ಮನೆ ಬಾಗಿಲಿಗೇ “ಬಾಣಂತನ ಭಾಗ್ಯ ‘


Team Udayavani, Jul 1, 2017, 4:57 PM IST

10.jpg

ಬಾಣಂತನ ಮಹಿಳೆಯರ ಜೀವನದ ಸೂಕ್ಷ್ಮವಾದ ಘಟ್ಟ. ಈ ಘಟ್ಟದಲ್ಲಿ ಹೆಣ್ಣಿನ ಮನಸ್ಸು ಹಾಗೂ ದೇಹ ಅತಿ ಸೂಕ್ಷ್ಮವಾಗಿರುತ್ತದೆ. ಹಿಂದೆಲ್ಲಾ ಹಳ್ಳಿಗಳಲ್ಲಿ ಸೂಲಗಿತ್ತಿಯರು ಈ ಕಾಯಕವನ್ನು ಮಾಡುತ್ತಿದ್ದರು. ಮಗು ಹಾಗೂ ತಾಯಿಯ ಪಾಲನೆ ಪೋಷಣೆ ಮಾಡುವುದರಲ್ಲಿ ಇವರ ಪಾತ್ರ ಮಹತ್ತರವಾಗಿತ್ತು. ಸೂಲಗಿತ್ತಿಯರು ಮಗು ಹಾಗೂ ತಾಯಿಯ ಸೇವೆಯ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು. 

ಇಂದಿನ ಆಧುನಿಕ ಯುಗದ ಮಹಿಳೆಯರು ಬಾಣಂತನ ಹೇಗೆ ಮಾಡುವುದೆಂಬ ಚಿಂತೆಯಲ್ಲಿರುತ್ತಾರೆ. ಈ ಘಟ್ಟದಲ್ಲಿ ಸರಿಯಾದ ಪಾಲನೆ ಹಾಗೂ ಪೋಷಣೆ ದೊರೆತಾಗ ಮಾತ್ರ ತಾಯಿ ಮತ್ತು ಮಗು ಆರೋಗ್ಯದಿಂದಿರಲು ಸಾಧ್ಯ. ಇಂದು ನಗರಗಳಲ್ಲಿಯೂ ಬಾಣಂತಿಯರ ಸೇವೆ ಹಾಗೂ ಪಾಲನೆ ಮಾಡಲು ಹಲವಾರು ಸಂಸ್ಥೆಗಳು ಹುಟ್ಟಿಕೊಂಡಿವೆ. ಇವುಗಳು ಸೂಲಗಿತ್ತಿ ಮಾಡುತ್ತಿದ್ದ ಸೇವೆಯನ್ನು ಮಾಡುತ್ತಿವೆ. ಅಂಥ ಸಂಸ್ಥೆಗಳಲ್ಲಿ ಪರಿಪಾಲನಾ ಸಂಸ್ಥೆಯೂ ಒಂದು. ಪರಿಪಾಲನಾ ಸಂಸ್ಥೆ ಹೆಸರೇ ಸೂಚಿಸುವಂತೆ ಬಾಣಂತಿಯ ಮನೆಗೆ ತೆರಳಿ ತಾಯಿ ಹಾಗೂ ಮಗುವಿನ ಪಾಲನೆ ಹಾಗೂ ಪೋಷಣೆಯ ಜವಾಬ್ದಾರಿ ಹೊರುತ್ತದೆ

ಸಂಸ್ಥೆ ಕಟ್ಟಲು ಸ್ಪೂರ್ತಿ 
ಈ ಪರಿಪಾಲನಾ ಸಂಸ್ಥೆಯ ರೂವಾರಿ ಸುಮಲತಾ. ಸುಮಾರು 12 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿರುವ ಸುಮಲತಾ ಅವರಿಗೆ ಜನನಿಯೇ ಮೊದಲ ಗುರು. ಈ ಸಂಸ್ಥೆಯ ರೂವಾರಿ ಸುಮಲತಾ ಅವರಿಗೆ ಅಮ್ಮ ಮಾಡುತ್ತಿದ್ದ ಬಾಣಂತನ ಸೇವೆಯೇ ಸ್ಪೂರ್ತಿಯಂತೆ. ಇದನ್ನೇ ಯಾಕೆ ಮುಂದುವರೆಸಬಾರದು ಎಂದೆನಿಸಿ ಹೆಚ್ಚಿನ ಚಿಕಿತ್ಸಾ ವಿಧಾನಗಳನ್ನು ಕೇರಳದ ಆಯುರ್ವೇದ ಸೆಂಟರ್‌ನಲ್ಲಿ ಅಭ್ಯಸಿಸಿದರು. ನಂತರ ಮನೆಮನೆಗಳಿಗೆ ತೆರಳಿ ಈ ವೃತ್ತಿಯಲ್ಲಿ ತೊಡಗಿಸಿಕೊಂಡರು.ಈಗ 4 ಮಂದಿ ಅನುಭವಿ ಮಹಿಳೆಯರು ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪರಿಪಾಲನಾ ಸಂಸ್ಥೆಯು ಬಾಣಂತಿಗೆ ಅಗತ್ಯವಿರುವ ಚಿಕಿತ್ಸೆ ಹಾಗೂ ಸೇವೆಯನ್ನು ನೀಡುತ್ತದೆ. ಬಾಣಂತಿಯರಿಗೆ ಬೇಕಾಗುವ ಆಯುರ್ವೇದ ತೈಲಗಳನ್ನು ತಯಾರಿಸಿ ಅವರಿಗೆ ಅಂಗಮರ್ಧನ ಮಾಡಲಾಗುವುದು.ತೂಕ ಕಡಿಮೆ ಮಾಡಿಕೊಳ್ಳಲು, ದೇಹದಲ್ಲಿ ಇರುವ ಬೇಡದ ಕೊಬ್ಬನ್ನು ಕರಗಿಸಲು ಹಾಗೂ ಬೆನ್ನು ನೋವಿನ ನಿವಾರಣೆಗೆ ಅಂಗಮರ್ಧನ ಮಾಡಲಾಗುವುದು. ವೈದ್ಯರ ಸಲಹೆ ಮೇರೆಗೆ  ಈ ಚಿಕಿತ್ಸೆ ನೀಡಲಾಗುವುದು.ಆಹಾರ ತಜ್ಞರ ಸಲಹೆಯಂತೆ ಬಾಣಂತಿಯರು ತೆಗೆದುಕೊಳ್ಳಬೇಕಾದ ಪೌಷ್ಟಿಕ ಆಹಾರಗಳ ಬಗ್ಗೆ ತಿಳಿಸಿಕೊಡಲಾಗುವುದು.  ಬಾಣಂತಿ ಬಯಸಿದರೆ ಮೂರು ತಿಂಗಳ ನಂತರ ಯೋಗ ತರಬೇತುದಾರರ ಸಲಹೆಯನ್ನು ಅನುಸರಿಸಿ ಯೋಗ ತರಬೇತಿಯನ್ನು ನೀಡಲಾಗುವುದು.

ಈ ಸೇವೆಯನ್ನು ಇನ್ನೂ ವಿಸ್ತರಿಸುವ ಸಲುವಾಗಿ ಭವಿಷ್ಯದಲ್ಲಿ ಆಸಕ್ತ ಮಹಿಳೆಯರಿಗೆ ಬಾಣಂತನದ ತರಬೇತಿ ನೀಡಲಾಗುವುದು. ಹಾಗೂ ಅವರ ಜೊತೆ 2 ವರ್ಷಗಳ ಒಪ್ಪಂದ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದೇನೆ ಎನ್ನುತ್ತಾರೆ ಸುಮಲತಾ. 

ಸೌಮ್ಯಶ್ರೀ ಎನ್‌.

ಟಾಪ್ ನ್ಯೂಸ್

Kohli IPL 2024

IPL;ಇಂದು ಆರ್‌ಸಿಬಿ ಎದುರಾಳಿ ಗುಜರಾತ್‌ ಟೈಟಾನ್ಸ್‌:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ

Chandra

China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ

1-RV

Rohit Vemula ದಲಿತ ಅಲ್ಲ; ಪೊಲೀಸ್‌ ವರದಿಯಲ್ಲಿ ಉಲ್ಲೇಖ: ಏನಿದು ಪ್ರಕರಣ?

1-eqqwewqeqweqwe

Huge Controversy!: ಮಹಾತ್ಮಾ ಗಾಂಧಿ ಕಪಟಿ; ರಾಹುಲ್‌ ಗಾಂಧಿ ಬೆಸ್ಟ್‌

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kohli IPL 2024

IPL;ಇಂದು ಆರ್‌ಸಿಬಿ ಎದುರಾಳಿ ಗುಜರಾತ್‌ ಟೈಟಾನ್ಸ್‌:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ

1-qewqeqwe

England;  20 ವರ್ಷದ ಕ್ರಿಕೆಟಿಗ ನಿಗೂಢ ಸಾವು!

Chandra

China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ

1-RV

Rohit Vemula ದಲಿತ ಅಲ್ಲ; ಪೊಲೀಸ್‌ ವರದಿಯಲ್ಲಿ ಉಲ್ಲೇಖ: ಏನಿದು ಪ್ರಕರಣ?

1-eqqwewqeqweqwe

Huge Controversy!: ಮಹಾತ್ಮಾ ಗಾಂಧಿ ಕಪಟಿ; ರಾಹುಲ್‌ ಗಾಂಧಿ ಬೆಸ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.