ಭಾರತವೇ ನಮಗೆ ದೊಡ್ಡಣ್ಣ; ಚೀನ ನಂಬಿದ್ದ ಲಂಕಾಕ್ಕೆ ಜ್ಞಾನೋದಯ

ಭಾರತದ ಪರ ಬ್ಯಾಟ್‌ ಬೀಸಿದ ರಣತುಂಗ

Team Udayavani, Apr 7, 2022, 7:20 AM IST

ಭಾರತವೇ ನಮಗೆ ದೊಡ್ಡಣ್ಣ; ಚೀನ ನಂಬಿದ್ದ ಲಂಕಾಕ್ಕೆ ಜ್ಞಾನೋದಯ

ಕೊಲೊಂಬೊ: ಚೀನ ರೂಪಿಸಿದ ಸಾಲದ ಖೆಡ್ಡಾದಲ್ಲಿ ಬಿದ್ದು ನರಳುತ್ತಿರುವ ಶ್ರೀಲಂಕಾಕ್ಕೆ ಕೊನೆಗೂ ಭಾರತವೇ ಶ್ರೇಷ್ಠ ಎಂಬ ಜ್ಞಾನೋದಯವಾಗಿದೆ.

“ಭಾರತ ನಮಗೆ ದೊಡ್ಡಣ್ಣ ಇದ್ದಂತೆ. ಭಾರತವನ್ನು ಅನುಸರಿಸುವುದೇ ಉತ್ತಮ’ ಎಂದು ಪ್ರತಿಪಕ್ಷ ಮುಖಂಡ, ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗ, ಲಂಕಾ ಸರಕಾರಕ್ಕೆ ಬುದ್ಧಿ ಹೇಳಿದ್ದಾರೆ.

“ಹಣಕ್ಕಾಗಿ ನಾವು ಇಡೀ ಜಗತ್ತನ್ನು ಬೇಡುವಂಥ ದುಃಸ್ಥಿತಿ ಬಂದಿದೆ. ಅದೃಷ್ಟವಶಾತ್‌ ಭಾರತದಂಥ ದೇಶಗಳು ನಮಗೆ ಸಾಕಷ್ಟು ಸಹಾಯ ಮಾಡುತ್ತಿವೆ. ಪೆಟ್ರೋಲ್‌, ಔಷಧ, ಮೂಲಭೂತ ಆವಶ್ಯಕ ವಸ್ತುಗಳನ್ನು ನೀಡಿ ಭಾರತ ಔದಾರ್ಯ ತೋರಿದೆ’ ಎಂದು ಸ್ಮರಿಸಿದ್ದಾರೆ.

“ರಾಜಪಕ್ಸ ಸರಕಾರ, ದೇಶದ ಆರ್ಥಿಕತೆಯ ನಿರ್ವಹಣೆಯಲ್ಲಿ ಸಂಪೂರ್ಣ ಸೋತಿದೆ. ಜನರ ಈಗಿನ ಆಕ್ರೋಶ ರಕ್ತಪಾತಕ್ಕೆ ಕಾರಣವಾಗದಿದ್ದರೆ ಸಾಕು. ರಾಜಪಕ್ಸ ಸರಕಾರ ಅಸ್ತಿತ್ವದಲ್ಲಿದ್ದಷ್ಟು ದೇಶಕ್ಕೇ ಅಪಾಯ. ಆದಷ್ಟು ಬೇಗ ವಿಸರ್ಜನೆಗೊಳ್ಳಬೇಕು’ ಎಂದಿದ್ದಾರೆ.

ಭಾರತದಿಂದ ಮತ್ತಷ್ಟು ಇಂಧನ: ಕೇವಲ 24 ಗಂಟೆಗಳಲ್ಲಿ ಭಾರತ 36 ಸಾವಿರ ಮೆಟ್ರಿಕ್‌ ಟನ್‌ ಪೆಟ್ರೋಲ್‌, 40 ಸಾವಿರ ಮೆಟ್ರಿಕ್‌ ಟನ್‌ ಡೀಸೆಲ್‌ ಅನ್ನು ಶ್ರೀಲಂಕಾಕ್ಕೆ ತಲುಪಿಸಿದೆ. ಇದುವರೆಗೆ ಭಾರತ 2,70,000 ಮೆಟ್ರಿಕ್‌ ಟನ್‌ ಇಂಧನ ಪೂರೈಸಿದೆ ಎಂದು ಕೊಲೊಂಬೊದಲ್ಲಿನ ಭಾರತೀಯ ಹೈಕಮಿಷನ್‌ ಕಚೇರಿ ತಿಳಿಸಿದೆ.

ಇದಲ್ಲದೆ, ಏರ್‌ಪೋರ್ಟ್‌, ಆಸ್ಪತ್ರೆ ನಿರ್ಮಾಣಗಳಿಗೂ ಅಪಾರ ನೆರವಾಗಿದೆ.

ತುರ್ತು ಪರಿಸ್ಥಿತಿ ವಾಪಸ್‌: ಎ.1ರಂದು ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ದೇಶಾದ್ಯಂತ ಪ್ರತಿಭಟನೆ ತೀವ್ರಗೊಂಡ ಕಾರಣ, ರಾಷ್ಟ್ರಾಧ್ಯಕ್ಷ ಗೋಟಬಯ ರಾಜಪಕ್ಸ ಅವರು ತುರ್ತು ಪರಿಸ್ಥಿತಿ ನಿಲುವನ್ನು ಮಂಗಳವಾರ ರಾತ್ರಿ ಹಿಂಪಡೆದಿದ್ದಾರೆ.

ಆದಾಗ್ಯೂ, ಸಂಸತ್‌ನ ಬಳಿ “ಗೋಟ ಗೋ ಹೋಮ್‌’ ಎಂಬ ಘೋಷಣೆಯ ಪ್ಲಕಾರ್ಡ್‌ ಗಳನ್ನು ಹಿಡಿದ ಸಹಸ್ರಾರು ಜನ ಬುಧವಾರ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಸೈನಿಕರು ಗುಂಡು ಪ್ರಯೋಗಿಸಬೇಕಾಯಿತು.

ಜಪ್ಪಯ್ಯ ಅಂದ್ರೂ ಕೆಳಗಿಳಿಯಲ್ಲ!
ಸರಕಾರದ ಬೆಂಬಲ ಅಲ್ಪ ಮೊತ್ತಕ್ಕೆ ಕುಸಿದಿದ್ದರೂ, ರಾಷ್ಟ್ರಾಧ್ಯಕ್ಷ ಗೋಟಬಯ ರಾಜಪಕ್ಸ ತಮ್ಮ ಮೊಂಡು ನಡೆ ಮುಂದುವರಿಸಿದ್ದಾರೆ. “ಎಂಥ ಸನ್ನಿವೇಶ ವನ್ನೂ ನಮ್ಮ ಸರಕಾರಎದುರಿಸಲು ಸಿದ್ಧ. ರಾಷ್ಟ್ರಾಧ್ಯಕ್ಷರು ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡುವುದಿಲ್ಲ’ ಎಂದು ಸಚಿವ ಜಾನ್‌ಸ್ಟನ್‌ ಫ‌ರ್ನಾಂಡೋ, ಸಂಸತ್‌ಗೆ ತಿಳಿಸಿದ್ದಾರೆ.

ದಿನದ ಬೆಳವಣಿಗೆಗಳೇನು?
-ಎಸ್‌ಎಲ್‌ಪಿಪಿ ಮೈತ್ರಿಕೂಟ ಸರಕಾರದ 42 ಸಂಸದರು, ತಾವು ಸರಕಾರದಿಂದ ಪ್ರತ್ಯೇಕಗೊಂಡಿದ್ದು, ಸ್ವತಂತ್ರವಾಗಿ ಜನಸೇವೆ ನಡೆಸುವುದಾಗಿ ಸಂಸತ್‌ನಲ್ಲಿ ಘೋಷಿಸಿದ್ದಾರೆ.
-ಆಸ್ಪತ್ರೆಗಳಲ್ಲಿ ಚಿಕಿತ್ಸೆಗೂ ಹಣವಿಲ್ಲದ ಕಾರಣ, ವೈದ್ಯರು ಸರಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ರೋಗಿಗಳ ಪರದಾಟ ಹೇಳತೀರದಾಗಿದೆ.
-ಶ್ರೀಲಂಕಾದಲ್ಲಿ ಹಸಿವಿನಿಂದ ಭಾರೀ ಅನಾಹುತ ಸಂಭವಿ ಸಬಹುದು ಎಂದು ಸ್ಪೀಕರ್‌, ಸಂಸತ್‌ನಲ್ಲಿ ಎಚ್ಚರಿಸಿದ್ದಾರೆ.

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.