ಮೋದಿ ಬೆಳೆಸಿದ್ದು ಗಡ್ಡ ಮಾತ್ರ, ಸಾಧನೆ ಶೂನ್ಯ : ಮೋದಿ ವಿರುದ್ಧ ಮಮತಾ ಕಿಡಿ
Team Udayavani, Mar 26, 2021, 5:52 PM IST
ಕೋಲ್ಕತ್ತಾ : ಚುನಾವಣೆಗೆ ಇನ್ನು ಕೆಲವೇ ಕೆಲವು ಗಂಟೆಗಳು ಬಾಕಿ ಇರುವಾಗ ತೃಣ ಮೂಲ ಕಾಂಗ್ರೆಸ್ ನ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದ್ದಾರೆ.
ಒಂದು ದಂಗೆಕೋರ, ಇನ್ನೊಂದು ಪ್ರಾಯೋಜಕತ್ವ ದಂಗೆ ಹಾಗೂ ಮತ್ತೊಂದು…ಯಾವುದೇ ಕೈಗಾರಿಕೋದ್ಯಮಗಳನ್ನು ಅಭಿವೃದ್ಧಿ ಮಾಡದೇ, ಕೇವಲ ತಮ್ಮ ಗಡ್ಡ ಮಾತ್ರ ಬೆಳಸಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಬ್ಯಾನರ್ಜಿ ಸಿಡಿದಿದ್ದಾರೆ.
ಓದಿ : ಅಸ್ಸಾಂ : ಬುದ್ಧಿವಂತಿಕೆಯಿಂದ ಮತವನ್ನು ಚಲಾಯಿಸಿ : ಮನಮೋಹನ್ ಸಿಂಗ್
ಒಮ್ಮೊಮ್ಮೆ ತನ್ನನ್ನು ತಾನೇ ಗಾಂಧಿಜಿಗಿಂತ, ರವಿಂದ್ರನಾಥ್ ಠಾಕೂರ್ ಅವರಿಗಿಂತ ಮೇಲು ಅಂತಂದುಕೊಳ್ಳುತ್ತಾರೆ. ಒಮ್ಮೊಮ್ಮೆ ತಮ್ಮನ್ನು ತಾವೇ ಸ್ವಾಮಿ ವಿವೇಕಾನಂದರೆಂದು ಕರೆದುಕೊಳ್ಳುತ್ತಾರೆ. ತಮ್ಮ ಹೆಸರನ್ನೇ ಸ್ಟೇಡಿಯಂ ಗೆ ಇಟ್ಟುಕೊಳ್ಳುತ್ತಾರೆ. ಒಂದು ದಿನ ಇಡೀ ದೇಶವನ್ನು ಮಾರಿ ದೇಶಕ್ಕೆ ತನ್ನ ಹೆಸರನ್ನೇ ಇಡುತ್ತಾರೆ. ಅವರಿಗೆ ಏನೋ ಆಗಿರಬಹುದು ಎಂದು ಗುಡುಗಿದ್ದಾರೆ.
ಇನ್ನು, ಕೋವಿಡ್ ವ್ಯಾಕ್ಸಿನೆಶನ್ ಪ್ರಮಾಣ ಪತ್ರಕ್ಕೆ ತಮ್ಮ ಫೋಟೋವನ್ನು ಹಾಕಿಸಿಕೊಳ್ಳುತ್ತಾರೆ. ಇಸ್ರೋ ಬಾಹ್ಯಾಕಾಶ ಸಂಸ್ಥೆಯಿಂದ ತನ್ನ ಫೋಟೋವನ್ನು ಬಾಹ್ಯಾಕಾಶಕ್ಕೆ ಕಳುಹಿಸುವಂತೆ ಮಾಡುತ್ತಾರೆ. ಅವರ ಹೆಸರನ್ನು ದೇಶಕ್ಕೆ ಇಡುವ ದಿನ ಬರುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್