ಮುಲ್ಲಾ ನಸ್ರುದ್ದೀನ್ ಹಾಗೂ ದೋಣಿ ಯಾತ್ರೆ
Team Udayavani, Sep 23, 2019, 5:31 AM IST
ಒಂದು ಬಾರಿ ಮುಲ್ಲಾ ನಸ್ರುದ್ದೀನ್ ದೋಣಿಯಲ್ಲಿ ಪ್ರಯಾಣ ಬೆಳೆಸುತ್ತಿದ್ದ. ಅವನಂತೆಯೇ ಒಂದಿಷ್ಟು ಸಹಯಾತ್ರಿಕರು ದೋಣಿಯಲ್ಲಿದ್ದರು. ಎಲ್ಲರೂ ಒಂದೇ ಮಟ್ಟದ ಬುದ್ಧಿವಂತರಾಗಿದ್ದರು. ಅದೇ ದೋಣಿಯಲ್ಲಿ ಪರವೂರಿನ ವ್ಯಕ್ತಿಯೊಬ್ಬನಿದ್ದ.
ನೋಡಲು ಉತ್ತಮ ಬಟ್ಟೆಬರೆಯನ್ನು ಧರಿಸಿ ಪಂಡಿತನಂತೆ ಕಾಣುತ್ತಿದ್ದ ಅವನ ಮುಖದಲ್ಲಿ ಗರ್ವ ಎದ್ದು ಕಾಣುತ್ತಿತ್ತು. ಅವನು ನಸ್ರುದ್ದೀನ್ ಮುಲ್ಲಾನಲ್ಲಿ ಮಾತಿಗೆ ಆರಂಭಿಸಿದ. ಹೀಗೆ ಮಾತನಾಡುವಾಗ ಮುಲ್ಲಾ ಒಂದು ಪದವನ್ನು ತಪ್ಪಾಗಿ ಉಚ್ಚರಿಸಿದ. ಪಂಡಿತ ಇದನ್ನು ಕೇಳಿ ಮುಲ್ಲಾನನ್ನು ಹಾಸ್ಯ ಮಾಡುತ್ತಾ ಜೀವನದಲ್ಲಿ ನೀನು ಒಮ್ಮೆಯೂ ಅಕ್ಷರಗಳ ಉಚ್ಚಾರವನ್ನೇ ಕಲಿತಿಲ್ಲವೇ ಎಂದು ಕೇಳುತ್ತಾನೆ. ಇಲ್ಲ ಎಂದ ಮುಲ್ಲನಿಗೆ ಹಾಗಾದರೆ ನಿನ್ನ ಅರ್ಧ ಜೀವನ ವ್ಯರ್ಥವಾಯಿತಲ್ಲ ಎನ್ನುತ್ತಾನೆ. ಅಷ್ಟೊತ್ತಿಗೆ ಗಾಳಿ ಜೋರಾಗಿ ಬೀಸಿ ದೋಣಿ ಅಲುಗಾಡ ಲಾರಂಭಿ ಸುತ್ತದೆ. ಆಗ ಮುಲ್ಲ ಪಂಡಿತನಿಗೆ ತಮಗೆ ಈಜಲು ಬರುತ್ತದೆಯೋ ಎಂದು ಕೇಳುತ್ತಾನೆ. ಇಲ್ಲ ಎನ್ನುತ್ತಾನೆ ಪಂಡಿತ. ಆಗ ಮಲ್ಲಾ ಅವನಿಗೆ “ಸ್ವಾಮೀ ಈಗ ನಿಮ್ಮ ಇಡೀ ಜೀವನ ವ್ಯರ್ಥವಾಗುತ್ತದೆ. ಯಾಕೆಂದರೆ ದೋಣಿ ಮುಳುಗುತ್ತಿದೆ. ಬದುಕಬೇಕಾದರೆ ನೀರಿಗೆ ಹಾರಿ ಈಜಲೇ ಬೇಕೆಂದು ಹೇಳಿ ನೀರಿಗೆ ಹಾರುತ್ತಾನೆ…’
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ