ಕರಾವಳಿ ಲಂಚ್‌ ಹೋಂ :ಇಲ್ಲಿ ಮೀನೂಟ ಸೂಪರ್‌ ಮಾರಾಯ್ರೇ !


Team Udayavani, Aug 18, 2018, 5:16 PM IST

1-tr.jpg

ಈ ಹೋಟೆಲ್‌ ಹೆಸರು ಕೇಳಿದಾಕ್ಷಣ ಕರಾವಳಿಯ ಕಡೆ ತಯಾರಿಸುವ ರುಚಿರುಚಿ ತಿನಿಸುಗಳ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಮೀನುಪ್ರಿಯರ ಬಾಯಲ್ಲಿ ನೀರೂರಿದರೂ ಆಶ್ಚರ್ಯವೇನಿಲ್ಲ… ಹೆಸರಿಗೆ ತಕ್ಕ ಹಾಗೆ ಕರಾವಳಿ ಲಂಚ್‌ ಹೋಮ್‌ ಕರಾವಳಿ ಖಾದ್ಯಗಳಿಗೆ ಹೆಸರುವಾಸಿ. ಒಮ್ಮೆ ಹೋಟೆಲ್‌ ಮೂಂದೆ ಹಾದು ಹೋದರೆ ಅದರದ್ದೇ ಘಮ…  

ಒಂದೇ ರುಚಿ
ಬೆಂಗಳೂರಿನಲ್ಲಿ ಕರಾವಳಿಯ ಮೀನೂಟವನ್ನು ಮಿಸ್‌ ಮಾಡಿಕೊಳ್ಳುತ್ತಿರುವವರು ಇಲ್ಲಿನ ರುಚಿಯನ್ನು ಪ್ರಯತ್ನಿಸಬಹುದು. ರುಚಿಯ ಬಗ್ಗೆ ಕಾಳಜಿ ಹೊಂದಿರುವ ಮಾಲೀಕರು ಅಡುಗೆಯಲ್ಲಿ ಬಳಸುವ ಅಹಾರ ಸಾಮಗ್ರಿಯ  ಬಗ್ಗೆಯೂ ಗಮನಹರಿಸುತ್ತಾರೆ. ಯಾವ ವಿಷಯದಲ್ಲೂ ರಾಜಿ ಮಾಡಿಕೊಳ್ಳದೆ ಇರುವುದರಿಂದಲೇ ಒಂದೇ ರೀತಿಯ ರುಚಿಯನ್ನು ಮೇಂಟೇನ್‌ ಮಾಡಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯ.

ಮೀನು ಚೆನ್ನಾಗಿರಬೇಕು
ಮೀನಿನ ಅಡುಗೆಯಲ್ಲಿ ಮೀನುಗಳೇ ಮುಖ್ಯ. ಅದೇ ಚೆನ್ನಾಗಿಲ್ಲದೇ ಹೋದರೆ ಅಡುಗೆಯಲ್ಲಿ ಎನು ಸಾಮಗ್ರಿ ಬಳಸಿದರೂ ಮೀನೂಟ ರುಚಿಕರ ಎನಿಸದು. ಅದರಲ್ಲೂ ಮೀನುಪ್ರಿಯರು ಮೀನೂಟದ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತಾರೆ. ಒಂಚೂರು ಹೆಚ್ಚುಕಮ್ಮಿಯಾದರೂ ಅವರು ಗ್ರಹಿಸಿಬಿಡುತ್ತಾರೆ. ಹೀಗಾಗಿ ಊರಿನಿಂದಲೇ ಮೀನುಗಳನ್ನು ಆರಿಸಿ ತರಿಸುತ್ತೇವೆ ಎನ್ನುತ್ತಾರೆ ರಾಜೇಶ್‌. ಅಂದಹಾಗೆ ಅವರು ಕುಂದಾಪುರದ ನೇರಲಕಟ್ಟೆಯವರು. ಹೆಚ್ಚಿನ ಸಲ ಅಲ್ಲಿಂದಲೇ ಬಂಗುಡೆ, ಅಂಜಲ್‌, ಕಾಣೆ, ಸೀಗಡಿ, ಸಿಲ್ವರ್‌ ಮೀನು, ಏಡಿ, ಮರವಾಯಿ, ಕಲ್ಲೂರ ಹೀಗೆ ಹಲವಾರು ಜಾತಿಯ ತಾಜಾ ಮೀನುಗಳು ಕರಾವಳಿ ಲಂಚ್‌ ಹೋಂಗೆ ಸರಬರಾಜಾಗುತ್ತವೆ.

ಕರಾವಳಿಯ ಖಾದ್ಯಗಳು
ಇಲ್ಲಿನ ಮೆನುವಿನಲ್ಲಿ ಬಾಂಗಡ ಫ್ರೆç, ಆಂಜಲ್‌ ಫ್ರೆç, ಫಿಶ್‌ ತವಾ ಫ್ರೆç, ಫಿಶ್‌ ಘೀ ರೋಸ್ಟ್‌, ಪಾಂಪ್ಲೆಟ್‌ ಫ್ರೆç, ಕಾಣೆ ಫ್ರೆç ಮರವಾಯಿ ಸುಕ್ಕ, ಏಡಿ ಸುಕ್ಕ, ನೀರು ದೋಸೆ, ಕೋರಿ ರೊಟ್ಟಿ ಮುಂತಾದವನ್ನು ಕಾಣಬಹುದು. ರುಚಿ ಜೊತೆಗೆ ಶುಚಿಯನ್ನು ಕಾಪಾಡಿಕೊಂಡು ಬಂದಿರುವುದು ಮತ್ತು ಕರಾವಳಿಯ ತಾಜಾಮೀನುಗಳಿಂದಲೇ ಖಾದ್ಯಗಳನ್ನು ತಯಾರಿಸುವುದರಿಂದಲೇ ಜನರಿಗೆ ಬಹಳ ಇಷ್ಟವಾಗಿದೆ.

ಕೋಟ್‌
ಕುಂದಾಪುರ, ಮಂಗಳೂರು, ಹೊನ್ನಾವರ, ಭಟ್ಕಳ, ಕಾರವಾರ, ಕುಮಟಾ, ಗೋಕರ್ಣ, ಮುಡೇìಶ್ವರಗಳಿಂದ ಇಲ್ಲಿಗೆ ಮೀನು ತರಿಸಿಕೊಳ್ಳುತ್ತೇವೆ. ಏಕೆಂದರೆ ಅದರ ಊರಿನ ಮೀನುಗಳ ರುಚಿಯ ಬೇರೆ. ಕರಾವಳಿಯ ಮೀನೂಟದ ರುಚಿಯನ್ನೇ ಬೆಂಗಳೂರಿಗರಿಗೂ ನೀಡಬೇಕೆನ್ನುವುದು ನಮ್ಮಾಸೆ.
– ರಾಜೇಶ್‌ ಕುಮಾರ್‌ ಶೆಟ್ಟಿ, ಮಾಲೀಕ

ಸ್ಥಳ: ಕರಾವಳಿ ಲಂಚ್‌ ಹೋಂ, ನಂ.1779, 14ನೇ ಮುಖ್ಯರಸ್ತೆ, ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಸ್ಟೇಷನ್‌ ಹತ್ತಿರ 
ಸಂಪರ್ಕ: 9900690959/9986141386

 ಬಳಕೂರು ವಿ.ಎಸ್‌. ನಾಯಕ 

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.