ಬುದ್ದಿಜೀವಿಗಳ ವಿರುದ್ಧ ಮತ್ತೆ ಕಿಡಿ ಕಾರಿದ ಅನಂತ್ ಹೆಗಡೆ!
Team Udayavani, Jan 17, 2018, 12:36 PM IST
ಬೆಳಗಾವಿ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತೆ ಬುದ್ದಿಜೀವಿಗಳ ವಿರುದ್ಧ ಕಿಡಿ ಕಾರಿ ಸುದ್ದಿಯಾಗಿದ್ದಾರೆ.
ಬೆಳಗಾವಿಯಲ್ಲಿ ಬುಧವಾರ ನಡೆದ ಸ್ಕಿಲ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಷಣದ ವೇಳೆ ಕೆಂಡಾಮಂಡಲವಾದ ಸಚಿವ ಹೆಗಡೆ ‘ಸೋ ಕಾಲ್ಡ್ ಬುದ್ದಿಜೀವಿಗಳು ಹೇಳ್ತಾರೆ.. ಇಲ್ಲ,ಇಲ್ಲ ನೀವು ಮಾನವರಾಗಬೇಕು ಎಂದು.ಎಂಥ, ನಾನೇನು ದನವ, ಪ್ರಾಣಿಗಳ ತರ ಕಾಣ್ತೀನಾ? ಗೊತ್ತಿಲ್ಲ ಅವರಿಗೆ ದೃಷ್ಟಿ ದೋಷ ಆಗಿರಬೇಕು’ಎಂದು ಕಿಡಿ ಕಾರಿದರು.
‘ಮಾನವರಾಗಬೇಕು ಅನ್ನುತ್ತಾರಲ್ಲ ನಾವು ಹುಟ್ಟಿದ್ದೇ ಮಾನವರಾಗಿ , ಬದುಕುವುದು ಮಾನವರಾಗಿ . ನರ ನಾರಾಯಣ ಆಗಬೇಕು . ನೀವು ಯಾಕೆ ಹೇಳಿಕೊಡುವುದು’ ಎಂದು ಕಿಡಿ ಕಾರಿದರು.
‘ಬುದ್ದಿಜೀವಿ ಸಾಹಿತಿಗಳು ಇವತ್ತು ಬರೀತಾರೆ.ಅವರು ಬರೆದಿದ್ದೆಲ್ಲಾ ಸಾಹಿತ್ಯ,ಗೀಚಿದ್ದೆಲ್ಲಾ ಕಾವ್ಯ. ಅರ್ಥವೂ ಇಲ್ಲ,ತುದಿಯೂ ಇಲ್ಲ, ಬುಡವೂ ಇಲ್ಲ. ಗವರ್ನಮೆಂಟ್ ಸೈಟ್ಗಾಗಿ ಪಟ್ಟ ಕಟ್ಟಿಕೊಳ್ಳುತ್ತಾರೆ’ ಎಂದರು.
‘ಒಬ್ಬ ಕವಿ ಹೇಳುತ್ತಾನೆ ”ಎನ್ನೆದೆಯ ಬಿಸಿ ರಕ್ತಬಸಿ ಬಸಿದು ಮಸಿ ಮಾಡಿ ನಾ ಬರಿಯಬಲ್ಲೇ”. ಬದುಕು ಕೂಡ ಇದನ್ನೇ ಅಪೇಕ್ಷೆ ಪಡುತ್ತದೆ. ನಿಮ್ಮದೆ ಬೆವರು ನಿಮ್ಮದೆ ರಕ್ತ. ನಮ್ಮ ಜೀವನದಲ್ಲಿ ಹೊಸ ಆದರ್ಶ ಸ್ಥಾಪನೆ ಮಾಡಬೇಕು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ