ಕಡಲ ಮಕ್ಕಳ ನಿಲ್ಲದ ಪಯಣ


Team Udayavani, Feb 11, 2019, 7:28 AM IST

11-february-12.jpg

ಜೀವನ ಎಂದೂ ನಿಂತ ನೀರಾಗಿರಬಾರದು. ಎಷ್ಟೇ ಕಷ್ಟಗಳು ಬಂದರೂ ಮುಂದುವರಿಯುತ್ತಾ ಸಾಗಬೇಕು ಎನ್ನುವ ಸಾರವನ್ನಿಟ್ಟುಕೊಂಡು ಹೆಣೆದ ಚಿತ್ರ ‘ದಿ ಡಿಸಪಿಯರ್ಡ್‌’.

ಶ್ಯಾಂಡಿ ಮಿಚೆಲ್‌ ನಿರ್ದೇಶಿಸಿರುವ ಆಂಗ್ಲ ಭಾಷೆಯಲ್ಲಿ 2012ರಲ್ಲಿ ತೆರೆಗೆ ಬಂದ ಈ ಚಿತ್ರಕ್ಕೆ ಸ್ಫೂರ್ತಿಯಾಗಿದ್ದು 92 ವರ್ಷದ ಮೀನುಗಾರ, ತನ್ನ ವೃತ್ತಿಗೆ ವಿದಾಯ ಹೇಳಿದಾಗ, ಆತನೊಂದಿಗೆ ಮಾತಿಗೆ ಕುಳಿತಾಗ ಈ ಕತೆಯ ಎಳೆ ಹೊಳೆಯಿತಂತೆ.

ಬೃಹತ್‌ ಸಾಗರ, ಪುಟ್ಟ ದೋಣಿ, ಕ್ಷಣಕ್ಷಣಕ್ಕೂ ಮೇಲೆ ಕೆಳಗಾಗುವ ಅಲೆಗಳಂತೆ ಆ 6 ಮಂದಿಯ ಉಸಿರು ಕೂಡ. ಸಂಪೂರ್ಣವಾಗಿ ನೀರಿನ ಮೇಲೆ ನಡೆಯುವ ಸಾಹಸವೇ ‘ದಿ ಡಿಸಪಿಯರ್ಡ್‌’ ಎನ್ನುವ ದೃಶ್ಯ ಕಾವ್ಯ.

ಆರು ಮಂದಿ ಮೀನುಗಾರರು, ಮೀನು ಹಿಡಿಯಲೆಂದು ಉತ್ತರ ಅಟ್ಲಾಂಟಿಕ್‌ ಸಾಗರದ ಮಧ್ಯಕ್ಕೆ ಹೋಗಿರುತ್ತಾರೆ. ರಭಸದಿಂದ ಬಂದಪ್ಪಳಿಸಿದ ಅಲೆಗೆ, ದೋಣಿ ಯಾವ ದಿಕ್ಕಿನತ್ತ ಚಲಿಸುತ್ತಿದೆ ಎಂದೇ ಅರಿವಿಗೆ ಬರೋದಿಲ್ಲ. ಹುಟ್ಟು ಹಾಕುತ್ತಾ ಹಾಕುತ್ತಾ, ಕಾಣದ ತೀರಕ್ಕಾಗಿ ಕಾತರಿಸುವ ಆ ಮುಖಗಳಲ್ಲಿ ಸಾವಿನ ಆತಂಕ ಕಾಡುತ್ತಿರುತ್ತದೆ. ದೋಣಿಯಲ್ಲಿದ್ದ ಮೀನುಗಾರರ ಸಂಸಾರದ ಕತೆಗಳನ್ನು ತೋರಿಸುತ್ತಲೇ ನೋಡುಗರನ್ನೂ ಆ ಸಮುದ್ರದ ನಟ್ಟ ನಡುವೆ ನಿಲ್ಲಿಸುತ್ತಾರೆ ನಿರ್ದೇಶಕರು.

ದೋಣಿಯಲ್ಲಿದ್ದ ನೀರು, ಅಲ್ಪ ಆಹಾರ ಎಲ್ಲವೂ ಮುಗಿದು ಹೋದ ಮೇಲೆ, ಜೀವ ಉಳಿಸಿಕೊಳ್ಳುವುದೇ ಅವರವರಿಗೆ ಮುಖ್ಯವಾದಾಗ, ಅಲ್ಲಿ ಹುಟ್ಟುವ ಸ್ವಾರ್ಥ ಭಾವಗಳು ಮತ್ತೆ ಎಲ್ಲರನ್ನೂ ಧೃತಿಗೆಡಿಸುತ್ತವೆ. ಅವುಗಳನ್ನೆಲ್ಲ ಮೀರಿ, ಸಹಬಾಳ್ವೆಯೊಂದು ಅವರಿಗೆ ಜತೆಯಾಗುತ್ತದೆ. ಸಾಗರ ತಂದೊಡ್ಡುವ ಪ್ರತಿ ಕ್ಷಣದ ಸವಾಲುಗಳನ್ನು ಎದುರಿಸುತ್ತಾ, ಅವರೆಲ್ಲ ಹೇಗೆ ಜೀವ ಉಳಿಸಿಕೊಂಡು, ಮನೆಗೆ ತಲುಪುತ್ತಾರೆ ಎನ್ನುವುದನ್ನು ಅತ್ಯಂತ ರೋಚಕವಾಗಿ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ಕಾಣಸಿಗುವ ಬದುಕಿನ ತಲ್ಲಣಗಳು, ಕಷ್ಟಗಳು ಎದುರಾದಾಗ ನಾವು ಅದಕ್ಕೆ ಪ್ರತಿಸ್ಪಂದಿಸುವ ರೀತಿ, ಸಾವು ಎದುರಾದಾಗ ನಾವೇನು ಮಾಡಬಹುದು ಎನ್ನುವ ದೃಶ್ಯಗಳು ಬದುಕಿಗೆ ಅತ್ಯಮೂಲ್ಯ ಪಾಠವನ್ನು ನೀಡುವಂತಿವೆ. ಒಟ್ಟಿನಲ್ಲಿ ಮನೋಜ್ಞವಾಗಿ ಮೂಡಿ ಬಂದಿರುವ ಈ ಸಿನೆಮಾ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವಂತೆ ಮಾಡಿದೆ. 

ಟಾಪ್ ನ್ಯೂಸ್

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್‌

B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್‌

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್

ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್

QR code system: ರೈಲ್ವೆ ಟಿಕೆಟ್‌ ಖರೀದಿಗೆ ಕ್ಯೂಆರ್‌ಕೋಡ್‌ ವ್ಯವಸ್ಥೆ; ಉತ್ತಮ ಸ್ಪಂದನೆ

QR code system: ರೈಲ್ವೆ ಟಿಕೆಟ್‌ ಖರೀದಿಗೆ ಕ್ಯೂಆರ್‌ಕೋಡ್‌ ವ್ಯವಸ್ಥೆ; ಉತ್ತಮ ಸ್ಪಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.