ನನಗೆ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಕನಸಿಲ್ಲ, ಪಕ್ಷ ಸಂಘಟನೆಯೊಂದೇ ಗುರಿ : ಗೌರವ್ ಗೊಗೊಯ್
Team Udayavani, Mar 24, 2021, 4:38 PM IST
ಗುವಾಹಟಿ : ರಾಜ್ಯದ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸುವುದಿಲ್ಲ ಮತ್ತು ನನ್ನ ತಂದೆಯವರ ವಿಧಾನ ಸಭಾ ಕ್ಷೇತ್ರವನ್ನು ಕೂಡ ಪ್ರತಿನಿಧಿಸುವುದಿಲ್ಲ ಎಂದು ಮೂರು ಭಾರಿ ಅಸ್ಸಾಂ ನ ಮುಖ್ಯಮಂತ್ರಿಯಾಗಿದ್ದ ತರುಣ್ ಗೊಗೊಯ್ ಅವರ ಮಗ ಗೌರವ್ ಗೊಗೊಯ್ ಹೇಳಿದ್ದಾರೆ.
ನನ್ನ ತಂದೆಯ ನಿಧನದ ನಂತರ ಪಕ್ಷ ಒಂದು ರೀತಿಯಲ್ಲಿ ಅನಾಥವಾಗಿದೆ. ಆದರೇ, ಜನರಲ್ಲಿ ಅವರ ಮೇಲಿನ ವಿಶ್ವಾಸ ಮತ್ತು ಅಭಿಮಾನವು ನನಗೆ ಮತ್ತು ನನ್ನ ಸಹದ್ಯೋಗಿಗಳಿಗೆ ಪ್ರೇರಕ ಶಕ್ತಿಯಾಗಿದೆ ಎಂದು ಅಸ್ಸಾಂ ನ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಗೌರವ್ ಹೇಳಿದ್ದಾರೆ.
ಓದಿ : ಹೋಳಿ 2021 : ಸುರಕ್ಷಿತ ಹೋಳಿ ಹಬ್ಬ ಆಚರಣೆಗೆ ಇಲ್ಲಿವೆ ಕೆಲವು ಟಿಪ್ಸ್..!
ನನಗೆ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಕನಸಿಲ್ಲ. ನನ್ನ ವೈಯಕ್ತಿಕ ಮಹತ್ವಾಕಾಂಕ್ಷೆಯ ಕಾರಣದಿಂದ ರಾಜ್ಯದ ಯಾವುದೇ ಉನ್ನತ ಹುದ್ದೆಯನ್ನು ನಾನು ಅಲಂಕರಿಸುವುದಿಲ್ಲ. ಅಸ್ಸಾಂ ನಲ್ಲಿ ಕಾಂಗ್ರೆಸ್ ನೇತೃತ್ವದ ‘ಮಹಾಜೊತ್’ ನ್ನು ರಚಿಸುವುದು ಮಾತ್ರ ನನಗೆ ಗುರಿ ಇದೆ ಎಂದು ಅವರು ಹೇಳಿದ್ದಾರೆ.
ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಲೋಕಸಭಾ ದಲ್ಲಿ ನನ್ನನ್ನು ಉಪ ನಾಯಕನಾಗಿ ಮಾಡಿದರು, ಎಐಸಿಸಿ ನ ಉಸ್ತುವಾರಿಯ ಹುದ್ದೆಯನ್ನು ನೀಡಿದರು. ನನ್ನ ಜವಾಬ್ದಾರಿಗೆ ನಾನು ಪ್ರಾಮಾಣಿಕನಾಗಿದ್ದೆ ಎಂದು ಗೊಗೊಯ್ ಹೇಳಿದ್ದಾರೆ.
ಜೊರ್ಹತ್ ಜಿಲ್ಲೆಯ ತಿತಾಬಾರ್ ವಿಧಾನ ಸಭಾ ಕ್ಷೇತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಧಾನ ಸಭಾ ಕ್ಷೇತ್ರದಲ್ಲಿ ನನ್ನ ತಂದೆಯವರು 20 ವರ್ಷಗಳ ಕಾಲ ಪ್ರತಿನಿಧಿಸಿದ್ದರು. ‘ಈ ಕ್ಷೇತ್ರದಲ್ಲಿ ಉತ್ತರಾಧಿಕಾರಿ ಸಮಾಜಕ್ಕಾಗಿ ಕೆಲಸ ಮಾಡುವ ಯಾರಿಗಾದರೂ ದೊರಕಬೇಕು, ನಮ್ಮ ಕುಟುಂಬಕ್ಕೆ ದೊರಕಬಾರದು’ ಎಂಬುವುದು ತಂದೆಯವರ ಕೊನೆಯ ಆಸೆಯಾಗಿತ್ತು, ಹಾಗಾಗಿ ಚುನಾವಣೆಯಲ್ಲಿ ಅಲ್ಲಿಂದ ನಾನು ಸ್ಪರ್ಧಿಸುತ್ತಿಲ್ಲ. ತಂದೆಯವರ ಕೊನೆಯ ಆಸೆಗೆ ಎಐಸಿಸಿ ಕೂಡ ಒಪ್ಪಿದೆ ಎಂದು ಅವರು ಹೇಳಿದ್ದಾರೆ.
ಇನ್ನು, ಬರುವ ವಿಧಾನಸಭಾ ಚುನಾವಣೆಗೆ, ಗೊಗೊಯ್ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾಗಿರುವ ತಿತಾಬಾರ್ ನಿಂದ ಭಾಸ್ಕರ್ ಜ್ಯೋತಿ ಬರುವಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
ಅಸ್ಸಾಂ ನ ರಾಜಕೀಯ ವಲಯದಲ್ಲಿ, ‘ಗ್ರ್ಯಾಂಡ್ ಅಲೈಯನ್ಸ್’ ಅಧಿಕಾರಕ್ಕೆ ಬಂದರೆ, ಕಲಿಯಾಬೋರ್ ನ ಲೋಕಸಭಾ ಸಂಸದರನ್ನು ಕಾಂಗ್ರೆಸ್ ನ ಮುಖ್ಯಮಂತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಂಪಕ್ತಿಗೆ ತರುತ್ತದೆ ಎಂಬ ವಿಚಾರ ಹರಿದಾಡುತ್ತಿದೆ. ಆದಾಗ್ಯೂ, ವಿರೋಧ ಪಕ್ಷವು ಅಧಿಕೃತವಾಗಿ ಯಾವುದೇ ಹೆಸರನ್ನು ಇದುವರೆಗೆ ಇನ್ನು ಘೋಷಿಸಿಲ್ಲ.
ಓದಿ : ಬೇರೆಯವರ ಮೇಲೆ ರಾಡಿ ಎರಚುವ ಕೆಲಸ ಬಿಜೆಪಿ ಮಾಡುತ್ತಿದೆ : ಹೆಚ್.ಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…