ಹೇಗಿದೆ ನಿಮ್ಮಇಂದಿನ ಗ್ರಹಬಲ
Team Udayavani, Jan 22, 2021, 8:01 AM IST
22-01-2021
ಮೇಷ: ಹೊಸ ವಾಹನ ಖರೀದಿ ಇದ್ದೀತು. ದೂರ ಪ್ರಯಾಣದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ವಿದ್ಯಾರ್ಜನೆಯಲ್ಲಿ ಆಶಾಭಂಗವಾದೀತು. ಅಲಂಕಾರಿಕ ಸಾಮಾಗ್ರಿಗಳ ವರ್ತಕರಿಗೆ ಲಾಭಾಂಶ ಕಡಿಮೆ ಇರುವುದು.
ವೃಷಭ: ವೈದ್ಯಕೀಯ ವಿಭಾಗದ ಕೆಲಸಗಾರರಿಗೆ ಮುಂಭಡ್ತಿ ಇದೆ. ಕೃಷಿ ಚಟುವಟಿಕೆಗಳಿಗೆ ವಿಘ್ನ ಪರಂಪರೆ ದವಸಧಾನ್ಯಗಳ ಬೆಲೆ ಏರಿಕೆ ಪಡೆದೀತು. ಸ್ಥಿರಾಸ್ತಿ ಮಾರಾಟ ಯಾ ಗೃಹ ನಿವೇಶನಗಳ ವ್ಯವಹಾರ ಇದೆ.
ಮಿಥುನ: ಗಾಯನ, ನರ್ತನ ಚಿತ್ರಕಲಾರಂಗದವರಿಗೆ ವಿದೇಶ ಯಾನ ಸೌಭಾಗ್ಯ ಯಾತ್ರೆ, ಪುಣ್ಯಕ್ಷೇತ್ರ ಸಂದರ್ಶನವೂ ಇದ್ದೀತು. ಕಾರ್ಮಿಕರಿಗೆ ವರ್ಗಾವಣೆ ಇದ್ದೀತು. ಜವುಳಿ ವಿಭಾಗದವರಿಗೆ ಪುರಸ್ಕಾರ ದೊರಕೀತು.
ಕರ್ಕ: ಮಗನ ವಿದ್ಯಾಭ್ಯಾಸದ ಚಿಂತೆಯಾದೀತು. ಆರ್ಥಿಕವಾಗಿ ಅನೇಕ ಬಗೆಯ ವೆಚ್ಚಗಳು ಕಾಣಿಸುವುದರಿಂದ ಮಾನಸಿಕ ಚಿಂತೆ ಹೆಚ್ಚಲಿದೆ. ಉದ್ಯೋಗ ನಿಮಿತ್ತ ಪರಸ್ಥಳಕ್ಕೆ ಯಾನವು ಕೂಡಿ ಬಂದೀತು.
ಸಿಂಹ: ಸುಖದುಃಖ ಸಮ್ಮಿಶ್ರ ಅನುಭವ ನಿಮ್ಮದಾಗಲಿದೆ. ಗುರುಕರುಣೆ ದೊರಕದೆ ಕ್ಲೇಶ ಪಡುವಿರಿ. ಉದರ ವ್ಯಾಧಿ, ಚರ್ಮರೋಗ, ದೀರ್ಘಕಾಲಿಕ ರಜೆ, ನಿರಂತರ ಬಾಧಕವೆನಿಸಲಿದೆ. ಕಾರ್ಯ ವಿಳಂಬವಿದೆ.
ಕನ್ಯಾ: ಖರ್ಚುವೆಚ್ಚಗಳು ಹೆಚ್ಚಾಗಲಿವೆ. ಕುಟುಂಬಿಕವಾಗಿ ಒಳಜಗಳ ಮನಸ್ಸಿಗೆ ನೋವು ತಂದೀತು. ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ. ಜವಾಬ್ದಾರಿಯುತ ಸ್ಥಾನ ಪ್ರಾಪ್ತಿ ಮಹತ್ಕಾರ್ಯ ಭರಾಟೆಯಿದೆ.
ತುಲಾ: ಕಾಲ್ಕೆರೆದು ಜಗಳ ಮಾಡುವ ಶತ್ರುವೊಬ್ಬನಿಂದಾಗಿ ಕಾರ್ಯಪ್ರವೃತ್ತಿಯಲ್ಲಿ ಕಿರಿಕಿರಿ ಪ್ರವಾಸಾದಿಗಳೂ ಶ್ರಮ ತರಲಿದೆ. ಸಂಚಾರ ಹೆಚ್ಚು ಇದ್ದು ಆರೋಗ್ಯ ಹಾಳಾದೀತು. ವಿದ್ಯಾಪ್ರಗತಿ ಇದ್ದು ಸಂತಸ.
ವೃಶ್ಚಿಕ: ಬಂಧುಗಳಿಗೆ ಸಹಾಯ, ಋಣಬಾಧೆ ಎಲ್ಲಾ ಕಡಿಮೆಯಾದೀತು. ಗೌಪ್ಯ ವಿಚಾರ ಬಹಿರಂಗವಾಗಿ ರಾದ್ಧಾಂತವಾದೀತು. ಮಡದಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದೀತು. ಬಂಡವಾಳದಿಂದ ಆದಾಯವಿದೆ.
ಧನು: ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯವಿದೆ. ಯಾಂತ್ರಿಕ ವೃತ್ತಿ, ವ್ಯಾಪಾರ, ವಹಿವಾಟು ಸ್ಥಗಿತಗೊಳ್ಳಲಿದೆ. ಜಾನುವಾರು, ವೈದ್ಯಕೀಯ ವೃತ್ತಿ ನಿರತರರಿಗೆ ಈ ಮಾಸ ಹಿತವಲ್ಲ. ವೃಥಾ ಜನ ವಿರೋಧ ಕಂಡುಬರುವುದು.
ಮಕರ: ಸ್ವಾಭಿಮಾನಿಯಾದ ನೀವು ತುಂಬಾ ಸಹಿಷ್ಣುತೆಯನ್ನು ತೋರಲಿದ್ದೀರಿ. ಗೃಹಭಾವದ ಸಮೃದ್ಧಿಯಿಂದ ಇದ್ದುದರಲ್ಲೇ ತೃಪ್ತಿ ಕಾಣಬೇಕಾದೀತು. ಶುಭ ಕಡಿಮೆಯಾದರೂ ಅಧಿಕ ಅಶುಭ ಕಂಡುಬಾರದು. ಶುಭವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ