ಹಂಪನಕಟ್ಟೆಯ ಫುಟ್ಪಾತ್ ದುಸ್ಥಿತಿ
Team Udayavani, Nov 11, 2018, 3:33 PM IST
ಸ್ಮಾರ್ಟ್ ಸಿಟಿಯಾಗುವ ಸಿದ್ಧತೆಯಲ್ಲಿರುವ ಮಂಗಳೂರಿನ ಹೃದಯಭಾಗದಲ್ಲಿರುವ ಫುಟ್ಪಾತಿನ ಅವ್ಯವಸ್ಥೆ ನೋಡಿದರೆ ನಿಜಕ್ಕೂ ಮರುಕಉಂಟಾಗುತ್ತದೆ!. ಕೆ.ಎಸ್.ರಾವ್ರಸ್ತೆಯಲ್ಲಿ ಫುಟ್ಪಾತ್ ಇಲ್ಲದೆ ಪಾದಚಾರಿಗಳು ಮಾರ್ಗ ಮಧ್ಯೆಯೇ ನಡೆದಾಡುವಅಪಾಯಕಾರಿ ಪರಿಸ್ಥಿತಿ ಇದೆಯಾದರೆ, ಕಾಲುದಾರಿ ಇದ್ದಲ್ಲಿ ಸರಾಗವಾಗಿ ನಡೆದಾಡಲು ವಾಣಿಜ್ಯ ಮಳಿಗೆಗಳೂ ಸೇರಿದಂತೆ ಹತ್ತಾರು ಅಡೆತಡೆಗಳು!
ಹಂಪನಕಟ್ಟೆಯಿಂದ ಬಾವುಟಗುಡ್ಡೆಗೆ ಹೋಗುವ ಕಾಲುದಾರಿಯ ಪರಿಸ್ಥಿತಿ ಹದಗೆಟ್ಟಿದ್ದು,ಇಲ್ಲಿನ ಕಾಲುದಾರಿಯಲ್ಲಿರುವ ಅಸ್ತವ್ಯಸ್ತಗೊಂಡ ಕಲ್ಲುಚಪ್ಪಡಿ ಪಾದಚಾರಿಗಳಿಗೆ ನಿರಂತರ ಸಮಸ್ಯೆ ತಂದೊಡ್ಡುತ್ತಿದೆ. ಸಿಂಡಿಕೇಟ್ ಬ್ಯಾಂಕ್ ಬಳಿಯ ಫುಟ್ಪಾತಿನಲ್ಲಿ ಹಲವು ತಿಂಗಳುಗಳಿಂದ ತ್ಯಾಜ್ಯ ಮಣ್ಣಿನ ರಾಶಿ ಇದ್ದು, ಇದನ್ನು ತೆರವುಗೊಳಿಸದೇ ಇರುವುದರಿಂದಾಗಿ ಪಾದಚಾರಿಗಳಿಗೆ ನಡೆದಾಡಲುತೀವ್ರತೊಂದರೆಯುಂಟಾಗಿದೆ. ಈ ರಸ್ತೆಯಲ್ಲಿ ಸೂಕ್ತ ಬಸ್ಸು ನಿಲ್ದಾಣ ಇಲ್ಲದೆ ವಿದ್ಯಾರ್ಥಿಗಳೂ ಸೇರಿದಂತೆ ಸಾವಿರಾರು ಮಂದಿ ದಿನನಿತ್ಯ ನರಕಯಾತನೆ ಪಡುತ್ತಿದ್ದು, ಕಾಲುದಾರಿಯಲ್ಲಿ ನಡೆದಾಡಲೂ ಹರಸಾಹಸ ಪಡಬೇಕಾಗಿದೆ. ಸ್ಥಳೀಯ ಕಾರ್ಪೊರೇಟರ್ ಈ ಸಮಸ್ಯೆಗೆಇನ್ನಾದರೂ ಶಾಶ್ವತ ಪರಿಹಾರಕಂಡುಕೊಳ್ಳಬಹುದೇ?!
ಸತೀಶ್ ಶೆಟ್ಟಿ ಕೊಡಿಯಾಲ್ಬೈಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ