ನಿರುಪಯುಕ್ತ ಬಲ್ಬ್ ಗಳಿಂದ ಮನೆಯ ಅಲಂಕಾರ


Team Udayavani, Jan 11, 2020, 5:26 AM IST

47

ಮನೆಯ ಅಲಂಕಾರಕ್ಕಾಗಿ ಅದೆಷ್ಟೋ ನಿರುಪಯುಕ್ತ ವಸ್ತುಗಳೇ ಪ್ರಯೋಜನಕ್ಕೆ ಬರುತ್ತದೆ. ಅದಕ್ಕಾಗಿ ನೀವು ಸ್ವಲ್ಪ ಸಮಯ ಮತ್ತು ತಲೆ ಖರ್ಚು ಮಾಡಬೇಕಷ್ಟೇ. ಹೌದು, ಕ್ರಿಯೇಟಿವಿಟಿ ಅನ್ನೋದು ನಿಮ್ಮದೇ ಸ್ವಂತ ಸ್ವತ್ತು. ಅದನ್ನು ನೀವು ಬಳಸಿಕೊಳ್ಳಬೇಕು ಅಷ್ಟೇ. ಆಗ ಉಳಿತಾಯದ ಜತೆಗೆ ಮನೆಯ ಅಲಂಕಾರವನ್ನೂ ಮಾಡಬಹುದು. ಕೆಲವು ನಿರುಪಯುಕ್ತವಾಗಿರುವ ಅದೆಷ್ಟೋ ವಸ್ತುಗಳು ನಿಮ್ಮ ಕೈಚಳಕದಿಂದ ಮನೆಯ ಅಲಂಕಾರಕ್ಕೆ ಬಳಕೆ ಮಾಡಿಕೊಳ್ಳಬಹುದು. ಅದರಲ್ಲಿ ಬಲ್ಬ್ಗಳು ಕೂಡ ಒಂದು. ನೀವು ಬೇಡವೆನಿಸಿದ ಬಲ್ಬ್ಗಳಿಂದ ನಿಮ್ಮದೇ ಸ್ವಂತ ಕ್ರಿಯೇಟಿವಿಟಿಯಿಂದ ಸುಂದರವಾಗಿ ಅಲಂಕಾರ ಮಾಡಿಕೊಳ್ಳಬಹುದು. ಅದಕ್ಕಾಗಿ ಕೆಲವೊಂದು ಟಿಪ್ಸ್‌

ಬಣ್ಣದ ಬೆಳಕಿನ ಬಲ್ಬ್
ನೀವು ನಿಮ್ಮ ಮನೆಗೆ ಬಣ್ಣದ ಬಲ್ಬ್ಗಳನ್ನು ತಯಾರಿಸಿಕೊಳ್ಳಬಹುದು. 40 ವ್ಯಾಟ್‌ನ ಬಲ್ಬ್ ಅನ್ನು ಸೆಲೆಕ್ಟ್ ಮಾಡಿಕೊಂಡು ಸೋಪು ಮತ್ತು ನೀರಿನಿಂದ ಸ್ವತ್ಛವಾಗಿರುವ ಟವೆಲ್‌ ಬಳಸಿ ಸ್ವತ್ಛಗೊಳಿಸಿ ಅನಂತರ ಒಣಗಿಸಿ ಅಥವಾ ಒಂದರಿಂದ ಎರಡು ನಿಮಿಷ ಗಾಳಿಯಲ್ಲಿಟ್ಟು ಒಣಗಿಸಿಕೊಳ್ಳಿ. ಬಳಿಕ ನಿಮಗೆ ಬೇಕಾದ ಪೈಂಟ್‌ ಅನ್ನು ಹಚ್ಚುವುದಕ್ಕೆ ಸಣ್ಣ ಬ್ರಷ್‌ ಗಳನ್ನು ಬಳಕೆ ಮಾಡಿ. ಮೊದಲು ಬಣ್ಣವನ್ನು ಬೆಳಕಿನಲ್ಲಿ ಹಚ್ಚಿ. ತೆಳುವಾದ ಪದರವನ್ನು ಮಾಡಿ ಮತ್ತು ಹೇಗೆ ಕಾಣುತ್ತದೆ ಎಂಬುದನ್ನು ಗಮನಿಸಿ. ಯಾವುದೇ ರೀತಿಯ ಡಿಸೈನ್‌ ಮಾಡುವುದಕ್ಕೂ ನಿಮಗೆ ಸ್ವಾತಂತ್ರÂವಿದೆ. ನಿಮ್ಮ ಇಚ್ಛೆಗೆ ಅನುಸಾರವಾಗಿ ಪೈಂಟ್‌ ಮಾಡಬಹುದು. ಚಿತ್ರವು ತಪ್ಪಾದರೆ ಪೇಪರ್‌ ಬಳಸಿ ನಿಧಾನವಾಗಿ ಉಜ್ಜಿ ತೆಗೆಯಬಹುದು.

ಪೈಂಟ್‌ ಕೆಲಸ ಮುಗಿದ ಅನಂತರ ಪೈಂಟ್‌ ಡ್ರೈ ಆಗುವುದಕ್ಕಾಗಿ ಕನಿಷ್ಠ ಒಂದು ಗಂಟೆ ಗಾಳಿಯಲ್ಲಿಡಿ. ಸಂಪೂರ್ಣವಾಗಿ ಒಣಗುವ ತನಕ ತಾಳ್ಮೆಯಿಂದ ಕಾಯಿರಿ. ಅನಂತರ ನಿಮಗೆ ಬಣ್ಣದ ಬಲ್ಬ್ ತರಯಾರಾಗುತ್ತದೆ. ಇದನ್ನು ನೀವು ನಿಮ್ಮ ಮನೆಗೆ ಅಳವಡಿಸಿ ಸುಂದರವಾಗಿಸಿಟ್ಟುಕೊಳ್ಳಬಹುದು.

ಹೂದಾನಿ ತಯಾರಿಸುವುದು
ಬಲ್ಬ್ನಿಂದ ಹೂದಾನಿಗಳನ್ನು ಕೂಡ ತಯಾರಿಸಬಹುದು. ಬಲ್ಬ್ ಒಳಗಿರುವ ಅಂಶಗಳನ್ನು ಪೇಪರ್‌ ಟವೆಲ್‌ ಅಥವಾ ಬಟ್ಟೆಯನ್ನು ಬಳಸಿ ಚೆನ್ನಾಗಿ ಸ್ವತ್ಛಗೊಳಿಸಿ. ಸಾಬೂನಿನ ನೀರಿನಿಂದ ಬಲ್ಬ್ನ ಒಳಭಾಗವನ್ನು ಕ್ಲೀನ್‌ ಮಾಡಿ. ಅನಂತರ ನೈಲ್‌ ಪಾಲಿಶ್‌ ಅಥವಾ ಯಾವುದೇ ರೀತಿಯ ಅಕ್ರಾಲಿಕ್‌ ಪೈಂಟ್‌ ಅನ್ನು ಬಳಸಿ ನಿಮ್ಮದೇ ಶೈಲಿಯ ಚಿತ್ರವನ್ನು ಹೂದಾನಿಗಳಲ್ಲಿ ಬಿಡಿಸಬಹುದು ಅಥವಾ ಸಿಂಪಲ್‌ ಲುಕ್‌ಗಾಗಿ ಕೇವಲ ಕ್ಯಾಪ್‌ ಅನ್ನು ಮಾತ್ರವೇ ಪೈಂಟ್‌ ಮಾಡಬಹುದು.

ಬಲ್ಬ್ನಿಂದ ತಯಾರಿಸಿದ ಹೂದಾನಿಗೆ ನೀರನ್ನು ಹಾಕಿ ಸಣ್ಣಸಣ್ಣ ಹೂವುಗಳನ್ನು ಅದರೊಳಗೆ ಹಾಕಬಹುದು. ಆದರೆ ಅದರ ತೂಕವು ಆರಾಮವಾಗಿ ಹೂದಾನಿಯು ನಿಲ್ಲುವಂತಿರಬೇಕು ಎಂಬುದು ನಿಮ್ಮ ಗಮನದಲ್ಲಿ ಇರಲಿ. ಹುಕ್‌ಗಳನ್ನು ಬಳಸಿ ಅಥವಾ ಕೊಕ್ಕೆಗಳಲ್ಲಿ ಇವುಗಳನ್ನು
ನೇತಾಡುವಂತೆ ಮಾಡಬಹುದು.

– ಪೂರ್ಣಿಮಾ ಪೆರ್ಣಂಕಿಲ

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.