ಅಮೆರಿಕದಲ್ಲಿ ವೈದ್ಯನನ್ನೇ ಅಟ್ಟಾಡಿಸಿ ಕೊಂದ ರೋಗಿ
Team Udayavani, Sep 16, 2017, 10:10 AM IST
ಕನ್ಸಾಸ್: ಅಮೆರಿಕದಲ್ಲಿ ತೆಲಂಗಾಣ ಮೂಲದ ಮನಃಶಾಸ್ತ್ರಜ್ಞರೊಬ್ಬರನ್ನು ರೋಗಿಯೇ ಅಟ್ಟಾಡಿಸಿ, ಇರಿದು ಹತ್ಯೆ ಮಾಡಿದ್ದಾನೆ. ಅವರ ರೋಗಿಯೇ ಈ ಕೃತ್ಯ ಎಸಗಿದ್ದಾನೆ. ಅಮೆರಿಕದ ಕನ್ಸಾಸ್ನಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ಇದೊಂದು ಜನಾಂಗೀಯ ಹತ್ಯೆ ಎಂದು ನಂಬಲಾಗಿತ್ತಾದರೂ, ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ 21 ವರ್ಷ ವಯಸ್ಸಿನ ಭಾರತೀಯ-ಅಮೆರಿಕನ್ ಯುವಕನನ್ನು ಬಂಧಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದು ಗೊತ್ತಾಗಿಲ್ಲ.
ಅಸುನೀಗಿದ ವೈದ್ಯರನ್ನು ಡಾ| ಅಚ್ಯುತ ರೆಡ್ಡಿ (57) ಎಂದು ಗುರುತಿಸಲಾಗಿದೆ. ಅವರ ತಂದೆ ಬೆಂಗಳೂರು ಮೂಲದವರಾಗಿದ್ದು, ತಾಯಿ ಹೈದರಾಬಾದ್ನವರು ಎಂದು ಕೆಲ ಮಾಧ್ಯಮ ವರದಿಗಳು ತಿಳಿಸಿವೆ. ಅಚ್ಯುತರ ಪತ್ನಿ ಬೀನಾ ರೆಡ್ಡಿ ಕೂಡ ವೈದ್ಯರು. ಬುಧವಾರ ಸಂಜೆ 7 ಸಮಯದಲ್ಲಿ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸರು ಉಮರ್ ರಶೀದ್ ದತ್ ಎಂಬ 21 ವರ್ಷದ ಭಾರತ ಅಮೆರಿಕನ್ ಯುವಕನನ್ನು ಬಂಧಿಸಿ ದ್ದಾರೆ. ವೈದ್ಯ ಹಾಗೂ ಉಮರ್ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ ಆರೋಪಿ ತನ್ನ ಬಳಿ ಇದ್ದ ಚಾಕು ತೆಗೆದುಕೊಂಡು ವೈದ್ಯನನ್ನು ಕ್ಲಿನಿಕ್ನಲ್ಲಿ ಅಟ್ಟಾಡಿಸಿ, ಹಲವು ಬಾರಿ ಇರಿದು ಕೊಂದಿ ದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿ ವೈದ್ಯ ಅಚ್ಯುತ್ ಅವರ ಬಳಿ ಚಿಕಿತ್ಸೆಗೆ ಬರುತ್ತಿದ್ದ ರೋಗಿ. ಹತ್ಯೆ ನಡೆದ ದಿನ ಇಬ್ಬರೂ ಒಟ್ಟಿಗೇ ಕ್ಲಿನಿಕ್ಗೆ ಬಂದಿದ್ದಾರೆ. ಆ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನು ಗಮನಿಸಿದ ಕಚೇರಿ ಕೋಣೆಯೊಳಗೆ ಹೋದಾಗ ಆರೋಪಿ ಉಮರ್, ಅಚ್ಯುತ್ರನ್ನು ನಿಂದಿಸುತ್ತಿದ್ದ. ಮ್ಯಾನೇಜರ್ ಮಧ್ಯಪ್ರವೇಶಿಸಿ ನಿಂದಿಸಲು ಕಾರಣ ಕೇಳಿದಾಗ ವೈದ್ಯ ಅಚ್ಯುತ್ ತಪ್ಪಿಸಿಕೊಳ್ಳಲು ನೋಡಿದ್ದಾರೆ. ಈ ವೇಳೆ ಕ್ಲಿನಿಕ್ನಲ್ಲೇ ಅಟ್ಟಾಡಿಸಿದ ಆರೋಪಿ, ಇರಿದು ಹತ್ಯೆ ಮಾಡಿದ್ದಾನೆ. ನಾವು ಸ್ಥಳಕ್ಕೆ ತೆರಳುವ ಹೊತ್ತಿಗೆ ಅಚ್ಯುತ್ ಕೊನೆಯುಸಿರೆಳೆದಿದ್ದರು,’ ಎಂದು ಪೊಲೀಸ್ ಅಧಿಕಾರಿ ಟೊಡ್ ಓಜಿಲ್ ತಿಳಿಸಿದ್ದಾರೆ.
ಕ್ಲಬ್ಗ ಹೋಗಿದ್ದ
ವೈದ್ಯನನ್ನು ಹತ್ಯೆಗೈದ ಅನಂತರ ಉಮರ್ ಕ್ಲಬ್ ಒಂದಕ್ಕೆ ಹೋಗಿದ್ದ. ಒಳಕ್ಕೆ ತೆರಳುವ ಮುನ್ನ ಆತ ಕಾರ್ನಲ್ಲಿ ಕೆಲ ಹೊತ್ತು ಕುಳಿತು, ನಂತರ ಒಳ ಪ್ರವೇಶಿಸಿದ್ದ. ಅದನ್ನು ಭದ್ರತಾ ಸಿಬಂದಿ ಗಮನಿಸಿ ಪೊಲೀಸ ರಿಗೆ ಕರೆ ಮಾಡಿ ಅನುಮಾನಾಸ್ಪದ ವ್ಯಕ್ತಿ ಇದ್ದಾನೆ. ಅವನ ಮೈ ಮೇಲೆ ರಕ್ತದ ಕಲೆಗಳಿವೆ ಎಂದಿದ್ದಾನೆ. ಪೊಲೀಸರು ಆಗಮಿಸಿ ಆತನನ್ನು ಬಂಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ