ಬದುಕ ಬಾಡಿಸದಿರಲಿ ಆಧುನಿಕತೆಯ ಒಲವು


Team Udayavani, Sep 16, 2019, 5:30 AM IST

Youth

ಹೌದು ಎಲ್ಲರೂ ಆಧುನಿಕತೆಯೆಂದು ತಮ್ಮ ಜೀವನವನ್ನು ಬರಿದಾಗಿಸುವಂತಹ ಕ್ಲಿಷ್ಟಕರ ಪರಿಸ್ಥಿತಿ ಒದಗಿ ಬಂದಿರುವುದು ವಿಪರ್ಯಾಸವೇ ಸರಿ. ಸಾಧನೆಯ ಮಾತು ಮರೀಚಿಕೆಯಾಗಿ ಆತ್ಮಹತ್ಯೆಯೊಂದೇ ಪರಿಹಾರ ಎಲ್ಲ ಕಷ್ಟಗಳಿಗೂ ಎನ್ನುವ ಭಾವನೆ ಮೂಡುವಲ್ಲಿಗೆ ತಲುಪಿದೆ ಯುವಜನತೆಯ ಮನಸ್ಸು.

ಇದೆಲ್ಲಾ ಯಾಂತ್ರೀಕರಣದ ಪ್ರಭಾವವೇ ಹೌದು. ಯಾವುದೇ ಕೆಲಸ ಮಾಡಲು ಹೊರಟವರೂ ಸತತ ಪರಿಶ್ರಮ ನೀಡುವ ಬದಲು ಯಾಂತ್ರೀಕೃತ ಪರಿಹಾರವೇ ಸೂಕ್ತ ಎಂದು ತಾಂತ್ರಿಕತೆಗಳ ಮೊರೆ ಹೋಗುವುದು ಅಧಿಕ ವಾಗಿರುವುದರಿಂದಲೆ ಇಂತಹ ದುರಂತ ಸ್ಥಿತಿ ನಮ್ಮದಾಗಿರುವುದು. ಇದಕ್ಕೆ ಸ್ಪಷ್ಟ ನಿದರ್ಶನ ಮೊಬೈಲ್‌. ಸಾಕಷ್ಟು ಮನಸ್ಸನ್ನು ಸಂಕುಚಿಸಿ ಯೋಚಿಸಲಾಗದಷ್ಟು ಸಂಕಷ್ಟಕ್ಕೆ ಸಿಲುಕಿಸಿ ಜೀವನವನ್ನು ಬರಡಾಗಿಸುತ್ತಿದೆ. ಇದರ ಪರಿವೆ ಇಲ್ಲದೆ ಈ ಮಾಯೆಗೆ ಮಾರುಹೋಗಿರುವ ಜನತೆ ಈ ವ್ಯಸನದಿಂದ ಮುಕ್ತರಾಗಿ ಸಹಜ ಮತ್ತು ವಾಸ್ತವಿಕ ಚಿಂತನೆ ನಡೆಸುವುದು ಅಗತ್ಯ.

ಹಿಂದಿನ ಕಾಲಘಟ್ಟದತ್ತ ಒಮ್ಮೆ ನೆನಪು ಹಾಯಿಸಿ. ಒಂದು ಹಬ್ಬ ಬಂತೆಂದರೆ ಸಾಕು ಎಲ್ಲ ಕುಟುಂಬಸ್ಥರು ಒಂದೆಡೆ ಸೇರಿ ಹಂಚಿಕೊಳ್ಳುತ್ತಿದ್ದ ಸಡಗರ ಸಂಭ್ರಮ ಇಂದು ಮಾಯವಾಗಿದೆ. ಮನಸ್ಸು ಕದಡುವ ಜಾಲತಾಣಗಳಿಗೆ ಮೊರೆಹೋಗಿ ತಮ್ಮ ಇರುವಿಕೆ ಮರೆಯುತ್ತಿದ್ದಾರೆ. ಇದರಿಂದ ಹೊರ ಬಂದಲ್ಲಿ ಮಾತ್ರವೇ ನಾವು ನಾವಾಗಿ ಜೀವನ ಸಾಗಿಸುವುದು ಸಾಧ್ಯ. ನಮ್ಮವರ ಬಗ್ಗೆ ಕಾಳಜಿ ವಹಿಸಿ ಒಂದೆಡೆ ಕೂತು ಎಲ್ಲರ ಜತೆಗೂಡಿ ಸ್ನೇಹ ಸಂಬಂಧವನ್ನು ಸದೃಢಗೊಳಿಸಲು ಚಿತ್ತ ಹರಿಸುವುದು ಸಾಧ್ಯ.

ಅತಿಯಾದ ಆಧುನಿಕ ಒಲವು ಬಹಳ ಸಂಕಷ್ಟ ವನ್ನು ಒಡ್ಡುತ್ತದೆ. ನಮ್ಮ ಸಂತೋಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅತಿಯಾದರೆ ಅಮೃತವೂ ವಿಷವೆನ್ನುವಂತೆ ಅತಿಯಾದ ಒಲವು ಕೂಡ ವಿಷ. ಮುಖದಲ್ಲಿ ನಗು ಮನದಲ್ಲಿ ನೂರಾರು ಕನಸುಹೊತ್ತ ಯುವಮನಗಳು ಸಾಧನೆಯೆಂಬ ಹಸಿವ ಹೊತ್ತು ಬದುಕ ರೂಪಿಸುವಲ್ಲಿ ಯಶಸನ್ನು ಕಾಣುವ ಪಥವನ್ನು ಆರಿಸಿ. ಆಧುನಿಕತೆಯ ಒಲವು ಮದ್ಯ ವ್ಯಸನಿಯಂತಾಗಲು ಅವಕಾಶ ಕಲ್ಪಿಸದೇ ಉತ್ತಮ ಜೀವನ ರೂಪಿಸಲು ಕಾರಣವಾಗಲಿ.
– ವಿಜಿತಾ ಬಂಟ್ವಾಳ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.