ಚಳಿಗೆ ಕಾಡುವ ಶಿಲೀಂಧ್ರ ಸೋಂಕು


Team Udayavani, Jan 21, 2020, 5:14 AM IST

fungal-infection

ಚಳಿಗಾಲ ಕಾಲಿಡುತ್ತಿದ್ದಂತೆ ಚರ್ಮದ ವಿವಿಧ ಕಾಯಿಲೆಗಳು ದಾಂಗುಡಿ ಇಡುತ್ತವೆ. ಇವುಗಳಲ್ಲಿ ಚರ್ಮದ ಫ‌ಂಗಸ್‌ ಸೋಂಕು ಒಂದು. ಚರ್ಮ, ಕೂದಲು ಮತ್ತು ಉಗುರುಗಳಲ್ಲಿ ಶಿಲೀಂಧ್ರ ಸೋಂಕು ಉಂಟಾಗುತ್ತದೆ. ಇದಕ್ಕೆ ಕಾರಣ ಪೋಷಕಾಂಶಗಳ ಕೊರತೆ. ರಿಂಗ್‌ ವರ್ಮ್ ಅಥವಾ ಹುಳುಕಡ್ಡಿ ಕೂಡ ಇದೇ ಸಾಲಿನಲ್ಲಿ ಸೇರ್ಪಡೆಯಾಗಿದೆ. ಆಡುಭಾಷೆಯಲ್ಲಿ ಇದನ್ನು ಹುಳುಕಡ್ಡಿ, ಚಿಬ್ಬು ಎಂದು ಕರೆಯುತ್ತೇವೆ. ಮಧುಮೇಹ ನಿಯಂ ತ್ರಣ ಕಳೆದುಕೊಂಡಾಗ ಇಂತಹ ರೋಗ ಬೇಗನೆ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ದೀರ್ಘ‌ ಕಾಲದ ಆ್ಯಂಟಿ ಬಯಾಟಿಕ್‌ ಅಥವಾ ಸ್ಟಿರಾಯ್ಡ ಬಳಕೆ ಕೂಡ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಲ್ಲದು.

ಗುಣಲಕ್ಷಣ
ಬಿಳಿ, ಕೆಂಪು, ಕಪ್ಪು, ಕಂದು ಬಣ್ಣದ ಮಚ್ಚೆಗಳು ದೇಹದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಇದರಿಂದ ತುರಿಕೆ, ಉರಿ ಉಂಟಾಗಬಹುದು. ತುರಿಸಿದರೆ ನೋವು ಹೆಚ್ಚಾಗಿ, ರಕ್ತ ಜಿನುಗುವ ಸಾಧ್ಯತೆಯೂ ಇರುತ್ತವೆ. ಮುಖ್ಯವಾಗಿ ಕುತ್ತಿಗೆ, ಬೆನ್ನು, ಭುಜ, ಕಾಲಿನಲ್ಲಿ, ಸೊಂಟದ ಭಾಗದಲ್ಲಿ ಫ‌ಂಗಸ್‌ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಎಳೆ ಮಕ್ಕಳಲ್ಲಿ ಈ ಶಿಲೀಂಧ್ರಗಳ ಕಾಟ ಹೆಚ್ಚಾಗಿರುತ್ತದೆ. ಮಕ್ಕಳ ನಾಲಿಗೆ ಮೇಲೆ, ಬಾಯಿಯ ಒಳಭಾಗದಲ್ಲಿ ಬಿಳಿ ಬಣ್ಣದ ಲೇಪನ ಕಂಡುಬರುತ್ತವೆ. ಇದನ್ನು ನಿವಾರಿಸಲು, ದಿನನಿತ್ಯ ದೇಹ ಶುದ್ಧಿಯ ಕಡೆ ಗಮನ ಹರಿಸಬೇಕು. ಸ್ನಾನ ಮಾಡುವಾಗ, ಹಲ್ಲು ತೊಳೆಯುವಾಗ ಸರಿಯಾಗಿ ಶುಚಿಗೊಳಿಸಬೇಕು. ಇದ ರಿಂದ ಚರ್ಮದ ಫ‌ಂಗಸ್‌ ಮಕ್ಕಳಿಗೆ ಬಾಧಿಸದಂತೆ ತಡೆಗಟ್ಟಬಹುದು.

ಹೀಗೆ ಮಾಡಿ
ಚರ್ಮದಲ್ಲಿ ತೇವಾಂಶ ಇರದಂತೆ ನೋಡಿಕೊಳ್ಳುವುದು ಅಗತ್ಯ. ಸ್ನಾನ ಮಾಡಿ, ಕೈಕಾಲು ತೊಳೆದು ಹಾಗೇ ಕುಳಿತುಕೊಳ್ಳುವುದು ಉತ್ತಮ ಲಕ್ಷಣ ವಲ್ಲ. ಒಂದು ವೇಳೆ ಹೀಗೆ ಮಾಡಿದರೆ ನೀರಿನಲ್ಲಿರುವ ಶಿಲೀಂಧ್ರಗಳು ಬಹು ಬೇಗನೆ ಬೆಳೆಯುತ್ತವೆ. ಇಂತಹ ಹಲವು ಸಕಾಲಿಕ ಕ್ರಮದ ಮೂಲಕ ಇವುಗಳನ್ನು ಶಮನ ಮಾಡಬಹುದು. ಜತೆಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಲೇಬೇಕು. ಶಿಲೀಂಧ್ರಗಳ ಹಾವಳಿಯಿಂದ ಚರ್ಮದ ಸೋಂಕು ಕಂಡುಬಂದ ತತ್‌ಕ್ಷಣ ವೈದ್ಯರನ್ನು ಕಾಣುವುದು ಒಳಿತು. ಹೆಚ್ಚಾದಂತೆ ನೋವಿನ ಕಾಟ ಹೆಚ್ಚು. ಇದಕ್ಕೆ ಅವಕಾಶ ನೀಡದಿರುವುದು ಒಳಿತು.

ದಿನನಿತ್ಯದ ಜೀವನದಲ್ಲಿ ಅಳವಡಿಸಬೇಕಾದ ಸಿಂಪಲ್‌ ಸೂತ್ರಗಳಿವು. ಇದೇನು ಮಹಾ ಎಂದು ಹೇಳಿಕೊಳ್ಳುವಂತೆಯೂ ಇಲ್ಲ. ಇಂತಹ ಸಣ್ಣ ವಿಚಾರಗಳು, ಆರೋಗ್ಯ ಹಾಗೂ ತ್ವಚೆ ರಕ್ಷಣೆ ವಿಚಾರದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ.

-ದೇಹದ ನೀರಿನಂಶ ತೆಗೆಯಲು ಒಣಗಿದ ಟವೆಲ್‌ ಬಳಸಿಕೊಳ್ಳಿ.
-  ಟವೆಲ್‌, ಸಾಬೂನ್‌, ಬಾಚಣಿಗೆ ಪ್ರತ್ಯೇಕವಾಗಿ ಇಡುವುದು ಉತ್ತಮ.
- ಟವೆಲ್‌, ಕಾಲುಚೀಲ, ಕರವಸ್ತ್ರ, ಒಳಉಡುಪುಗಳನ್ನು ಪ್ರತಿನಿತ್ಯ ಸ್ವತ್ಛಗೊಳಿಸಬೇಕು.
- ಮಧುಮೇಹಿಗಳು ನಿಯಮಿತ ವಾಗಿ ರಕ್ತದ ಸಕ್ಕರೆ ಅಂಶವನ್ನು ಪರೀಕ್ಷೆ ಮಾಡಿಕೊಳ್ಳಬೇಕು.
-ಆ್ಯಂಟಿಬಯಾಟಿಕ್‌, ಸ್ಟಿರಾಯ್ಡ ಬಳಕೆಯ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ.

ಟಾಪ್ ನ್ಯೂಸ್

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.