ತಮಿಳು ನಾಡು : ಎ ಐ ಎ ಡಿ ಎಮ್ ಕೆ ಬಿಜೆಪಿಯ ಒಂದು ಶಾಖೆ : ಸ್ಟ್ಯಾಲಿನ್
Team Udayavani, Mar 21, 2021, 5:18 PM IST
ಕಾಂಚಿಪುರಮ್ : ಎ ಐ ಎ ಡಿ ಎಮ್ ಕೆ ಒಂದು ಕ್ಷೇತ್ರದಲ್ಲಿ ವಿಜಯಶಾಲಿಯಾದರೂ ಅದು ಬಿಜೆಪಿ ಶಾಸಕನ ಜಯವಾಗಲಿದೆ. ಆದ್ದರಿಂದ ಏಪ್ರಿಲ್ 6 ರಂದು ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನೀವು ನಮ್ಮ ಪಕ್ಷಕ್ಕೆ ಮತ ಚಲಾವಣೆ ಮಾಡಬೇಕು ಎಂದು ಡಿ ಎಮ್ ಕೆ ಅಧ್ಯಕ್ಷ ಎಮ್ ಕೆ ಸ್ಟ್ಯಾಲಿನ್ ಹೇಳಿದ್ದಾರೆ.
ಕಾಂಚಿಪುರಮ್ ಸಮೀಪದ ಉತಿರಾಮೆರೂರ್ ಎಂಬಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಟ್ಯಾಲಿನ್, ತಮಿಳುನಾಡಿನ 234 ವಿಧಾನ ಸಭಾ ಕ್ಷೇತ್ರದಲ್ಲಿ 200 ಕ್ಷೇತ್ರಗಳನ್ನು ಡಿ ಎಮ್ ಕೆ ಗೆಲ್ಲಲಿದೆ ಎಂದಿದ್ದಾರೆ.
ಓದಿ : ನಾನು ದೊಡ್ಡ ಕತ್ತೆ, ಅಧಿಕಾರಿ ಕುಟುಂಬದ ‘ಅಸಲಿ ಮುಖ’ದ ಬಗ್ಗೆ ನನಗೆ ಗೊತ್ತಾಗಲೇ ಇಲ್ಲ : ಮಮತಾ
ಆದಾಗ್ಯೂ, ರಾಜ್ಯದಾದ್ಯಂತ ನಿರಂತರವಾಗಿ ನಡೆಯುತ್ತಿರುವ ಚುನಾವಣಾ ಪ್ರಚಾರ ಸಭೆಯ ಸಂದರ್ಭದಲ್ಲಿ ಜನರ ಅಭಿಪ್ರಾಯವನ್ನು ಗಮನಿಸಿದರೇ, ‘ನಾವು ರಾಜ್ಯದ ಎಲ್ಲಾ 234 ವಿಧಾನ ಸಭಾ ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ’ ಎಂದು ಡಿ ಎಮ್ ಕೆ ಹಿರಿಯ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಅವರ ಪುತ್ರರಾದ ಥೇನಿಯ ಏಕೈಕ ಎ ಐ ಎ ಡಿ ಎಮ್ ಕೆ ಲೋಕಸಭಾ ಸಂಸತ್ ಸದಸ್ಯ ಪಿ.ರವೀಂದ್ರನಾಥ್ ಅವರು ‘ಬಿಜೆಪಿ ಸಂಸದರಾಗಿ’ ಮಾತ್ರ ಕಾರ್ಯನಿರ್ವಹಿಸಿದ್ದಾರೆ ಮತ್ತು ಇದು ಅವರ ವಿವಾದವನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದ್ದಾರೆ. ನಾವು ಬಿಜೆಪಿಯನ್ನು ಇಲ್ಲಿ ಗೆಲ್ಲಲು ಬಿಡಬಾರದು. ಹಾಗೆಯೇ ಎ ಐ ಎ ಡಿ ಎಮ್ ಕೆ ಯನ್ನು ಕೂಡ ಗೆಲ್ಲುವುದಕ್ಕೆ ಬಿಡಬಾರದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಸ್ಟ್ಯಾಲಿನ್ ಜನರಿಗೆ ಹೇಳಿದ್ದಾರೆ.
ಎ ಐ ಎ ಡಿ ಎಮ್ ಕೆ ಬಿಜೆಪಿಯ ಒಂದು ಶಾಖೆ ಎಂದು ಸ್ಟಾಲಿನ್ ಹೇಳಿದ್ದಾರೆ. ಆದರೇ, ಮುಖ್ಯಮಂತ್ರಿ ಕೆ. ಪಳನಿ ಸ್ವಾಮಿ ಸ್ಟ್ಯಾಲಿನ್ ಹೇಳಿಕೆಯನ್ನು ಇದೊಂದು ಸುಳ್ಳು ಆರೋಪ ಎಂದು ನಿರಾಕರಿಸಿದ್ದಾರೆ.
ಓದಿ : ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ಅಫ್ಘಾನಿಸ್ಥಾನ ತಂಡದ ನಾಯಕ ಅಸ್ಗರ್ ಅಫ್ಘಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್