ಕಷ್ಟಗಳಿಗೆ ಸ್ಪಂದಿಸುವ  ಮನಸ್ಸಿರಲಿ


Team Udayavani, Nov 19, 2018, 1:28 PM IST

19-november-11.gif

ಜಗತ್ತಿನಲ್ಲಿ ಸಮಸ್ಯೆಗಳಿಲ್ಲದವರು ಯಾರೂ ಇಲ್ಲ. ಪ್ರತಿಯೊಬ್ಬರಿಗೂ ಒಂದೊಂದು ಸಮಸ್ಯೆಯಿದೆ. ಅವರವರ ಸ್ಥಾನಮಾನ, ಮನಃ ಸ್ಥಿತಿ ಮುಂತಾದವುಗಳಿಗನುಗುಣವಾಗಿ ಸಮಸ್ಯೆಗಳ ಸ್ವರೂಪ ಬೇರೆ ಬೇರೆಯಾಗಿರಬಹುದಷ್ಟೆ. ಅಯ್ಯೋ ಸಮಸ್ಯೆಯೆಂದು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಬದಲು ಒಬ್ಬರ ಸಮಸ್ಯೆಗಳಿಗೆ ಮತ್ತೊಬ್ಬರು ನೆರವಾದರೆ ಹೇಗೆ ಎಂಬ ಒಂದು ಕಲ್ಪನೆ ಸಾಕಾರವಾದರೆ ಜಗತ್ತಿನಲ್ಲಿ ಸಮಸ್ಯೆಗಳೇ ಇರುತ್ತಿರಲಿಲ್ಲ. ಈ ಮಾತಿಗೆ ಪೂರಕವಾಗುವ ಕತೆಯೊಂದು ಇಲ್ಲಿದೆ.

ಅದೊಂದು ನೂರಾರು ಉದ್ಯೋಗಿಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಮಟ್ಟದ ಸಾಫ್ಟ್ ವೇರ್‌ ಕಂಪೆನಿ. ತನ್ನ ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಅವರ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಲೆಂದು ಕಂಪೆನಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು. ಅದೊಂದು ದಿನ ಬೆಳ್ಳಂಬೆಳಗ್ಗೆ ಆಫೀಸಿಗೆ ಬಂದ ಎಲ್ಲ ನೌಕರರನ್ನು ಸಭೆ ನಡೆಸುವ ಕೊಠಡಿಗೆ ಬರ ಹೇಳಲಾಯಿತು. ಕುತೂಹಲದಿಂದಲೇ ನೌಕರರು ಅತ್ತ ಹೆಜ್ಜೆ ಹಾಕಿದರು. ಸಭೆ ನಡೆಸಬೇಕಾದ ಕೋಣೆ ಅಕ್ಷರಶಃ ಮಕ್ಕಳು ಆಡುವ ಕೋಣೆಯಂತೆ ಸಿಂಗಾರಗೊಂಡಿ ತ್ತು! ನೌಕರರಿಗಾಗಿ ಆಟ ನಡೆಸಲು ಸಕಲ ತಯಾರಿಯನ್ನೂ ಕಂಪೆನಿ ಮಾಡಿತ್ತು.

ಎಲ್ಲ ನೌಕರರಿಗೂ ಒಂದೊಂದು ಬಲೂನು ನೀಡಲಾಯಿತು. ಅದನ್ನು ಊದಿ ಬಲೂನು ಒಡೆಯದೆ ಪ್ರತಿಯೊಬ್ಬರೂ ಅದರ ಮೇಲೆ ಅವರವರ ಹೆಸರು ಬರೆಯಲು ಸೂಚಿಸಲಾಯಿತು. ಅನೇಕರು ಹೆಸರು ಬರೆಯುವ ವೇಳೆ ಬಲೂನು ಒಡೆದುಕೊಂಡರು. ಅಂಥವರಿಗೆ ಮತ್ತೂಂದು ಬಲೂನು ನೀಡಲಾಯಿತು. ಅನಂತರ ಎಲ್ಲ ಬಲೂನುಗಳನ್ನು ಒಂದು ಕೊಠಡಿಯೊಳಗೆ ಹಾಕಿ ಯಾವ ಬಲೂನು ಒಡೆಯದೆ ಅವರವರ ಬಲೂನು ಹುಡುಕಿ ತರಬೇಕೆಂಬ ಸೂಚನೆ ನೀಡಲಾಯಿತು.

ಎಲ್ಲರೂ ಒಮ್ಮೆಲೆ ಕೊಠಡಿಕಡೆ ಮುಗಿಬಿದ್ದು ಜಾಗರೂಕರಾಗಿ ಬಲೂನು ಹುಡುಕಲು ಆರಂಭಿಸಿದರು. ಅವರಿಗೆ ನೀಡಲಾದ ಸಮಯ ಮುಗಿದರೂ ಒಬ್ಬರಿಗೂ ಅವರ ಬಲೂನು ಸಿಗಲಿಲ್ಲ. ಕೊನೆಗೆ ಅದೇ ಬಲೂನುಗಳನ್ನು ಬೇರೊಂದು ಕೊಠಡಿಗೆ ಹಾಕಿ ತಮಗೆ ಸಿಕ್ಕ ಬಲೂನುಗಳನ್ನು ಅದರ ಮೇಲೆ ಬರೆದಿರುವ ಹೆಸರಿನವರಿಗೆ ನೀಡಲು ಸೂಚಿಸಲಾಯಿತು. ನೀಡಲಾದ ಅರ್ಧ ಸಮಯದೊಳಗಾಗಿಯೇ ಎಲ್ಲರ ಕೈಯಲ್ಲಿ ಅವರವರ ಬಲೂನಿತ್ತು.

ಮನಸ್ಸಿದ್ದರೆ ಸಾಕು
ಈ ಕತೆಯಲ್ಲಿನ ಬಲೂನುಗಳನ್ನು ನಮ್ಮ ಜೀವನದ ಸಮಸ್ಯೆಗಳು, ಕಷ್ಟಗಳು ಎಂದು ಭಾವಿಸಿ. ಇಲ್ಲಿ ಒಬ್ಬರು ಮತ್ತೊಬ್ಬರ ಬಲೂನು ಹುಡುಕಿದಂತೆಯೇ ಜೀವನದಲ್ಲೂ ನಾವು ಮತ್ತೂಬ್ಬರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಿದರೆ ಯಾವ ಸಮಸ್ಯೆಗಳಿಗೆ ಪರಿಹಾರ ಸಿಗದು ಹೇಳಿ? ಅಯ್ಯೋ ನನಗೆ ಅದೆಷ್ಟೋ ಸಮಸ್ಯೆಗಳಿವೆ. ಇನ್ನು ಬೇರೆಯವರ ಸಮಸ್ಯೆಗಳನ್ನು ಬಗೆಹರಿಸುವ ಗೋಜಿಗೆ ಹೋಗುವುದಾ ಎಂಬುದನ್ನು ಬಿಟ್ಟು ಬಿಡಿ. ಬೇರೆಯವರಿಗೆ ನೆರವಾಗಲು ನಿಮಗೆ ಹಣವೋ, ಸಾಮಾಜಿಕ ಸ್ಥಾನಮಾನವೋ ಮತ್ತಾವುದೋ ಬೇಕಾಗಿಲ್ಲ. ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸೊಂದು ನಿಮ್ಮಲ್ಲಿದ್ದರೆ ಸಾಕು.

ಪ್ರಸನ್ನ ಹೆಗಡೆ ಊರಕೇರಿ

ಟಾಪ್ ನ್ಯೂಸ್

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.