ಮಣ್ಣಿಲ್ಲದೇ ಸಸ್ಯ ಬೆಳೆಸಲು ಸಿದ್ಧತೆ! ಕೃತಕವಾಗಿ ರೆಟಿನಾ ತಯಾರಿಸುವ ಪ್ರಯೋಗವೂ ಆರಂಭ
ಬಾಹ್ಯಾಕಾಶದಲ್ಲಿ ಅಮೆರಿಕದ ಸ್ಪೇಸ್ಎಕ್ಸ್ ತಂಡದ ಅಪೂರ್ವ ಯತ್ನ
Team Udayavani, Apr 28, 2022, 7:50 AM IST
ನವದೆಹಲಿ: ಅಮೆರಿಕದ ಸ್ಪೇಸ್ಎಕ್ಸ್ ಸಂಸ್ಥೆ ಹೊಸತೊಂದು ಸಾಹಸಕ್ಕೆ ಮುಂದಾಗಿದೆ. ಅದರ ನಾಲ್ಕು ಮಂದಿಯ ತಂಡ ಗುರುವಾರ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಲಿದೆ.
ಈ ಗುಂಪು ನಿಲ್ದಾಣ ಮುಟ್ಟಿದ ಕೂಡಲೇ ಅಪರೂಪದ ಪ್ರಯೋಗವೊಂದನ್ನು ಮುಂದುವರಿಸಲಿದೆ. ಭೂಮಿಯಲ್ಲಿ ಸಸ್ಯಗಳನ್ನು ಬೆಳೆಸಲು ಮಣ್ಣು ಬೇಕು, ಬಾಹ್ಯಾಕಾಶದಲ್ಲಿ? ಮಣ್ಣಿಲ್ಲದೇ ಸಸ್ಯ ಬೆಳೆಸಲು ಮುಂದಾಗಿದೆ ಈ ತಂಡ. ಹಾಗಂತ ಇದು ಹೊಸ ಪ್ರಯೋಗವಲ್ಲ.
ಹಿಂದಿನ ತಂಡ ಆರಂಭಿಸಿದ್ದನ್ನು ಇದು ಮುಂದುವರಿಸಲಿದೆ. ರೋಚಕ ವಿಷಯವೆಂದರೆ ಬಾಹ್ಯಾಕಾಶದಲ್ಲಿ ವೃಕ್ಷಗಳನ್ನು ಬೆಳೆಸಲು ಮುಂದಾಗಿರುವುದು!
ಭೂಮಿಯಲ್ಲಿ ಗುರುತ್ವಾಕರ್ಷಣ ಶಕ್ತಿ ವಿಪರೀತವಾಗಿರುತ್ತದೆ. ಹಾಗಾಗಿ ಭೂಮಿಯಲ್ಲಿ ಸಸ್ಯಗಳಿಗೆ ಬೇರುಬಿಡಲಿಕ್ಕಾಗಿ, ಜೀವಸತ್ವಗಳಿಗಾಗಿ ಮಣ್ಣು ಅಥವಾ ನೆಲಬೇಕು. ಬಾಹ್ಯಾಕಾಶದಲ್ಲಿ ಗುರುತ್ವ ಬಲ ಇರದ ಕಾರಣ ಇಲ್ಲಿ ಮಣ್ಣನ್ನು ಬಳಸಲು ಸಾಧ್ಯವಿಲ್ಲ. ಸದ್ಯ ಬಾಹ್ಯಾಕಾಶದಲ್ಲಿ ಸಸ್ಯಗಳು ಸಣ್ಣದಾಗಿ ಬೆಳೆಯುತ್ತಿವೆ. ಇವಕ್ಕೆ ನೀರು, ಪೋಷಕಾಂಶಗಳನ್ನು ಮುಟ್ಟಿಸಲು ಬೇರೆ ಮಾರ್ಗವನ್ನು ಬಳಸಲಾಗುತ್ತಿದೆ. ಆದರೆ ಅಲ್ಲಿನ ವಸ್ತುಗಳ ತೂಕ ಕಡಿಮೆಯಿರುವುದು, ನಿರ್ದಿಷ್ಟ ಜಾಗದಲ್ಲಿ ಹಿಡಿಸುವುದು, ನಿರ್ವಹಣೆ, ಸ್ವತ್ಛತೆ ಮೊದಲಾದ ಸಮಸ್ಯೆಗಳಿಂದ ದೊಡ್ಡದಾಗಿ ಬೆಳೆಸಲು ಆಗುತ್ತಿಲ್ಲ. ಆದ್ದರಿಂದಲೇ ಬಾಹ್ಯಾಕಾಶ ವಿಜ್ಞಾನಿಗಳು ಹೈಡ್ರೊಪೊನಿಕ್ ಮತ್ತು ಏರೋಪೊನಿಕ್ ತಂತ್ರಜ್ಞಾನ ಬಳಸಿ ಸಸ್ಯಗಳನ್ನು ದೊಡ್ಡದಾಗಿ ಬೆಳೆಸಲು ಹೊರಟಿದ್ದಾರೆ.
ರೆಟಿನಾ ತಯಾರಿಸಲು ಸಿದ್ಧತೆ:
ಇನ್ನೊಂದು ವಿಚಾರ ಗೊತ್ತಾ? ಬಾಹ್ಯಾಕಾಶದಲ್ಲಿ ಇದೇ ತಂಡ ಕೃತಕವಾಗಿ ಕಣ್ಣಿನ ರೆಟಿನಾ ಸಿದ್ಧಪಡಿಸಲು ಹೊರಟಿದೆ. ಬ್ಯಾಕ್ಟೀರಿಯರ್ಹಾಡಾಪ್ಸಿನ್ ಎಂಬ ಪ್ರೊಟೀನ್ ಬಳಸಿಕೊಂಡು ರೆಟಿನಾ ಸಿದ್ಧಪಡಿಸಲು ಹೊರಡಲಾಗಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಭೂಮಿಯಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಕೋಟ್ಯಂತರ ಮಂದಿ ಇದರ ಲಾಭ ಪಡೆಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?