ಸಚಿವರಾಗಿಯೇ ಸದನಕ್ಕೆ ಕಾಲಿಟ್ಟ “ಶಪಥ ವೀರರು’
Team Udayavani, Feb 18, 2020, 3:05 AM IST
ವಿಧಾನಮಂಡಲ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಿದ ನಂತರ ಅನರ್ಹತೆ ಶಿಕ್ಷೆಗೊಳಗಾಗಿ, ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ, “ಸಚಿವ ರಾಗಿಯೇ ಸದನಕ್ಕೆ ಕಾಲಿಡುತ್ತೇವೆ’ ಎಂದು ಶಪಥಗೈದಿ ದ್ದವರು ಕೊನೆಗೂ ತಮ್ಮ ಬಯಕೆ ಈಡೇರಿಸಿಕೊಂಡರು.
ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆಯಾದ ರಮೇಶ್ ಜಾರಕಿಹೊಳಿ, ಬೈರತಿ ಬಸವರಾಜ್, ಗೋಪಾಲಯ್ಯ, ಬಿ.ಸಿ. ಪಾಟೀಲ್, ಎಸ್.ಟಿ.ಸೋಮಶೇಖರ್, ಆನಂದ್ ಸಿಂಗ್, ಶ್ರೀಮಂತ ಪಾಟೀಲ ಸೋಮವಾರ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಉಲ್ಲಸಿತರಾಗಿದ್ದರು.
ರಾಜ್ಯಪಾಲರ ಭಾಷಣ ಆರಂಭವಾಗುವುದಕ್ಕೆ ಮುಂಚೆ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ ಅವರು ಸದನಕ್ಕೆ ಆಗಮಿಸಿ, ಕಾಂಗ್ರೆಸ್, ಜೆಡಿಎಸ್ ಶಾಸಕರ ಬಳಿ ಬಂದು, ಕುಶಲೋಪರಿ ವಿಚಾರಿಸಿದರು. ಬಿ.ಸಿ.ಪಾಟೀಲ ಅವರು ಸಿದ್ದರಾಮಯ್ಯನವರ ಬಳಿ ಬಂದು ಆರೋಗ್ಯ ವಿಚಾರಿಸಿದರು. ಬೈರತಿ ಬಸವರಾಜ್ ಕೈ ಮುಗಿದು ನಮಸ್ಕರಿಸಿದರೆ, ಗೋಪಾಲಯ್ಯ, ನಾರಾ ಯಣಗೌಡ ಸಮೀಪಕ್ಕೆ ತೆರಳಿ ಆತ್ಮೀಯ ವಾಗಿ ಮಾತನಾಡಿದರು.
ಶಿವರಾಮ್ ಹೆಬ್ಟಾರ್ ಅವರು ಆರ್.ವಿ.ದೇಶಪಾಂಡೆ ಅವರ ಕಾಲಿಗೆ ನಮಸ್ಕರಿಸಿದರು. ಎಸ್.ಟಿ.ಸೋಮಶೇಖರ್ ಅವರು ಡಿ.ಕೆ.ಶಿವಕುಮಾರ್ ಬಳಿ ಬಂದು ಕೈ ಕುಲುಕಿದಾಗ, ಬೆನ್ನು ತಟ್ಟಿ ಆಲಿಂಗಿಸಿಕೊಂಡಿದ್ದು ವಿಶೇಷ. ನೂತನ ಸಚಿವರನ್ನು ಅಭಿನಂದಿಸಿದ ಕಾಂಗ್ರೆಸ್-ಜೆಡಿಎಸ್ ಶಾಸಕರು, “ಹೆಂಗೋ ಮಿನಿಸ್ಟ್ರೆ ಆದ್ರಿ ಬಿಡ್ರಪ್ಪಾ’ ಎಂದು ಚಟಾಕಿ ಹಾರಿಸಿ, ಕೈ ಕುಲುಕಿ, ಶುಭ ಕೋರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬಳ್ಳಾರಿಯ ಶಾಸಕರು ಆನಂದ್ಸಿಂಗ್, ಬೆಳಗಾವಿ, ವಿಜಯಪುರ, ಬಾಗಲಕೋಟೆ ಭಾಗದ ಶಾಸಕರು ರಮೇಶ್ ಜಾರಕಿಹೊಳಿ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ ಶಾಸಕರು ಬಿ.ಸಿ.ಪಾಟೀಲ, ಬೆಂಗಳೂರು ಭಾಗದ ಶಾಸಕರು ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಅವರ ಜತೆ ಸಮಾಲೋಚನೆಯಲ್ಲಿ ತೊಡಗಿದ್ದರು. ಬಿ.ಸಿ.ಪಾಟೀಲ ಅವರು ಹಸಿರು ಶಾಲು ಸಮೇತವೇ ಸದನಕ್ಕೆ ಆಗಮಿಸಿದ್ದು ವಿಶೇಷ. ಜಂಟಿ ಅಧಿವೇಶನವಾದ್ದರಿಂದ ಉಭಯ ಸದನಗಳ ಸದಸ್ಯರು ಒಂದೇ ಕಡೆ ಇದ್ದು, ನೂತನ ಸಚಿವರು ಎಲ್ಲರ ಬಳಿ ತೆರಳಿ ಮಾತನಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ