ಕಲರ್‌ ಕಲರ್‌ ಯಾವ ಕಲರ್‌


Team Udayavani, Jan 3, 2019, 12:30 AM IST

x-36.jpg

ನದಿಯ ಬಣ್ಣ ಯಾವುದು ಎನ್ನುವ ಪ್ರಶ್ನೆಗೆ ನೀಲಿ, ಹಸಿರು, ಕೆಂಪು ಎಂಬೆಲ್ಲಾ ಉತ್ತರಗಳು ದೊರೆಯಬಹುದು. ಒಂದೊಂದು ಕಡೆ, ಒಂದೊಂದು ಸಮಯದಲ್ಲಿ ನದಿ ಯಾವುದಾದರೊಂದು ಬಣ್ಣವನ್ನು ಹೊಂದಿರುವಂತೆ ತೋರುತ್ತದೆ. ಕೊಲಂಬಿಯಾದಲ್ಲಿರುವ ಈ ನದಿಗೆ ಐದು ಬಣ್ಣಗಳಿವೆ.

ನೀರಿಗೆ ಬಣ್ಣ, ರುಚಿ ಇಲ್ಲ ಎಂದು ನೀವೆಲ್ಲಾ ಶಾಲೆಯಲ್ಲಿ ಓದಿದ್ದೀರಿ. ಆದರೆ ಆ ಮಾತನ್ನು ಪ್ರಶ್ನಿಸುವಂತೆ ಮಾಡುವ ನದಿಯೊಂದು ಕೊಲಂಬಿಯಾದಲ್ಲಿದೆ. ಈ ನದಿಯ ನೀರು, ಒಂದಲ್ಲ, ಎರಡಲ್ಲ, ಐದು ಬಣ್ಣಗಳಿಂದ ಕಂಗೊಳಿಸುತ್ತಿದೆ. ಐದು ಬಣ್ಣಗಳ ನದಿ ಎಂದೂ ಕರೆಯಲ್ಪಡುವ ಈ ನದಿಯ ಹೆಸರು “ಕ್ಯಾನೊ ಕ್ರಿಸ್ಟಲ್‌’ ಅಥವಾ ಸ್ಫಟಿಕದ ಕಾಲುವೆ. ಈ ನದಿ ಕೊಲಂಬಿಯಾದ ಅದ್ಭುತ ತಾಣಗಳಲ್ಲೊಂದು. ಹೆಸರೇ ಸೂಚಿಸುವಂತೆ ಸ್ಫಟಿಕದಂತೆ ಹೊಳೆಯುವ ಶುಭ್ರವಾದ ತಿಳಿನೀರಿನ ಈ ನದಿ, ಸೆರಾನಿಯಾ ಡಿ ಲಾ ಮಕರೆನಾ ಪರ್ವತ ಶ್ರೇಣಿಯಲ್ಲಿ ಹರಿಯುತ್ತದೆ. ಹಳದಿ, ನೀಲಿ, ಹಸಿರು, ಕಪ್ಪು ಮತ್ತು ಕೆಂಪು ಬಣ್ಣಗಳನ್ನು ಮೇಳೈಸಿಕೊಂಡು ಹರಿಯುತ್ತದೆ ಈ ನದಿ. 

ಎಲ್ಲಿಂದ ಬಂದವು 5 ಬಣ್ಣಗಳು?
ಈ ನದಿಯ ಮತ್ತೂಂದು ವೈಶಿಷ್ಟ್ಯವೆಂದರೆ, ಆಗಾಗ ಐದೂ ಬಣ್ಣಗಳು ಸೇರಿ ಕಾಮನಬಿಲ್ಲಿನಂತೆ ಕಾಣಿಸುತ್ತದೆ. ಅಂದ ಹಾಗೆ ನೀರಿಗೆ ಬಣ್ಣ ಇಲ್ಲ ಎನ್ನುವ ಮಾತು ಸತ್ಯ. ಆದರೆ ಈ ನದಿ ವರ್ಣಮಯವಾಗಿ ಕಾಣಿಸುವುದಕ್ಕೆ ಅನೇಕ ಕಾರಣಗಳಿವೆ. ನಿಮ್ಮೂರಿನ ನದಿ ಕೆಲವೊಮ್ಮೆ ಹಸಿರಾಗಿ ಕಂಡರೆ ಕೆಲವೊಮ್ಮೆ ಕೆಂಪಗೆ ಕಾಣುತ್ತದೆ, ಅದು ಬಿಡಿ ಸಾಗರದ ಬಣ್ಣ ನೀಲಿಯಾಗಿ ಕಾಣುತ್ತದೆ, ಇದರ ಅರ್ಥ ನೀರು ವಿವಿಧ ಬಣ್ಣವನ್ನು ಹೊಂದಲು ಅನೇಕ ಕಾರಣಗಳಿರುತ್ತವೆ. ಆಕಾಶ, ಸುತ್ತಮುತ್ತಲ ಪರಿಸರ ನೀರು ಬಣ್ಣ ಹೊಂದಿರುವಂತೆ ಕಾಣಿಸುತ್ತದೆ. ಹಾಗೆಯೇ ಕೊಲಂಬಿಯಾದ “ಕ್ಯಾನೊ ಕ್ರಿಸ್ಟಲ್‌’ ನದಿ ಐದು ಬಣ್ಣಗಳನ್ನು ಹೊಂದಿರುವುದಕ್ಕೆ ಕಾರಣವಿದೆ. ಈ ನದಿಯಲ್ಲಿ ಬೆಳೆಯುವ ಮೆಕೆರೆನಿಯಾ ಕ್ಲಾವಿಗೆರಾ ಎಂಬ ಸಸ್ಯದಿಂದಾಗಿ ನೀರಿನ ಬಣ್ಣ ಕೆಂಪಾಗಿ ಕಾಣಿಸುತ್ತದೆ. ಹಾಗೆಯೇ ನದಿಯಲ್ಲಿರುವ ಕಪ್ಪು ಬಂಡೆಗಳು, ಹಸಿರು ಪಾಚಿ, ನೀಲಿಯಾಗಿ ಕಾಣುವ ನೀರು ಮತ್ತು ಹಳದಿ ಮಣ್ಣು ಈ ನದಿಯನ್ನು ವರ್ಣಮಯವಾಗಿಸಿವೆ. 

ಇಲ್ಲಿ ಮೀನಿಲ್ಲ!
“ಕ್ಯಾನೊ ಕ್ರಿಸ್ಟಲ್‌’ನ ಹರಿವಿನ ವಿಸ್ತಾರ ತುಂಬಾ ದೊಡ್ಡದಿದ್ದು, ಕೆಲವು ಕಡೆ ಜಲಪಾತದಿಂದ ಧುಮ್ಮಿಕ್ಕಿದರೆ, ಇನ್ನೂ ಕೆಲವು ಕಡೆ ಗುಹೆಗಳ ಮೂಲಕ ಹಾದುಹೋಗುತ್ತದೆ. ಅಚ್ಚರಿಯೆಂದರೆ ಈ ನದಿಯಲ್ಲಿ ಮೀನುಗಳಿಲ್ಲ. ಇದು ಈಜುಗಾರರ ಮೆಚ್ಚಿನ ತಾಣವೂ ಇದು. ಜುಲೈ- ನವೆಂಬರ್‌ ತಿಂಗಳು, ಈ ಸ್ಥಳಕ್ಕೆ ಭೇಟಿ ನೀಡಲು ಪ್ರಶಸ್ತವಾದ ಸಮಯ.

ಪುರುಷೋತ್ತಮ್‌

ಟಾಪ್ ನ್ಯೂಸ್

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.