ಜೆದ್ದಾ ಬಾಂಬ್‌ ದಾಳಿಕೋರ ಪಾಕಿ ಅಲ್ಲ; ಭಾರತೀಯ: DNA ಪರೀಕ್ಷೆ


Team Udayavani, May 1, 2018, 3:49 PM IST

Fayaz-Kagzi-700.jpg

ಅಬುಧಾಬಿ : 2016ರಲ್ಲಿ  ಸೌದಿ ಅರೇಬಿಯದ ಜೆದ್ದಾದಲ್ಲಿನ ಅಮೆರಿಕ ಕಾನ್ಸುಲೇಟ್‌ ಸಮೀಪ ತನ್ನನ್ನು ತಾನು ಸ್ಫೋಟಿಸಿಕೊಂಡು ಮೃತಪಟ್ಟಿದ್ದ ಆತ್ಮಾಹುತಿ ದಾಳಿಕೋರನು ಈ ವರೆಗೆ ತಿಳಿದಿರುವಂತೆ ಪಾಕಿಸ್ಥಾನದವನಾಗಿರದೆ ಭಾರತೀಯನಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡಿಎನ್‌ಎ ಪರೀಕ್ಷೆ ಮೂಲಕ ಆತ್ಮಾಹುತಿ ದಾಳಿಕೋರನ ಗುರುತು ದೃಢಪಟ್ಟಿರುವುದಾಗಿ ಸೌದಿ ಅಧಿಕಾರಿಗಳು ಹೇಳಿದ್ದಾರೆ. 

ಸೌದಿ ಅರೇಬಿಯದ ಅಧಿಕಾರಿಗಳು ಆರಂಭದಲ್ಲಿ ಆತ್ಮಾಹುತಿ ಬಾಂಬ್‌ ದಾಳಿಕೋರನನ್ನು ಪಾಕ್‌ ಪ್ರಜೆ, ಅಬ್ದುಲ್ಲ ಕಲ್‌ಜಾರ್‌ ಖಾನ್‌ ಎಂದು ಗುರುತಿಸಿದ್ದರು. ಆದರೆ ಸೌದಿ ಅಧಿಕಾರಿಗಳು ಬಿಡುಗಡೆ ಮಾಡಿದ್ದ ಆತ್ಮಾಹುತಿ ದಾಳಿಕೋರನ ಚಿತ್ರವನ್ನು ಮಹಾರಾಷ್ಟ್ರದ ಉಗ್ರ ನಿಗ್ರಹ ದಳದ ಅಧಿಕಾರಿಗಳು ಗುರುತಿಸಿದರು. 

ದಾಳಿಕೋರನ ಚಿತ್ರವು ಭಾರತದಲ್ಲಿ ಹಲವು ಉಗ್ರ ದಾಳಿಗಳಲ್ಲಿ ಭಾಗಿಯಾಗಿದ್ದ  ಫ‌ಯಾಜ್‌ ಕಾಗ್‌ಜಿ  ಎಂಬ ಉಗ್ರನನ್ನು ಹೋಲುತ್ತಿರುವುದನ್ನು ಗಮನಿಸಿದರು. ಅಂತೆಯೇ ಅವರು ಸೌದಿ ಅರೇಬಿಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಉಗ್ರ ನಿಗ್ರಹ ವಿಚಾರದಲ್ಲಿ ಭಾರತ ಮತ್ತು ಸೌದಿ ಅರೇಬಿಯ ನಡುವಿನ ಸಹಕಾರ ಹೆಚ್ಚುತ್ತಿರುವುದರ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಡಿಎನ್‌ಎ ಮಾದರಿಯನ್ನು ಕಳುಹಿಸಿತು. 

ಅಂತೆಯೇ 2016ರ ಡಿಸೆಂಬರ್‌ನಲ್ಲಿ ಸೌದಿ ಅಧಿಕಾರಿಗಳು, “ದಾಳಿಕೋರನು ಕಾಗ್‌ಜಿ  ಇದ್ದಿರಬಹುದು’ ಎಂದು ಹೇಳಿದರು. ಕಾಗ್‌ಜಿ  ಮೂಲತಃ ಮಹಾರಾಷ್ಟ್ರದ ಬೀಡ್‌ ನವನಾಗಿದ್ದು 2010 ಮತ್ತು 2012ರ ನಡುವೆ ನಡೆದಿದ್ದ, ಪೂನಾ ಬ್ಲಾಸ್ಟ್‌ ಸಹಿತವಾಗಿ ಹಲವಾರು ಬಾಂಬ್‌ ದಾಳಿಗಳಲ್ಲಿ ಶಾಮೀಲಾಗಿದ್ದ.

ಈತ 2006ರಲ್ಲಿ  ಭಾರತದಿಂದ ಪಲಾಯನಗೈದು ಬಾಂಗ್ಲಾದೇಶದ ಮೂಲಕ ಪಾಕಿಸ್ಥಾನಕ್ಕೆ ಹೋಗಿದ್ದ. ಕರಾಚಿಯಲ್ಲಿ ನೆಲೆ ಸ್ಥಾಪಿಸಿಕೊಂಡಿದ್ದ. ಉಗ್ರ ಅಬು ಜಿಂದಾಲ್‌ ಹ್ಯಾಂಡ್ಲರ್‌ ಆಗಿದ್ದ 26/11ರ ಮುಂಬಯಿ ದಾಳಿಯಲ್ಲೂ ಈತ ಶಾಮೀಲಾಗಿದ್ದ. ಅನಂತರದಲ್ಲಿ ಆತ ಸೌದಿ ಅರೇಬಿಯಕ್ಕೆ ಹೋದ; ಅಲ್ಲಿ ಲಷ್ಕರ್‌ ಉಗ್ರಸಂಘಟನೆಗೆ ಭಾರತೀಯರನ್ನು ನೇಮಿಸಿಕೊಳ್ಳುವ ಕೆಲಸದಲ್ಲಿ ತೊಡಗಿಕೊಂಡ. 

ಎನ್‌ಐಎ ಕಳುಹಿಸಿಕೊಟ್ಟಿದ್ದ ಡಿಎನ್‌ಎ ಮಾದರಿ ಜೆದ್ದಾ ದಾಳಿಕೋರನ ಡಿಎನ್‌ಎ ಪ್ರೊಫೈಲ್‌ ನೊಂದಿಗೆ ಹೋಲುತ್ತದೆ ಎಂದು ಸೌದಿ ಅರೇಬಿಯ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗೆ ತಿಳಿಸಿದರು.

ಟಾಪ್ ನ್ಯೂಸ್

1-wewqeewqe

Actor Jackie Shroff ಹೆಸರು ಬಳಕೆಗೆ ಹೈಕೋರ್ಟ್‌ ನಿಷೇಧ

1-wqeeqwewq

Taiwan; ಸಂಸತ್‌ನಲ್ಲಿ ಸಂಸದರ ಭಾರೀ ಬಡಿದಾಟ!

Covid test

Singapore; ಹೆಚ್ಚಿದ ಕೋವಿಡ್‌: ಮಾಸ್ಕ್ ಕಡ್ಡಾಯಕ್ಕೆ ಮತ್ತೆ ಆದೇಶ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeeqwewq

Taiwan; ಸಂಸತ್‌ನಲ್ಲಿ ಸಂಸದರ ಭಾರೀ ಬಡಿದಾಟ!

Covid test

Singapore; ಹೆಚ್ಚಿದ ಕೋವಿಡ್‌: ಮಾಸ್ಕ್ ಕಡ್ಡಾಯಕ್ಕೆ ಮತ್ತೆ ಆದೇಶ

4

ಈಜಿಪ್ಟ್ ನ ಅತೀ ಪ್ರಾಚೀನ, ಶ್ರೀಮಂತ ದೊರೆ ಚಿತ್ರ ಸಿದ್ಧ!

1

Abu Dhabi: ಅಬುಧಾಬಿಯಲ್ಲಿ ಬಿಯರ್‌ ಅಂಗಡಿ!

rishi sun

UK; ಶ್ರೀಮಂತರ ಪಟ್ಟಿಯಲ್ಲಿ 245ನೇ ಸ್ಥಾನಕ್ಕೆ ಜಿಗಿದ ರಿಷಿ-ಅಕ್ಷತಾ ದಂಪತಿ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-wewqeewqe

Actor Jackie Shroff ಹೆಸರು ಬಳಕೆಗೆ ಹೈಕೋರ್ಟ್‌ ನಿಷೇಧ

1-wqeeqwewq

Taiwan; ಸಂಸತ್‌ನಲ್ಲಿ ಸಂಸದರ ಭಾರೀ ಬಡಿದಾಟ!

Covid test

Singapore; ಹೆಚ್ಚಿದ ಕೋವಿಡ್‌: ಮಾಸ್ಕ್ ಕಡ್ಡಾಯಕ್ಕೆ ಮತ್ತೆ ಆದೇಶ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

ec-aa

Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.