ಲಾಕ್ಡೌನ್ ಇಲ್ಲದೆ ಗೆದ್ದ ಜಪಾನ್
ತುರ್ತು ಪರಿಸ್ಥಿತಿ ಅಂತ್ಯದಲ್ಲಿ ಕೇವಲ 12 ಸೋಂಕಿತರು ಪತ್ತೆ
Team Udayavani, May 26, 2020, 6:52 AM IST
ಸಾಂದರ್ಭಿಕ ಚಿತ್ರ
ಟೋಕಿಯೊ: ಲಾಕ್ಡೌನ್ ಇಲ್ಲದೆ, ಸಮೂಹ ಪರೀಕ್ಷೆಗಳನ್ನೂ ನಡೆಸದೇ ಜಪಾನ್ ಕೋವಿಡ್ ಹೋರಾಟದಲ್ಲಿ ಗೆದ್ದಿದೆ. ಕೊರೊನಾ ತುರ್ತು ಪರಿಸ್ಥಿತಿ ರದ್ದುಗೊಳಿಸುತ್ತಿರುವಂತೆಯೇ ಕೇವಲ 12 ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಜಪಾನಿನ ಎಮರ್ಜೆನ್ಸಿ ಬೇರೆಡೆಯಂತೆ ಸಂಪೂರ್ಣ ನಿಷೇಧಾಜ್ಞೆ ಆಗಿರಲಿಲ್ಲ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಜನ ಓಡಾಡುತ್ತಿದ್ದರು. ಹೊಟೇಲ್ಗಳು, ಸೆಲೂನ್ಗಳು, ಮಾಲ್ಗಳು ಎಂದಿನಂತೆ ತೆರೆದಿದ್ದವು. ಆ್ಯಪ್ ಡೌನ್ಲೋಡ್ನಂಥ ದಾರಿಯಲ್ಲೂ ಜಪಾನ್ ಸಾಗಲಿಲ್ಲ. ಇಡೀ ಜಗತ್ತು ಪರೀಕ್ಷೆ ಪರೀಕ್ಷೆ ಎನ್ನುತ್ತಿದ್ದಾಗ, ಜಪಾನ್ ತನ್ನ ಜನಸಂಖ್ಯೆಯ ಶೇ.0.2ರಷ್ಟು ಮಂದಿಯನ್ನು ಮಾತ್ರವೇ ಪರೀಕ್ಷೆಗೊಳಪಡಿಸಿದೆ. ಇದುವರೆಗೆ ಜಪಾನ್ನಲ್ಲಿ ಕೇವಲ 820 ಮಂದಿಯಷ್ಟೇ ಸಾವನ್ನಪ್ಪಿದ್ದಾರೆ. ಇತರೆ 7 ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ, ಈ ಸಂಖ್ಯೆ ತೀರಾ ಕಡಿಮೆ.
ಕಾರಣ ಏನು?: ಜಪಾನ್ ಕೋವಿಡ್ ಹೇಗೆ ಗೆದ್ದಿತು ಎನ್ನುವುದೇ ತಜ್ಞರಿಗೆ ಅಚ್ಚರಿ. ಆರಂಭದಲ್ಲೇ ಮಾಸ್ಕ್ ಸಂಸ್ಕೃತಿ ಕಡ್ಡಾಯಗೊಳಿಸಿ, ಶಾಲೆಗಳನ್ನೆಲ್ಲ ಮುಚ್ಚಲಾಗಿತ್ತು. ಅತಿ ಕಡಿಮೆ ಸ್ಥೂಲಕಾಯದ ಮಂದಿ ಇರುವುದರಿಂದ, ವೈರಾಣುವಿನ ಮಾರಣಾಂತಿಕ ದಾಳಿ ಸಾಧ್ಯವಾಗಲಿಲ್ಲ ಎಂದು ಊಹಿಸಲಾಗುತ್ತಿದೆ.
50 ಸಾವಿರ ದಾದಿಯರ ತಪಸ್ಸು: ಜನವರಿ ಮಧ್ಯದಲ್ಲಿ ಮೊದಲ ಪ್ರಕರಣ ಕಂಡು ಬಂದಾಗ, ಸರಕಾರ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿತು. ದೇಶಕ್ಕೆ ಪದೇಪದೇ ಕಾಡುವ ಇನ್ ಫ್ಲ್ಯೂಯೆಂಝಾ, ಕ್ಷಯ ರೋಗಗಳ ನಿವಾರಣೆಗೆ ಕೆಲಸ ಮಾಡುತ್ತಿದ್ದ 50 ಸಾವಿರ ದಾದಿಯರಿಗೆ, ಸೋಂಕಿತರ ಪತ್ತೆಯ ಕೆಲಸ ಹಚ್ಚಲಾಯಿತು. ಸೋಂಕು ಹಬ್ಬುವಿಕೆಯ ಕುರಿತು ಸಮಗ್ರ ಜ್ಞಾನ ಹೊಂದಿದ್ದ, ಅನುಭವಿ ದಾದಿಯರು ಕೊರೊನಾವನ್ನು ಸುಲಭದಲ್ಲಿ ಕಟ್ಟಿಹಾಕಿದ್ದಾರೆ.
ಮರು ಅಲೆಯ ಭಯ
ತುರ್ತು ಪರಿಸ್ಥಿತಿಯನ್ನು ವಾಪಸ್ ಪಡೆದುಕೊಂಡರೂ ಕೋವಿಡ್ ದ ಮರುಅಲೆಯ ಭಯವಿದೆ. ಈಗಾಗಲೇ ಜಪಾನ್, ಅಮೆರಿಕದ ಗಿಲ್ಯಾಡ್ ಸೈನ್ಸಸ್ ಸಂಶೋಧಿಸುತ್ತಿರುವ ರೆಮ್ಡಿಸಿವರ್ ಲಸಿಕೆಯ ಮಾರಾಟ ಒಪ್ಪಂದಕ್ಕೆ ಎಲ್ಲ ದೇಶಗಳಿಗೂ ಮೊದಲೇ ಜಪಾನ್ ಸರಕಾರ ಸಹಿ ಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ