ಕಾರು ಖರೀದಿ ಮುನ್ನ,ಅನುಸರಿಸಬೇಕಾದ ಕ್ರಮಗಳು


Team Udayavani, Dec 28, 2018, 1:03 PM IST

28-december-9.jpg

ಕೆಲವೊಮ್ಮೆ ಹೊಸ ಕಾರು ಖರೀದಿ ವೇಳೆಯೂ ಮೋಸವಾಗಿರುವುದನ್ನು ನೀವು ಕೇಳಿರಬಹುದು. ಪೈಂಟ್‌ ಮಾಡಿದ್ದು, ಆಕ್ಸಿಡೆಂಟ್‌ ಆಗಿದ್ದ ವಾಹನ, ಬಳಕೆಯಾದ ವಾಹನಗಳನ್ನು ಡೀಲರ್‌ ನೀಡಿದ್ದು ಇತ್ಯಾದಿಗಳ ಕುರಿತಾಗಿ ದೇಶಾದ್ಯಂತ ದೂರುಗಳಿವೆ. ಇಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಗ್ರಾಹಕರಾದವರು ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ್ದು ಅಗತ್ಯ. ಈ ನಿಟ್ಟಿನಲ್ಲಿ ಏನೇನು ಮಾಡಬೇಕು ಎಂಬುದಕ್ಕೆ ಕೆಲವು ಮಾರ್ಗದರ್ಶಿ ಸೂತ್ರಗಳು ಇಲ್ಲಿವೆ.

ರಿಜಿಸ್ಟ್ರೇಶನ್‌ಗೆ ಮುನ್ನ
ಹೊಸ ಕಾರು ಅಂದರೆ ಅದು ರಿಜಿಸ್ಟ್ರೇಶನ್‌ಗೆ ಹೋಗಲೇಬೇಕು. ಒಂದು ಬಾರಿ ಕಾರು ನಿಮ್ಮ ಹೆಸರಿಗೆ ನೋಂದಣಿಯಾಯಿತು ಎಂದರೆ ನೀವು ಕಾರು ತಯಾರಾದ ವರ್ಷ, ತಿಂಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ. ಇದಕ್ಕೆ ವಿನ್‌ ನಂಬರ್‌ ಎಂದು ಹೇಳುತ್ತಾರೆ. ಅಲ್ಲದೇ ಎಂಜಿನ್‌, ಚಾಸಿಸ್‌ ನಂಬರ್‌ ಖಚಿತಪಡಿಸಿಕೊಳ್ಳಿ. ಇದರೊಂದಿಗೆ ಕಾರಿನ ಸ್ಪೀಡೋ ಮೀಟರ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ ಅದು ಟೆಸ್ಟ್‌ ಡ್ರೈವ್‌ ವಾಹನವಾಗಿರಬಹುದು.

ಖರೀದಿ ದಿನ
ಡೀಲರ್‌ ಶಿಪ್‌ಗೆ ಭೇಟಿ ನೀಡಿ, ಕಾರು ಕೂಲಂಕಷವಾಗಿ ಪರಿಶೀಲಿಸಿ. ಹಗಲು ಸರಿಯಾದ ಬೆಳಕಿರುವ ವೇಳೆಯೇ ಕಾರು ಖರೀದಿ ಪ್ರಕ್ರಿಯೆ ನಡೆಯಲಿ. ಕಾರು ನೋಂದಣಿಗೆ ಸಂಬಂಧಪಟ್ಟ ಎಲ್ಲ ಕಾಗದ ಪತ್ರಗಳು ನಿಮ್ಮ ಕೈ ಸೇರಿವೆಯೇ ನೋಡಿ ಕೊಳ್ಳಿ. ಎಕ್ಸೆಟೆಂಡೆಂಡ್‌, ಇತರ ವಾರೆಂಟಿ ಕಾಗದ ಪತ್ರಗಳು ಸರಿಯಿವೆಯೇ, ರೋಡ್‌ ಟ್ಯಾಕ್ಸ್‌ ಸ್ಲಿಪ್‌, ಇನ್ಶೂರೆನ್ಸ್‌ ಕೈಸೇರಿವೆಯೇ ಎಂಬುದನ್ನು ಪರಿಶೀಲಿಸಿ. ಕಾರಿನ ಆರ್‌ಸಿ ಬರುವವರೆಗೂ ಚಾಲನೆ ವೇಳೆ ಇದನ್ನು ಇಟ್ಟುಕೊಳ್ಳುವುದು ಕಡ್ಡಾಯ.

ಪರಿಶೀಲನೆ ವಿಧಾನಗಳು
ಕಾರಿನ ಸುತ್ತಲೂ ಸೂಕ್ಷ್ಮವಾಗಿ ಪರಿಶೀಲಿಸಿ, ಕಾರಿನ ಡೋರ್‌ ಓಪನ್‌ ಮಾಡಿ ಬದಿಯ ಪೈಂಟಿಂಗ್‌ ಸರಿಯಾಗಿದೆಯೇ ನೋಡಿ. ಯಾವುದಾದರೂ ರಿಪೇರಿ ಕೆಲಸ ಆಗಿದ್ದರೆ ಗಮನಕ್ಕೆ ಬರಬಹುದು. ಹಾಗೆಯೇ ಇಂಟೀರಿಯರ್‌ ಕ್ಲೀನ್‌ ಇದೆಯೇ ಎಂದು ನೋಡಿ. ಎಲ್ಲ ಎಲೆಕ್ಟ್ರಿಕ್‌ ಅಂಶಗಳು ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಿ. ಡಿಕ್ಕಿ ಓಪನ್‌ ಮಾಡಿ ಸ್ಪೇರ್‌ ಟಯರ್‌, ರಿಪೇರಿ ಸಲಕರಣೆಗಳು, ಜ್ಯಾಕ್‌ ಇದೆಯೇ ಎಂದು ನೋಡಿಕೊಳ್ಳಿ. ಕಾರಿನ ಒಳಭಾಗದಲ್ಲಿ ಮ್ಯಾಟ್‌, ಸ್ಪೇರ್‌ ಬಲ್ಬ್ ಇದೆಯೇ ಪರಿಶೀಲಿಸಿ.

ನಾಲ್ಕೂ ಡೋರ್‌ ಚೆನ್ನಾಗಿ ಹಾಕಲು ಸಾಧ್ಯವಾಗುತ್ತಿದೆಯೇ, ವಿಂಡೋ ಗ್ಲಾಸ್‌ ಏರಿಸಲು ಸಾಧ್ಯವಾಗುತ್ತಿದೆಯೇ ಎನ್ನುವುದನ್ನೂ ನೋಡಿಕೊಳ್ಳಿ. ಕಾರಿನ ಟಯರ್‌ಗಳನ್ನು ಪರಿಶೀಲಿಸಿ, ಗಾಳಿ ಕಡಿಮೆ ಇದೆ ಎಂದು ಅನಿಸಿದರೆ ಕೂಡಲೇ ಫಿಲ್‌ಅಪ್‌ ಮಾಡಿ. ವೈಪರ್‌ ಚೆನ್ನಾಗಿ ಚಾಲನೆಯಾಗುತ್ತಿದೆಯೇ ಎಂಬುದನ್ನೂ ಪರಿಶೀಲಿಸಿ. ಕಾರನ್ನು ಸ್ಟಾರ್ಟ್‌ ಮಾಡಿ, ಬಳಿಕ ಎಂಜಿನ್‌ ಬೇ ಓಪನ್‌ ಮಾಡಿ ನೋಡಿ. ಕೆಳಭಾಗದಲ್ಲೇ ಆಯಿಲ್‌ ಇತ್ಯಾದಿ ತೊಟ್ಟಿಕ್ಕುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ನಿಮ್ಮ ಕಾರು ಹೊಸದು ಎಂದರೆ 50 ಕಿ.ಮೀ. ಮೇಲ್ಪಟ್ಟು  ಲನೆಯಾಗಿರಬಾರದು. ಹಾಗೆಯೇ ಆರಂಭದಲ್ಲಿ ಪೆಟ್ರೋಲ್‌ ತುಸು ಮಾತ್ರ ಇದ್ದು ಶೋರೂಂನಿಂದ ಪೆಟ್ರೋಲ್‌ ಪಂಪ್‌ವರೆಗೆ ಹೋಗುವಷ್ಟು ಮಾತ್ರ ಇರುತ್ತದೆ.

ಕಾರು ಖರೀದಿ ಬಳಿಕ ಆ್ಯಸಸರೀಸ್‌ ಫಿಟ್‌ ಮಾಡಬೇಕೆಂದಿದ್ದಲ್ಲಿ, ಕಾರಿಗೆ ವಿನೈಲ್‌ ಮ್ಯಾಟನ್ನು ಹಾಕಿಸುವುದು ಒಳ್ಳೆಯದು. ಇದರಿಂದ ಕಾರಿನ ಒಳಭಾಗ ಹೆಚ್ಚು ಕೊಳೆ, ಕೆಸರಾಗದೆ ತುಕ್ಕು ಹಿಡಿಯುವುದು ತಪ್ಪುತ್ತದೆ. ಹಾಗೆಯೇ ಸಮುದ್ರ ತೀರದ ಪ್ರದೇಶದವರು, ವಿಶೇಷವಾಗಿ ನಮ್ಮ ಕರಾವಳಿ ಭಾಗದವರು, ಕಾರಿನ ತಳಭಾಗಕ್ಕೆ ಆ್ಯಂಟಿರೆಸ್ಟ್‌ ಕೋಟಿಂಗ್‌ ಅನ್ನು ಆರಂಭದಲ್ಲೇ ನೀಡುವುದು ಉತ್ತಮ.

 ಈಶ 

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.