ಮಂಡ್ಯ ರೈತರ ಸಮಸ್ಯೆ ಪ್ರಸ್ತಾಪಿಸಿದ ಸುಮಲತಾ
Team Udayavani, Jul 3, 2019, 3:04 AM IST
ಲೋಕಸಭೆಯಲ್ಲಿ ಮಂಗಳವಾರ ಚೊಚ್ಚಲ ಭಾಷಣ ಮಾಡಿದ ಮಂಡ್ಯ ಸಂಸದೆ ಸುಮಲತಾ, ಮಂಡ್ಯ ರೈತರ ಸಮಸ್ಯೆಗಳನ್ನು ಸಂಸತ್ನ ಮುಂದಿಟ್ಟಿದ್ದಾರೆ. “ಮಂಡ್ಯ ಜಿಲ್ಲೆಯು ಬರಗಾಲದಂಥ ಸ್ಥಿತಿ ಎದುರಿಸುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
ನಾವು ಈ ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ತತ್ಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳುವಂತೆ ನಾನು ಪ್ರಧಾನಿ ಮೋದಿ ಹಾಗೂ ಜಲಶಕ್ತಿ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ನಾವು ನಮ್ಮ ಅನ್ನದಾತರನ್ನು ಹಾಗೂ ಘನತೆಯಿಂದ ಬಾಳುವ ಅವರ ಹಕ್ಕನ್ನು ಉಳಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.