ನನ್ನನ್ನು ಕಾ(ಪಾ)ಡುವ ಬೆಂಗಳೂರು


Team Udayavani, Apr 15, 2017, 3:59 PM IST

16.jpg

ಒಂದು ಸಲ ಒಬ್ಬ ಪಾಳೆಯಗಾರ ಎಲ್ಲಿಗೋ ಹೋಗುವಾಗ ಹಾದಿ ತಪ್ಪಿಹೋಗುತ್ತದೆ. ಹಸಿದು, ಬಾಯಾರಿ, ಬಳಲಿ ಅಲೆದಾಡುತ್ತಿ ದ್ದಾಗ ಒಂದು ಗುಡಿಸಲು ಕಾಣಿಸುತ್ತದೆ. ಅಲ್ಲಿ ಒಬ್ಬಳು ಮುಪ್ಪಾನು ಮುದುಕಿ ಒಲೆಯ ಮುಂದೆ ಕೂತಿರುತ್ತಾಳೆ. ದಣಿದು ಬಂದ ಪಾಳೆಯಗಾರನನ್ನು ಕೂರಿಸಿ ನೀರು ಕೊಡುತ್ತಾಳೆ. ಹಸಿದವನಿಗೆ ಕೊಡಲು ಮನೆಯಲ್ಲಿ ಏನೂ ಇರುವುದಿಲ್ಲ. ಕಡೆಗೆ, ಮನೆಯಲ್ಲಿದ್ದ ಬೇಯಿಸಿದ ಕಾಳುಗಳನ್ನು ಕೊಡುತ್ತಾಳೆ. ಪಾಳೆಯಗಾರನ ಹಸಿವು ಇಂಗುತ್ತದೆ. ದಣಿವಾರಿಸಿಕೊಂಡವನು ಸುಮ್ಮನೆ ಹಿಂದಿರುಗುವುದಿಲ್ಲ. ತನ್ನ ಹಸಿದ ಹೊಟ್ಟೆಗೆ ಆಹಾರ ಕೊಟ್ಟು ಕಾಪಾಡಿದ ಆ ನೆಲದಲ್ಲಿ ಒಂದು ಊರು ಕಟ್ಟಬೇಕೆಂದು ನಿಶ್ಚಯಿಸಿಕೊಳ್ಳುತ್ತಾನೆ. ಆ ಪಾಳೆಯಗಾರನ ಹೆಸರು ಕೆಂಪೇಗೌಡ! ಆ ಊರು ಬೆಂಗಳೂರು!! ಇದು ಎಲ್ಲರಿಗೂ ಗೊತ್ತು. ಹಾಗಾದರೆ ಆ ಅಜ್ಜಿಯ ಹೆಸರು? ಉಹೂಂ… ಯಾರಿಗೂ ಗೊತ್ತಿಲ್ಲ. ಅದಿರಲಿ, ಕೆಂಪೇಗೌಡ ಮತ್ತೆ ಆ ಅಜ್ಜಿಯ ಮನೆಗೆ ಹೋದನೆ? ಗೊತ್ತಿಲ್ಲ. ಆದರೆ ನನಗೆ ಯಾವಾಗಲೂ ಆ ಅಜ್ಜಿ ಬೆಂಗಳೂರಿನ ರೂಪಕವಾಗಿ ಕಾಣುತ್ತಾಳೆ. ನಾವೆಲ್ಲರೂ ಕೆಂಪೇಗೌಡನ ತುಣುಕುಗಳು. 

ನನಗೆ ನೆನಪು ಬಂದ ಮೇಲೆ ಮೊದಲ ಸಲ ನಾನು ಈ ಬೆಂಗಳೂರಿಗೆ ಕಾಲಿಟ್ಟಾಗ ಅಪ್ಪನ ಮೊಣಕಾಲುಗಳೆತ್ತರ ಇದ್ದೆ. ಆಗೆಲ್ಲಾ ನಮಗೆ ಬೆಂಗಳೂರು ಕನಸಿನ ಊರು. ಆಮೇಲೆ ಬೆಂಗಳೂರಿಗೆ ನೆಲೆಸಲು ಬಂದಾಗ ಇದು ನನ್ನ ಕರ್ಮಭೂಮಿಯೂ ಆಯಿತು. ಇಲ್ಲೇ  ಇರಲು ಬಂದ ಮೊದಲ ಕ್ಷಣದಿಂದಲೂ ಇದು ನನ್ನೂರೇ ಅನ್ನಿಸಿದೆ. ಈ ಊರಲ್ಲಿ ನಾನು ಪಡೆದ ಮೊದಲ ತಿಂಗಳ ಸಂಬಳ 900 ರೂ. ಅಷ್ಟರಲ್ಲೂ ನನ್ನನ್ನು ಪೊರೆದಿದೆ, ಈಗಲೂ ಪೊರೆಯುತ್ತಿದೆ. ಅಲ್ಲಿರುವುದು ನಮ್ಮನೆ, ಇಲ್ಲಿ ಬಂದೆ ಸುಮ್ಮನೆ ಎಂದು ನನಗೆ ಎಂದಿಗೂ ಅನ್ನಿಸಿಲ್ಲ. ಬೆಂಗಳೂರನ್ನು ನಾನೂ ಸಂಪೂರ್ಣವಾಗಿ ಒಳಗೆ ಬಿಟ್ಟುಕೊಂಡಿದ್ದೇನೆ ಹಾಗೆಯೇ ಬೆಂಗಳೂರು ಸಹ ನನ್ನನ್ನು ಒಪ್ಪಿಕೊಂಡಿದೆ. 

ಮೆಜೆಸ್ಟಿಕ್ಕು, ಅಲಂಕಾರ್‌ ಪ್ಲಾಜಾ, ಸ್ಟೇಟ್ಸು, ತ್ರಿವೇಣಿ… ಟ್ರೇನು ಹತ್ತಿ ಬಂದಿಳಿದರೆ ಬೆಂಗಳೂರು ಮಾಯಾಬಜಾರ್‌ ಸಿನಿಮಾದ ಮತ್ತೂಂದು ಮಜಲು. ಯಾರೋ ತೆರೆದಿಟ್ಟ ಪೆಟ್ಟಿಗೆಯಿಂದ ಹೊರಬಿದ್ದ ಕನಸೊಂದು ರಕ್ತಬೀಜಾಸುರನಾಗಿ ಹುಟ್ಟಿ ಭಸ್ಮಾಸುರನಾದಂತೆ ಮೊದಲೆÇÉಾ ಹೆದರಿಕೆ, ಸಂಜೆ ಟ್ರೇನಿನ ಕನವರಿಕೆ. ಟ್ರೇನಿನಿಂದ ಇಳಿದೊಮ್ಮೆ ಇÇÉೇ ನಿಂತೆ. ಅರೆ, ಬೆಂಗಳೂರಿನ ಬಾನಿನಲ್ಲೂ ಇದೆ ಕಾಮನಬಿಲ್ಲು, ಎಂ.ಜಿ ರೋಡಿನ ಕಡಲೆಬೀಜದ ಗಾಡಿಯವನೂ ವಾರಕ್ಕೊಮ್ಮೆ ಸಿಕ್ಕಾಗ ನಕ್ಕು, ನಾ ಹೇಳುವ ಮೊದಲೇ ಪೊಟ್ಟಣ ಕೈಗಿಡುತ್ತಾನೆ ಗಂಟೆಗಟ್ಟಲೆ ಕೂತು ಚಾ ಹೀರುತ್ತಾ ಸ್ನೇಹದ ಓನಾಮ ಕಲಿಸುವ ಕಾಫೀ ಶಾಪು, ಬ್ಲಾಸಮ್ಮು, ಕೋಶೀಸು ಬೆಂಗಳೂರೆಂದರೆ ಮಾಲ…, ಮೆಟ್ರೋ, ಟ್ರಾಫಿಕ್ಕು ಅಷ್ಟೇ ಅಲ್ಲ ಕಣ್ರೀ, ಇಲ್ಲಿ ಬಂದವರಿಗೆ ಬೆಂಗಳೂರು ತೆರೆದಷ್ಟೂ ಬಾಗಿಲು!  

ಇಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚು ಎನ್ನುವಾಗ, ಬೆಂಗಳೂರಿಗೆ  Incoming call  ಗಳೂ ಹೆಚ್ಚು  Incoming  ಕಾಲುಗಳೂ ಹೆಚ್ಚು ಎನ್ನುವುದನ್ನು ಮರೆಯುತ್ತೇವೆ, ಇಲ್ಲಿ ಯಾರು ಯಾರಿಗೂ ಇಲ್ಲ ಅನ್ನುವಾಗ ನಾವೂ ಸಹ ಪಕ್ಕದ ಮನೆಯವರನ್ನು ಮಾತನಾಡಿಸಿ ದಿನಗಳೇ ಉರುಳಿತು ಎನ್ನುವುದನ್ನು ಮರೆಯುತ್ತೇವೆ. ಇಲ್ಲಿ ಎಲ್ಲೆಲ್ಲೂ ಜನ, ಆದರೆ ನಾವು ಸಹ ಆ ಜನವೇ ಎನ್ನುವುದನ್ನು ಮರೆಯುತ್ತೇವೆ. ನಮ್ಮ ಮನಸ್ಸಿನಲ್ಲಿ ನೋವಿಲ್ಲದ, ಸಾವಿಲ್ಲದ ಶಾಂಗ್ರಿಲಾವಾಗಿ ಉಳಿದ ನಮ್ಮ ಬಾಲ್ಯದ ಊರನ್ನು ಮೊದಲ ಪ್ರೇಮದಂತೆ ಎದೆಯೊಳಗಿಟ್ಟುಕೊಂಡು, ಬೆಂಗಳೂರಿನ ಜೊತೆ ಮನಸ್ಸಿಲ್ಲದ ಮನಸ್ಸಿನಿಂದ ಸಂಸಾರ ಮಾಡುತ್ತಾ ಬೆಂಗಳೂರು ನಮ್ಮದಾಗಲಿಲ್ಲ ಎಂದು ಕೊರಗುತ್ತೇವೆ. ಬೆಂಗಳೂರು ಮಾತ್ರ ಮಾತೇ ಆಡದೆ ನಮ್ಮ ತಟ್ಟೆಗೆ ಬೆಂದ ಕಾಳುಗಳನ್ನು ಬಡಿಸುತ್ತಿರುತ್ತದೆ. ಬೆಂಗಳೂರು ಒಂದು ಘಟನೆಯಾಗಿ, ಒಂದು ವ್ಯಕ್ತಿಯಾಗಿ, ಒಂದು ಸಂದರ್ಭವಾಗಿ ಅಲ್ಲಾ ಇಡಿಯಾಗಿ ನನ್ನನ್ನು ಕಾಡುತ್ತದೆ, ಕಾಪಾಡುತ್ತದೆ. 

– ಸಂಧ್ಯಾರಾಣಿ  

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.