- Sunday 08 Dec 2019
“ಒಡೆಯದ ಗಾಜು’ ಚೂರು ಚೂರಾದಾಗ!
Team Udayavani, Nov 22, 2019, 11:03 PM IST
ಕ್ಯಾಲಿಫೋರ್ನಿಯಾ: ಅಮೆರಿಕದ ವಾಹನೋದ್ಯಮ ಸಂಸ್ಥೆ ಟೆಸ್ಲಾ, ಮಾರುಕಟ್ಟೆಗೆ ಬಿಡುಗಡೆ ಮಾಡಲಿರುವ ಸೈಬರ್ ಟ್ರಕ್ನ ಮೊದಲ ಪ್ರಾಯೋಗಿಕ ಪ್ರದರ್ಶನದಲ್ಲೇ ಮುಖಭಂಗಕ್ಕೆ ಒಳಗಾಗಿದೆ. ಈ ವಿದ್ಯುತ್ಚಾಲಿತ ಸೈಬರ್ಟ್ರಕ್ನ ಗಾಜುಗಳು ಅತ್ಯಂತ ಬಲಿಷ್ಠವಾಗಿದೆ ಎಂದು ತೋರಿಸಲು ಹೋಗಿ ಟೆಸ್ಲಾ ಸಹ ಸಂಸ್ಥಾಪಕ ಮತ್ತು ಸಿಇಒ ಇಲಾನ್ ಮಸ್ಕ್ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.
ಲಾಸ್ ಏಂಜಲೀಸ್ನಲ್ಲಿ ಬಿಡುಗಡೆ ವೇಳೆ ವಿನ್ಯಾಸಕ ಫ್ರಾಂಝ್ ವೊನ್ ಹೊಲಾlಸೆನ್ರನ್ನು ಆಹ್ವಾನಿಸಿದ ಮಸ್ಕ್, ಲೋಹದ ಚೆಂಡನ್ನು ಸೈಬರ್ ಟ್ರಕ್ನ ಕಿಟಕಿಗೆ ಗುರಿಯಿಟ್ಟು ಎಸೆಯಲು ಸೂಚಿಸಿದರು. ಫ್ರಾಂಝ್ ಅದನ್ನು ಎಸೆದಾಗ ಗಾಜು ಪುಡಿ ಪುಡಿಯಾಗಿದೆ. “ಗಾಜು ಪುಡಿಯಾಗಲು ಸಾಧ್ಯವೇ ಇಲ್ಲ’ ಎಂದು ಇಲಾನ್ ಮಸ್ಕ್ ಹೇಳಿಕೊಂಡಿದ್ದರು. ಪ್ರಯಾಣಿಕರು ಕೂರುವ ಭಾಗದ ಗಾಜಿಗೂ ಲೋಹದ ಬಾಲ್ ಎಸೆದಾಗ ಅದೂ ಪುಡಿಯಾಯಿತು. “ಓ ದೇವರೇ!
ಬಹುಶ: ಲೋಹದ ಚೆಂಡು ಅತ್ಯಂತ ಗಟ್ಟಿಯಾಗಿರಬೇಕು’ ಎಂದು ಉದ್ಗರಿಸಿದ ಅವರು, ಈ ಹಿಂದೆ ಪರೀಕ್ಷೆಗೆ ಒಳಪಡಿಸಿದ ಸಂದರ್ಭಗಳಲ್ಲಿ ಗಾಜುಗಳು ಒಡೆದಿರಲಿಲ್ಲ ಎಂದಿದ್ದಾರೆ. ಜತೆಗೆ ಎಲ್ಲಿ ತಪ್ಪಾಗಿದೆಯೋ ಅದನ್ನು ಸರಿಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸೈಬರ್ ಟ್ರಕ್ ವೈಶಿಷ್ಟé: ಮೂರು ಮಾದರಿಗಳಲ್ಲಿ ಸೈಬರ್ ಟ್ರಕ್ ಬಿಡುಗಡೆಯಾಗಲಿದ್ದು, ಟಾಪ್ ಎಂಡ್ ಮಾಡೆಲ್ ಒಂದು ಬಾರಿ ಚಾರ್ಜ್ ಮಾಡಿದರೆ, 800 ಕಿಮೀ ದೂರ ಪ್ರಯಾಣಿಸುವ ಸಾಮರ್ಥ್ಯ ಹೊಂದಲಿದೆ. ವಾಹನ ಚಾಲನೆ ಮಾಡಲು ಶುರು ಮಾಡಿದ 3 ಸೆಕೆಂಡ್ಗಳಲ್ಲಿ 100 ಕಿಮೀ ವರೆಗೆ ವೇಗ ಪಡೆದುಕೊಳ್ಳಲಿದೆ. ಅದಕ್ಕೆ 6,350 ಕೆಜಿ ಭಾರ ಹೊರುವ ಸಾಮರ್ಥ್ಯ ಇರಲಿದ್ದು, 69,000 ಡಾಲರ್ ಬೆಲೆ ನಿಗದಿ ಮಾಡಲಾಗಿದೆ. 2021ರ ಅಂತ್ಯ ಭಾಗದಲ್ಲಿ ಸೈಬರ್ ಟ್ರಕ್ಗಳ ಉತ್ಪಾದನೆ ಶುರುವಾಗಲಿದ್ದು, 2022ರ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ಈ ವಿಭಾಗದಿಂದ ಇನ್ನಷ್ಟು
-
ವಾಷಿಂಗ್ಟನ್: ಯುಎಸ್ ನೌಕಾ ನೆಲೆಯಲ್ಲಿ ಪೈಲಟ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು, 8 ಮಂದಿ ಗಾಯಗೊಂಡ...
-
ಕಾಬೂಲ್: ತಾಲಿಬಾನ್ ಉಗ್ರರ ವಿರುದ್ಧ ಅಫ್ಘಾನ್ ವಿಶೇಷ ಪಡೆಯ ಕಾರ್ಯಾಚರಣೆಯಲ್ಲಿ ಸುಮಾರು 15 ಉಗ್ರರನ್ನು ಹತ್ಯೆಗೈಯಲಾಗಿದೆ. ದಕ್ಷಿಣ ಪ್ರಾಂತ್ಯದ ಕಂದಹಾರ್ ನಲ್ಲಿ...
-
ನವದೆಹಲಿ/ಈಕ್ವೆಡಾರ್: ಭಾರತದಿಂದ ಪರಾರಿಯಾಗಿದ್ದ ವಿವಾದಿತ ನಿತ್ಯಾನಂದ ಈಕ್ವೆಡಾರ್ ನಲ್ಲಿ ದ್ವೀಪವೊಂದನ್ನು ಖರೀದಿಸಿ ತಾನೊಂದು ಹೊಸ ದೇಶ ಸ್ಥಾಪಿಸಿಕೊಂಡಿರುವುದಾಗಿ...
-
ವಾಷಿಂಗ್ಟನ್: ಸೂರ್ಯನ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಕಳುಹಿಸಿದ್ದ 'ಪಾರ್ಕರ್', ಮಾನವ ನಿರ್ಮಿತ ಯಾವುದೇ ಆಕಾಶಕಾಯ ಈವರೆಗೆ ತಲುಪದಿರುವ...
-
ಜಕಾರ್ತಾ: ಇಂಡೋನೇಷಿಯಾದ ಸುಮಾತ್ರಾ ದ್ವೀಪದಲ್ಲಿರುವ ಅಶೆ ಪ್ರದೇಶದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ಛಡಿಯೇಟು ಶಿಕ್ಷೆ ನೀಡುತ್ತಿದ್ದ ಸಂದರ್ಭದಲ್ಲಿ ಆತ ಪ್ರಜ್ಞೆ...
ಹೊಸ ಸೇರ್ಪಡೆ
-
ಬೆಳ್ತಂಗಡಿ: ಎಲ್ಲರ ನಿರೀಕ್ಷೆ ಚುನಾವಣೆ ಫಲಿತಾಂಶದ ಕಡೆ ಇದೆ. ಎಲ್ಲಾ ಕ್ಷೇತ್ರದಲ್ಲಿ ಸಚಿವರೊಂದಿಗೆ ನಾವು ಸುತ್ತು ಬಂದಿದ್ದು, ಸಮೀಕ್ಷೆ ಪ್ರಕಾರ 15 ಕ್ಷೇತ್ರದಲ್ಲಿ...
-
ಮೈಸೂರು: ಕೆ.ಎಸ್ಆರ್ ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪ್ಪ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು...
-
ಮಂಗಳೂರು: ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆದಳ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಮುಕ್ಕದ...
-
ಲಕ್ನೋ: ಮದುವೆಗೆ ವರ ತಡವಾಗಿ ಬಂದಿದ್ದಕ್ಕೆ ಬೇಸರಗೊಂಡ ವಧುವಿನ ಕುಟುಂಬಸ್ಥರು ಬೇರೊಬ್ಬನ ಜೊತೆ ವಿವಾಹವನ್ನು ಸಾಂಗವಾಗಿ ನೆರವೇರಿಸಿದ ಘಟನೆ ಉತ್ತರಪ್ರದೇಶದಲ್ಲಿ...
-
ತಿರುವನಂತಪುರ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯಕ್ಕೆ ತಿರುವನಂತಪುರ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದ ಟೀಂ ಇಂಡಿಯಾ ಎರಡನೆ...