ತಾನು ಸಾಚಾ ಎಂದು ತೋರಿಸಲು ಉಗ್ರ ಸಯೀದ್ ವಿರುದ್ಧ ಪಾಕ್ ಸುಳ್ಳು ಕೇಸು!
Team Udayavani, Aug 18, 2019, 5:19 PM IST
ಇಸ್ಲಾಮಾಬಾದ್: ಭಯೋತ್ಪಾದನೆ ವಿಷಯದಲ್ಲಿ ನಾವು ಸತ್ಯವಂತರಾಗಿ ನಡೆಯುತ್ತಿದ್ದೇವೆ, ಯಾವುದೇ ರೀತಿ ಬೆಂಬಲ ಕೊಡುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ತೋರಿಸಲು ಪಾಕಿಸ್ಥಾನ ಇದೀಗ ಹೊಸ ನಾಟಕ ಆರಂಭಿಸಿದೆ.
ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎ) ಸಭೆಗೆ ದಿನಗಳು ಹತ್ತಿರವಾಗುತ್ತಿರುವಂತೆಯೇ, ಒಂದು ಸುಳ್ಳು ಎಫ್ಐಆರ್ ಅನ್ನು ದಾಖಲಿಸಿದೆ.
ಇದರಲ್ಲಿ ನಿಷೇಧಿತ ಸಂಘಟನೆಯಾದ ಲಷ್ಕರ್ ಎ ತೋಯ್ಬಾದ ಸಹ ಸಂಘಟನೆ ದಾವಾತ್ ವಾಲ್ ಇರ್ಷಾದ್ ವಿರುದ್ಧ ಭೂಮಿ ಅಕ್ರಮವಾಗಿ ವಶಪಡಿಸಿ, ಭಯೋತ್ಪಾದನೆ ಚಟುವಟಿಕೆಗೆ ಬಳಸಿದ ಆರೋಪವಿದೆ. ಆದರೆ ಎಲ್ಲೂ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಹೆಸರೇ ಇಲ್ಲ. ಸಂಘಟನೆಯ ಇತರ ಪ್ರಮುಖರ ಹೆಸರೂ ಇಲ್ಲ. ಲಷ್ಕರ್ ಹೆಸರು ಬದಲಾಗಿ ಜಮಾತ್ ಉದ್ ದಾವಾ ಸಂಘಟನೆಯಾಗಿದ್ದು, ಅದರ ಹೆಸರೂ ಎಫ್ಐಆರ್ನಲ್ಲಿ ಇಲ್ಲ. ಆದ್ದರಿಂದ ಈ ಪ್ರಕರಣ ಕೋರ್ಟ್ನಲ್ಲಿ ಬಿದ್ದು ಹೋಗಬಹುದು ಎಂದು ಹೇಳಲಾಗಿದೆ.
ಕೆಲವೇ ದಿನಗಳಲ್ಲಿ ಎಫ್ಎಟಿಎ ಸಭೆ ನಡೆಸಲಿದ್ದು, ಇದು ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸದಂತೆ ಪಾಕಿಸ್ಥಾನ ನಾಟಕವಾಡುತ್ತಿದೆ. ಒಂದು ವೇಳೆ ಕಪ್ಪು ಪಟ್ಟಿಗೆ ಸೇರಿದ್ದೇ ಆದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನಕ್ಕೆ ಯಾವುದೇ ಹೂಡಿಕೆಗಳು ಹರಿದು ಬರಲಾರವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು