ಅಫ್ಘಾನ್ ನಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳ ಸೂತ್ರದಾರರು ಯಾರು?


Team Udayavani, Aug 16, 2021, 3:58 PM IST

ಅಫ್ಘಾನ್ ನಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳ ಸೂತ್ರದಾರರು ಯಾರು?

ಕಾಬೂಲ್: “ತಾಲಿಬ್‌’ ಎಂದರೆ “ವಿದ್ಯಾರ್ಥಿ ಯೋಧ’ರೆಂದು ಅರ್ಥ. 1994ರ ಸೆಪ್ಟಂಬರ್‌ನಲ್ಲಿ ಈ ಸಂಘಟನೆ ಉದಯವಾಯಿತು. 90ರ ದಶಕದ ಆರಂಭದಲ್ಲಿ ರಷ್ಯಾ ಸೇನೆ, ಅಫ್ಘಾನಿಸ್ತಾನವನ್ನು ತೊರೆಯಿತು. ಅಲ್ಲಿಂದ 2001ರವರೆಗೆ ತಾಲಿಬಾನಿಗಳ ಹಿಡಿತದಲ್ಲಿ ಕಂದಹಾರ್‌ ಸೇರಿದಂತೆ ಅಫ್ಘಾನಿಸ್ತಾನದ ಅನೇಕ ಪ್ರದೇಶಗಳಿದ್ದವು.

ಅಫ್ಘಾನ್ ನ ಲ್ಲಿ ಅಹ್ಮದ್‌ ಶಾ ಹಾಗೂ ಅಬ್ದುಲ್‌ ರಶೀದ್‌ ಎಂಬ ನಾಯಕರು ಸಮ್ಮಿಶ್ರ ಸರ್ಕಾರ ರಚಿಸಿದರಾದರೂ ತಾಲಿಬಾನಿಗಳ ಪ್ರದೇಶಗಳು ಸರ್ಕಾರದ ಹಿಡಿತದಿಂದ ಹೊರಗಿದ್ದವು. 2000ರ ಹೊತ್ತಿಗೆ, ಅಫ್ಘಾನಿಸ್ತಾನದ ಕೇವಲ ಶೇ. 10ರಷ್ಟು ಭಾಗ ಮಾತ್ರ ಸರ್ಕಾರದ ಆಡಳಿತ ಕ್ಕೊಳಪಟ್ಟಿದ್ದು, ಶೇ. 90ರಷ್ಟು ಭಾಗದಲ್ಲಿ ತಾಲಿಬಾನಿಗಳ ಆಡಳಿತವಿತ್ತು.

ತಾಲಿಬಾನ್ ಸೂತ್ರದಾರರು ಯಾರು?

ಅಮಿರ್‌ ಅಲ್‌-ಮುಮಿನಿನ್‌ (ಪರಮೋಚ್ಛ ನಾಯಕ): ಈತ ತಾಲಿಬಾನ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ 2016ರಿಂದ ತಾಲಿಬಾನಿಗಳ ನಾಯಕ. ರಾಜಕೀಯ, ಧಾರ್ಮಿಕ, ಉಗ್ರ ಚಟುವಟಿಕೆಗಳಲ್ಲಿ ಈತನ ನಿರ್ಧಾರವೇ ಅಂತಿಮ

ಮುಲ್ಲಾ ಅಬ್ದುಲ್‌ ಹಕೀಂ (ಹಿರಿಯ ನ್ಯಾಯಮೂರ್ತಿ): ತಾಲಿಬಾನ್‌ನ ನ್ಯಾಯಾಂಗ ವ್ಯವಸ್ಥೆಯ ಮೇಲ್ವಿಚಾರಕ; ದೋಹಾದಲ್ಲಿರುವ ಸಂಧಾನ ಸಮಿತಿಯ ಮುಖ್ಯಸ್ಥ

ಮುಲ್ಲಾ ಅಬ್ದುಲ್‌ ಘನಿ ಬರಾದರ್‌ (1ನೇ ಉಪ ನಾಯಕ): ತಾಲಿಬಾನ್‌ನ ಸಹ-ಸಂಸ್ಥಾಪಕ, ದೋಹಾದಲ್ಲಿರುವ ತಾಲಿಬಾನ್‌ ರಾಜಕೀಯ ಕಚೇರಿಯ ಮುಖ್ಯಸ್ಥ

ಮುಲ್ಲಾ ಮೊಹಮ್ಮದ್‌ ಯಾಕೂಬ್‌ (2ನೇ ಉಪನಾಯಕ): ತಾಲಿಬಾನ್‌ ಸಂಸ್ಥಾಪಕ ಮುಲ್ಲಾ ಒಮರ್‌ನ ಪುತ್ರ. ತಾಲಿಬಾನ್‌ನ ಸೇನಾ ವಿಭಾಗದ ಮುಖ್ಯಸ್ಥ

ಇದನ್ನೂ ಓದಿ:ಅಫ್ಘಾನ್ ನಲ್ಲಿ ಆತಂಕ: ಐಪಿಎಲ್ ನಲ್ಲಿ ಆಡಲಿದ್ದಾರಾ ರಶೀದ್ ಖಾನ್, ಮೊಹಮ್ಮದ್ ನಬಿ?

ರಹ್‌ಬಾರಿ ಶುರಾ (ಲೀಡರ್‌ಶಿಪ್‌ಕೌನ್ಸಿಲ್‌): ಇದು ತಾಲಿಬಾನ್‌ ಸಂಘಟನೆಯಲ್ಲಿ ಪರಮೋತ್ಛ ಸಮಿತಿ. ಸಂಘಟನೆಗೆ ಪೂರಕವಾದ ನಿರ್ಧಾರಗಳನ್ನು ಇದುಕೈಗೊಳ್ಳುತ್ತದೆಹಾಗೂ ಅಗತ್ಯವಿದ್ದಾಗ ನಾಯಕರಿಗೆ ಸಲಹೆಗಳನ್ನು ನೀಡುತ್ತದೆ. ಇದರಲ್ಲಿ 26ಜನ ಸದಸ್ಯರಿದ್ದಾರೆ

ದೋಹಾದಲ್ಲಿದೆ ರಾಜಕೀಯ ಕಚೇರಿ: ಕತಾರ್‌ ನ ರಾಜಧಾನಿ ದೋಹಾದಲ್ಲಿರುವ ಈ ಕಚೇರಿ, ತಾಲಿಬಾನಿಗಳ ಅಂತಾರಾಷ್ಟ್ರೀಯ ಪ್ರಾತಿನಿಧ್ಯ ವಹಿಸಿದೆ. ಯಾವುದೇ ಕಾರ್ಯನಿರ್ವಹಣೆ ಅಥವಾ ಶಾಂತಿ ಸಂಧಾನಗಳಿಗೆ ಸಂಭವಿಸಿದ ಮಾತುಕತೆಗಳು ಇದೇ ಕಚೇರಿಯಲ್ಲೇ ನಡೆಯುತ್ತದೆ.

ಟಾಪ್ ನ್ಯೂಸ್

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.