ಹೆದ್ದಾರಿ ಅಭಿವೃದ್ಧಿ ಕೋರಿ ಸಂಸದೆ ಶೋಭಾ ಮನವಿ
Team Udayavani, Jul 3, 2019, 3:03 AM IST
ಬೆಂಗಳೂರು: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಭೇಟಿಯಾದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೆದ್ದಾರಿಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮನವಿ ಸಲ್ಲಿಸಿದರು.
ಕರಾವಳಿ ಬೈಪಾಸ್- ಮಲ್ಪೆ ರಸ್ತೆ ವಿಸ್ತರಣೆ, ಪರ್ಕಳದಿಂದ- ತೀರ್ಥಹಳ್ಳಿವರೆಗಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಬೇಲೂರು- ಚಿಕ್ಕಮಗಳೂರು ರಸ್ತೆ ಅಭಿವೃದ್ಧಿ, ಶೃಂಗೇರಿ- ಬಾಳೆಹೊನ್ನೂರು- ಆಲ್ದೂರು- ನಾಡಿಪುರ ರಸ್ತೆ ಅಭಿವೃದ್ಧಿ, ತೀರ್ಥಹಳ್ಳಿಯಿಂದ ನಿಮ್ಮಾರದವರೆಗಿನ ರಸ್ತೆ ಅಭಿವೃದ್ಧಿ,
ಬೇಲೂರು- ಚಿಕ್ಕಮಗಳೂರು (ಮೂಡಿಗೆರೆ- ಕಡೂರು ರಸ್ತೆ) ನಗರಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳ ಇತರೆ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಶೋಭಾ ಕರಂದ್ಲಾಜೆ ಮನವಿ ಪತ್ರದಲ್ಲಿ ಕೋರಿದ್ದಾರೆ.