಿದ್ದ ಲಕ್ಷ್ಮೀ, ರಜೆ ಮುಗಿದಿದ್ದರಿಂದ ಪೋಷಕರು ಮತ್ತೆ ಹಾಸ್ಟೆಲ್ಗೆ ಬಿಟ್ಟು ಬರುತ್ತಾರೆ ಎಂದು ಹೆದರಿ, ಮಂಗಳವಾರ ರಾತ್ರಿ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಮೃತ ವಿದ್ಯಾರ್ಥಿನಿ ತಂದೆ ಮಲ್ಲಣ್ಣ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್