ನಾವ್ಯಾರೂ ಮೂಲತಃ ಭಾರತೀಯರೇ ಅಲ್ವಂತೆ!
Team Udayavani, May 12, 2017, 1:46 AM IST
ಲಂಡನ್: ಭಾರತದ ಮೂಲ ನಿವಾಸಿಗರು ಯಾರು? ರ್ಯರೋ ಇಲ್ಲಾ ದ್ರಾವಿಡರೋ? ಈ ರೀತಿಯ ಎಲ್ಲ ಪ್ರಶ್ನೆ, ಗೊಂದಲ, ಜಿಜ್ಞಾಸೆಗಳಿಗೆ ವಿಜ್ಞಾನಿಗಳು ಹೊಸ ವಾದ ಮಂಡಿಸಿದ್ದಾರೆ. ವರದಿ ಪ್ರಕಾರ, ನಮ್ಮ ಪೂರ್ವಜರಾದಿಯಾಗಿ ಭರತಖಂಡದಲ್ಲಿ ನೆಲೆಸಿರುವ ನಮ್ಮ ಪೀಳಿಗೆ ಮತ್ತು ನಾವ್ಯಾರೂ ಇಲ್ಲಿನ ಮೂಲ ನಿವಾಸಿಗಳಲ್ಲ. ಆರ್ಯರು, ದ್ರಾವಿಡರು ಸೇರಿದಂತೆ ಎಲ್ಲರೂ ಜಗತ್ತಿನ ಬೇರೆ ಬೇರೆ ಭಾಗಗಳಿಂದ ವಲಸೆ ಬಂದವರೇ. ಈ ಅಂಶವನ್ನು ದಾಖಲೆಗಳ ಸಹಿತ ವಾದಿಸಿರುವುದು ಬ್ರಿಟನ್ನ ಯೂನಿವರ್ಸಿಟಿ ಆಫ್ ಹುಡ್ಡರ್ಫೀಲ್ಡ್.
ನಮ್ಮೆಲ್ಲರ ಪೂರ್ವಜರು ಆಫ್ರಿಕಾ, ಇರಾನ್ ಅಥವಾ ಮಧ್ಯ ಏಷ್ಯಾದಿಂದ ವಲಸೆ ಬಂದಿದ್ದಾರೆ. ದೇಶದ ನೆಲದ ಮೇಲೆ ಮೊದಲು ಕಾಲಿರಿಸಿದ್ದು ಆಫ್ರಿಕನ್ನರು. ಸುಮಾರು 50,000 ವರ್ಷಗಳ ಹಿಂದೆ ಆಫ್ರಿಕನ್ನರು ಭಾರತಕ್ಕೆ ಬಂದಿದ್ದು, ಬೇಟೆಯಾಡುವ ಮೂಲಕ ಜೀವನ ಸಾಗಿಸುತ್ತಿದ್ದ ಇವರೇ ಇಲ್ಲಿ ಆಧುನಿಕ ನಾಗರಿಕತೆಗೆ ನಾಂದಿ ಹಾಡಿದ್ದಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅನಂತರ ಈಗ್ಗೆ ಸುಮಾರು 10ರಿಂದ 20 ಸಾವಿರ ವರ್ಷಗಳ ಹಿಂದೆ ಇಲ್ಲಿಗೆ ವಲಸೆ ಬಂದ ಇರಾನ್ ಮಂದಿ, ಭಾರತದಲ್ಲಿ ಕೃಷಿ ಅಥವಾ ವ್ಯವಸಾಯವನ್ನು ಪರಿಚಯಿಸಿ, ದುಡಿಮೆ ಸಂಸ್ಕೃತಿಗೆ ಬುನಾದಿ ಹಾಕಿದರು. ಈ ಎಲ್ಲ ಕುರುಹುಗಳನ್ನು ಮೈಟೋಕಾಂಡ್ರಿಯಾದ ಡಿಎನ್ಎಯಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದ್ದು, ಸ್ತ್ರೀ ಕುಲದ ಕುರುಹುಗಳು ಕೂಡ ಇಲ್ಲಿ ಸ್ಪಷ್ಟವಾಗಿವೆ. ಇನ್ನೊಂದೆಡೆ ಪುರುಷರ ಸಂತತಿಯ ಕುರುಹುಗಳನ್ನು ದೃಢಪಡಿಸುವ ವೈ-ಕ್ರೋಮೋಜೋಮ್ಗಳು ಅತ್ಯಂತ ವಿಭಿನ್ನವಾಗಿವೆ ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ. ‘ಅಧ್ಯಯನದ ವೇಳೆ ದೊರೆತಿರುವ ಕೆಲ ಕುರುಹುಗಳು ತೀರಾ ಇತ್ತೀಚಿನವುಗಳಾಗಿವೆ. ಸುಮಾರು 5 ಸಾವಿರ ವರ್ಷಗಳ ಹಿಂದಷ್ಟೇ ಮಧ್ಯ ಏಷ್ಯಾದಿಂದ ಜನಸಮೂಹ ಭಾರತಕ್ಕೆ ವಲಸೆ ಬಂದಿರುವುದನ್ನು ದೃಢೀಕರಿಸುವ ಸಂಕೇತಗಳು ಸ್ಪಷ್ಟವಾಗಿವೆ’ ಎಂದು ಅಧ್ಯಯನದ ಸಹ ಲೇಖಕರಾಗಿರುವ ಮರೀನಾ ಸಿಲ್ವಾ ಹೇಳುತ್ತಾರೆ.
‘ಇಂಡೋ ಯುರೋಪಿಯನ್ ಭಾಷೆ ಮಾತನಾಡುವವರು ತಾಮ್ರ ಯುಗದ ಸಂದರ್ಭದಲ್ಲಿ ಮೊದಲು ಕಾಣಿಸಿಕೊಂಡಿರುವ ಸಾಧ್ಯತೆಗಳಿವೆ. ಇವರು ಕಪ್ಪು ಸಾಗರ ಮತ್ತು ಕಾಸ್ಪಿಯನ್ ಸಮುದ್ರದ ಮಧ್ಯೆ ಇರುವ ಕಾಕಸಸ್ನ ಉತ್ತರ ಹುಲ್ಲುಗಾವಲು ಪ್ರದೇಶದಿಂದ ಬಂದವರಾಗಿದ್ದು, ಕುಟುಂಬಗಳಲ್ಲಿ ಪುರುಷ ಪ್ರಾಧಾನ್ಯ ಇತ್ತು. ಕುದುರೆ ಪಳಗಿಸಿಕೊಂಡು ಬಳಸುತ್ತಿದ್ದ ಈ ಸಮುದಾಯದ ಜನ, ಹಿಂದೂ ಸಾಂಪ್ರದಾಯಿಕ ಭಾಷೆಯಾಗಿರುವ ಸಂಸ್ಕೃತವನ್ನು ಮಾತನಾಡುತ್ತಿದ್ದರು’ ಎಂದು ಸಿಲ್ವಾ ಅಭಿಪ್ರಾಯಪಡುತ್ತಾರೆ. ಭಾರತೀಯರ ಮೂಲದ ಕುರಿತು ವಿದ್ವಾಂಸರು ಮತ್ತು ವಿಜ್ಞಾನಿಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಅಲ್ಲದೆ ಭಾರತೀಯರ ಮೂಲದ ಕುರಿತು ಅಧ್ಯಯನ ನಡೆಸಲು ಪೂರ್ವಜರ ಡಿಎನ್ಎ ಒದಗಿಸುವ ಮೂಲಗಳ ಕೊರತೆ ಇದೆ ಎಂದು ಸಂಶೋಧಕರ ತಂಡ ಅಭಿಪ್ರಾಯಪಟ್ಟಿದೆ.
ಯಾರು ಯಾವಾಗ ಬಂದ್ರು?
50,000ವರ್ಷ ಹಿಂದೆ : ಆಫ್ರಿಕನ್ನರು
20,000ವರ್ಷ ಹಿಂದೆ : ಇರಾಕಿಗಳು
5,000ವರ್ಷ ಹಿಂದೆ : ಮಧ್ಯ ಏಷ್ಯನ್ನರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ