ತಹಶೀಲ್ದಾರ್ ಬೆಂಬಲಿಗರಿಂದ ಸಿಎಂ ಕಾರಿಗೆ ಮುತ್ತಿಗೆ ; ಹೈಡ್ರಾಮಾ
Team Udayavani, Apr 17, 2018, 12:14 PM IST
ಮೈಸೂರು: ಕಾಂಗ್ರೆಸ್ನಲ್ಲಿ ಟಿಕೆಟ್ ವಂಚಿತ ಶಾಸಕರು ಮತ್ತು ಮುಖಂಡರ ಆಕ್ರೋಶ ತೀವ್ರವಾಗಿದ್ದು ಮಂಗಳವಾರ ಹಾನಗಲ್ ಶಾಸಕ ಮನೋಹರ್ ತಹಶೀಲ್ದಾರ್ ಅವರ ನೂರಾರು ಬೆಂಬಲಿಗರು ಸಿಎಂಗೆ ಮುತ್ತಿಗೆ ಹಾಕಿ ಹೈಡ್ರಾಮಾ ಮಾಡಿದ್ದಾರೆ.
ಟಿ.ಕೆ.ಬಡವಾಣೆ ಬಳಿಯಿರುವ ಸಿಎಂ ನಿವಾಸದ ಎದುರು ಜಮಾವಣೆಗೊಂಡ ನೂರಾರು ಬೆಂಬಲಿಗರು ಟಿಕೆಟ್ ಬೇಕು ಟಿಕೆಟ್ ಎಂಬ ಘೋಷಣೆಗಳನ್ನು ಕೂಗಿದರು.
ಕಾರನ್ನು ಅಡ್ಡಗಟ್ಟಿ ರಸ್ತೆಯಲ್ಲೇ ಮಲಗಿ ಉರುಳಾಡಿದ ಕಾರ್ಯಕರ್ತರು ಟಿಕೆಟ್ ಗಾಗಿ ಪಟ್ಟು ಹಿಡಿದರು.
ಸಿಎಂ ಆಕ್ರೋಶಿತ ಕಾರ್ಯಕರ್ತರ ಬಳಿ ತೆರಳಿದರು, ಪೊಲೀಸರು ದಾರಿ ಅನುವು ಮಾಡಿಕೊಟ್ಟರು.
4 ಬಾರಿ ಶಾಸಕ ರಾಗಿ ಆಯ್ಕೆಯಾಗಿರುವ ಬಲಿಜ ಸಮುದಾಯದ ನಾಯಕ ಮನೋಹರ್ ತಹಶೀಲ್ದಾರ್ ಅವರಿಗೆ ಟಿಕೆಟ್ ತಪ್ಪಿಸಿ ಶ್ರೀನಿವಾಸ್ ಮಾನೆ ಅವರಿಗೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi; ಕಾಗೇರಿ ರಿಲಾಕ್ಸ್ ಮೂಡ್: ಪಕ್ಷಿಗಳಿಗೆ ಆಹಾರ, ತೋಟ ಸುತ್ತಾಟ!
Cryptocurrency ವೆಬ್ಸೈಟ್ ಹ್ಯಾಕ್: ಕೊನೆಗೂ ಆರೋಪಿ ಶ್ರೀಕಿ ಬಂಧನ
IPL ರಾಜಸ್ಥಾನ ವಿರುದ್ಧ ಗೆದ್ದ ಡೆಲ್ಲಿ ಪ್ಲೇಆಫ್ ಭರವಸೆ ಜೀವಂತ: ಆರ್ ಸಿಬಿಗೆ ಸವಾಲು
Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ
Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ